newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ರಚನೆಯ ಕಾವು ಜೋರಾಗಿದ್ದು, ಡಿ.ಕೆ. ಶಿವಕುಮಾರ್ ಅವರ ಸಂಪುಟ ಸೇರಲು ಸಚಿವ ಆಕಾಂಕ್ಷಿಗಳ ದಂಡೇ ಸಾಲುಗಟ್ಟಿ ನಿಂತಿದೆ. ವಿವಿಧ ಸಮುದಾಯಗಳು ಹಾಗೂ ಪ್ರಭಾವಿ ನಾಯಕರ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ನೂತನ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ಗರಿಗೆದರಿದೆ. ಮೂಲಗಳ ಪ್ರಕಾರ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹಲವು ಪ್ರಮುಖ ನಾಯಕರ ಹೆಸರುಗಳು ಮುಂಚೂಣಿಯಲ್ಲಿವೆ.
ಮುಸ್ಲಿಂ ಸಮುದಾಯ: 3 ಸ್ಥಾನಗಳಿಗೆ ಭಾರಿ ಪೈಪೋಟಿ
ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್, ತನ್ವೀರ್ ಸೇಠ್, ಸಲೀಂ ಅಹಮದ್ ಹಾಗೂ ಕನಿಜ್ ಫಾತಿಮಾ. ಈ ಪೈಕಿ ಮೂವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಒಲಿಯುವ ಸಾಧ್ಯತೆ ದಟ್ಟವಾಗಿದೆ.
ಲಿಂಗಾಯತ ಶಾಸಕರ ನಡುವೆ ದೊಡ್ಡ ಮಟ್ಟದ ಫೈಟ್
ಅಶೋಕ ಪಟ್ಟಣ, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ, ಬಸವರಾಜ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಯಶವಂತರಾಯಗೌಡ ಪಾಟೀಲ್ ಹಾಗೂ ಅಪ್ಪಾಜಿ ನಾಡಗೌಡ. ಈ ಪಟ್ಟಿಯಲ್ಲಿರುವ ಮೂವರು ಶಾಸಕರಿಗೆ ಸಚಿವ ಭಾಗ್ಯ ಸಿಗುವ ಸಾಧ್ಯತೆಯಿದೆ.
ಒಕ್ಕಲಿಗ ಕೋಟಾ: ಮೂವರಿಗೆ ಒಲಿಯಲಿದೆಯೇ ಅದೃಷ್ಟ?
ಶರತ್ ಬಚ್ಚೇಗೌಡ, ಹೆಚ್.ಸಿ. ಬಾಲಕೃಷ್ಣ (ಮಾಗಡಿ), ಗುಬ್ಬಿ ವಾಸು, ಕೆ.ಎಂ. ಶಿವಲಿಂಗೇಗೌಡ, ಎನ್. ಚೆಲುವರಾಯಸ್ವಾಮಿ ಹಾಗೂ ಪ್ರಿಯಾಕೃಷ್ಣ. ಈ ಪೈಕಿ ಮೂವರಿಗೆ ಸಂಪುಟದಲ್ಲಿ ಚಾನ್ಸ್ ಸಿಗಬಹುದು ಎಂದು ಹೇಳಲಾಗುತ್ತಿದೆ.
ಮಹಿಳಾ ಶಾಸಕಿಯರ ನಡುವೆ ತೀವ್ರ ಸ್ಪರ್ಧೆ
ಆರತಿ ಕೃಷ್ಣ, ಲಕ್ಷ್ಮಿ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ನಯನಾ ಮೋಟಮ್ಮ. ಈ ನಾಯಕಿಯರ ಪೈಕಿ ಇಬ್ಬರಿಗೆ ಸಚಿವ ದರ್ಜೆ ಸಿಗುವ ಲಕ್ಷಣಗಳಿವೆ.
ಒಬಿಸಿ (OBC) ಕೋಟಾದಡಿ ನಾಲ್ವರ ನಡುವೆ ಪೈಪೋಟಿ
ಡಾ. ಅಜಯ್ ಸಿಂಗ್, ಶ್ರೀನಿವಾಸ್ ಮಾನೆ, ಸಂತೋಷ್ ಲಾಡ್ ಹಾಗೂ ಮಂಕಾಳ ವೈದ್ಯ. ಈ ನಾಲ್ವರ ನಡುವೆ ಸಚಿವ ಸ್ಥಾನಕ್ಕಾಗಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ.
ನೂತನ ಸಂಪುಟ ರಚನೆಯಲ್ಲಿ ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಸರಿದೂಗಿಸುವುದು ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಅಂತಿಮವಾಗಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
Cyber Crime ಎಚ್ಚರ..! ವಾಟ್ಸಾಪ್ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ