newsics.com
ಮಾನಂದವಾಡಿ (ಕೇರಳ): ವಯನಾಡಿನ ಪಂಚರಕೊಲ್ಲಿಯಲ್ಲಿ ಮಹಿಳೆಯೊಬ್ಬರನ್ನು ಕೊಂದು ತಿಂದ ನರಭಕ್ಷಕ ಹುಲಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.
ಪಿಲಕ್ಕಾವು ಎಂಬ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಈ ನರಹಂತಕ ಹುಲಿಯ ಮೃತದೇಹವು ಪತ್ತೆಯಾಗಿದ್ದು, ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವೇಳೆ ಮೃತ ರಾಧೆ ಎಂಬ ಮಹಿಳೆಯ ಬಟ್ಟೆಗಳು, ಕಿವಿಯೋಲೆಗಳು ಮತ್ತು ಕೂದಲು ಹುಲಿಯ ಹೊಟ್ಟೆಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ರಾಧಾಳನ್ನು ಕೊಂದ ಹುಲಿ ಇದೇ ಎಂದು ದೃಢಪಡಿಸಿದ್ದಾರೆ.
ಹುಲಿಯ ಕುತ್ತಿಗೆಯ ಸುತ್ತಲೂ ನಾಲ್ಕು ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆ ವೇಳೆ ಗಮನಕ್ಕೆ ಬಂದಿದೆ. ಒಳನಾಡಿನ ಕಾಡಿನಲ್ಲಿ ಮತ್ತೊಂದು ಹುಲಿಯೊಂದಿಗೆ ನಡೆಸಿದ ಎನ್ಕೌಂಟರ್ ವೇಳೆ ಈ ಗಾಯಗಳಾಗಿರಬಹು. ಇದೇ ಗಾಯದಿಂದ ಹುಲಿ ಸತ್ತಿರಬಹುದೆಂದು ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ. ಕೃಷ್ಣನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಡಿನಲ್ಲಿ ಕಸ ಸುರಿಯುವ ಸ್ಥಳದಲ್ಲಿ ಹುಲಿ ಮೊದಲು ದುರ್ಬಲ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದಕ್ಕೂ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ಗಂಟೆಗಳ ಕಾಲ ಅದನ್ನು ಹಿಂಬಾಲಿಸಿದ್ದರು. ಕೆಲವು ಗಂಟೆಗಳ ಬಳಿಕ ಪಿಲಕ್ಕಾವು ಪ್ರದೇಶದಲ್ಲಿ ಅದು ಸತ್ತಿರುವುದು ಕಂಡುಬಂದಿದೆ ಎಂದು ಕೃಷ್ಣನ್ ತಿಳಿಸಿದ್ದಾರೆ.
ಜ.24ರಂದು ಪಂಚರಕೊಲ್ಲಿಯಲ್ಲಿ ಬುಡಕಟ್ಟು ಮಹಿಳೆ ರಾಧಾಳನ್ನು ಅದೇ ಹುಲಿ ಕೊಂದು ಹಾಕಿತ್ತು. ಅರಣ್ಯ ಇಲಾಖೆಯ ತಾತ್ಕಾಲಿಕ ಅರಣ್ಯ ವೀಕ್ಷಕ ಅಪ್ಪಚ್ಚನ್ ಅವರ ಪತ್ನಿ ರಾಧಾ ಅವರು ಅಂದು ಬೆಳಗ್ಗೆ ಕಾಫಿ ಬೀಜ ಕೀಳಲು ಹೋಗಿದ್ದಾಗ ಇದೇ ಹುಲಿ ಅವರ ಮೇಲೆ ದಾಳಿ ಮಾಡಿ ಕೊಂದಿತ್ತು. ದೇಹವನ್ನು ಅರ್ಧ ತಿಂದು ಹಾಕಿದ್ದರಿಂದ ಆರಂಭದಲ್ಲಿ ಯಾರು ಎಂಬುದು ಗೊತ್ತಿರಲಿಲ್ಲ. ತಪಾಸಣೆಗೆ ಬಂದಿದ್ದ ಅಧಿಕಾರಿಗಳು ಅರಣ್ಯ ವೀಕ್ಷಕ ಅಪ್ಪಚ್ಚನ್ ಅವರ ಪತ್ನಿ ರಾಧಾ ಅವರ ದೇಹ ಎಂದು ಪತ್ತೆ ಮಾಡಿದ್ದರು. ಘಟನೆಯ ಬೆನ್ನಲ್ಲೇ ಸ್ಥಳೀಯ ಜನರಲ್ಲಿ ಭಯ ಉಂಟಾಗಿತ್ತು. ಸ್ಥಳೀಯರು ಪ್ರತಿಭಟನೆ ತೀವ್ರಗೊಂಡಿದ್ದರಿಂದ ನರಭಕ್ಷಕ ಹುಲಿ ಗುಂಡಿಕ್ಕಿ ಕೊಲ್ಲಲು ಆದೇಶ ಹೊರಡಿಸಲಾಗಿತ್ತು. ಈ ಹುಲಿಯನ್ನು ಜೀವಂತ ಇಲ್ಲವೇ ಹತ್ಯೆ ಮಾಡಿಯಾದರೂ ಸೆರೆಹಿಡಿಯಬೇಕು ಎಂದು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದರು. ನರಹಂತಕ ಹುಲಿಗಾಗಿ ಹುಡುಕಾಟವೂ ಶುರುವಾಗಿತ್ತು. ಆದರೆ, ಸೋಮವಾರ ಬೆಳಗಿನ ಜಾವ ಪಿಲಕ್ಕಾವು ಪ್ರದೇಶದಲ್ಲಿ ನರಹಂತಕ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ್ದರಿಂದ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.
nabha natesh…ಕ್ಯಾಮೆರಾ ಮುಂದೆ ನಿಂತು ಹಾಟ್ ಪೋಸ್ ಕೊಟ್ಟ ನಟಿ ನಭಾ ನಟೇಶ್
Bigg Boss ತ್ರಿವಿಕ್ರಮ್ ಜೊತೆ ಭವ್ಯ ಮದುವೆ ಫಿಕ್ಸ್! ಕೊನೆಗೂ ಸಿಕ್ತು ಉತ್ತರ
ಗರ್ಲ್ಫ್ರೆಂಡ್ನ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ ಬಾಯ್ಫ್ರೆಂಡ್!