newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವೇಳೆ ಆಸ್ಪತ್ರೆಯಲ್ಲಿ ದರ್ಶನ್ ಭೇಟಿಗೆ ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಟ ದರ್ಶನ್ ಭೇಟಿಗೆ 7 ಕೇರ್ ಟೇಕರ್ಸ್ ಬಿಟ್ಟು ಬೇರೆ ಯಾರಿಗೂ ಭೇಟಿಗೆ ಅವಕಾಶವಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೇಶ್, ತಾಯಿ ಮೀನಾ, ಸಹೋದರ ದಿನಕರ್, ಸಹೋದರಿ, ನಟ ಧನ್ವೀರ್ ಹಾಗೂ ದರ್ಶನ್ ಪರ ವಕೀಲರಿಗೆ ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಲಾಗಿದೆ.
ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ಗೆ ಬೆನ್ನು ನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹೈಕೋರ್ಟ್ ಆರು ವಾರ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಚಿಕಿತ್ಸೆಗಾಗಿ ಶುಕ್ರವಾರ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ದರ್ಶನ್ಗೆ ಸ್ಪೆಷಲ್ ಸೂಟ್ ವ್ಯವಸ್ಥೆ ಮಾಡಲಾಗಿದೆ. ಬಿಜಿಎಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಸ್ಪೆಷಲ್ ರೂಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೂಗಲ್ಗೆ ಭಾರೀ ಸಂಕಷ್ಟ, 20 ಡಿಸಿಲಿಯನ್ ಡಾಲರ್ ದಂಡ, ಕಾರಣವೇನು? ದಂಡ ಪಾವತಿಗೆ ಜಗತ್ತಿನಲ್ಲಿರುವ ಹಣವೂ ಸಾಲದು!
BGS ವಿಐಪಿ ಸೂಟ್ಗೆ ದರ್ಶನ್ ಶಿಫ್ಟ್: ನಟನ ಎಡಗಾಲು ಸ್ಪರ್ಶ ಜ್ಞಾನ ಕಳೆದುಕೊಂಡ್ತಾ? ಡಾಕ್ಟರ್ ಏನಂದ್ರು?
ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!
ನ.30 ರೊಳಗೆ `e-KYC’ ಮಾಡದಿದ್ದರೆ ಮುಂದಿನ ತಿಂಗಳು `ರೇಷನ್’ ಸಿಗಲ್ಲ ..!