newsics.com/ನ್ಯೂಸಿಕ್ಸ್
ವಿದರ್ಭ: ಕರ್ನಾಟಕ ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಅಲ್ಲೊಂದು ಇಲ್ಲೊಂದು ಮಳೆಯಾಗುತ್ತಿದೆ. ಆದರೆ ಹಲವೆಡೆ ರಣಬಿಸಿಲು, ಬಿಸಿಗಾಳಿಯಿಂದ ಆತಂಕ ಸೃಷ್ಟಿಯಾಗಿದೆ. ಎಲ್ಲೆಡೆ ನೀರು ಬತ್ತಿದೆ. ಕಾಡುಗಳಲ್ಲೂ ನೀರಿಲ್ಲ. ಹೀಗಾಗಿ ಪ್ರಾಣಿಗಳು ಬಾಯಾರಿ, ಬಸವಳಿದ ನೀರು ಹುಡುಕುತ್ತಾ ನಾಡಿಗೆ, ರಸ್ತೆಗೆ ಬರುತ್ತಿವೆ.
ಬಾಯಾರಿದ ಕೋತಿಗಳು ಯಾವುದೇ ದಾರಿ ಕಾಣದೆ ಸಾರಿಗೆ ಬಸ್ ನಿಲ್ಲಿಸಿ ನೀರು ಕೇಳಿದ ಘಟನೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ನಡೆದಿದೆ.
ಖಂಡಲಾ ಘಾಟ್ನಲ್ಲಿ ಘಟನೆ
ಖಂಡಾಲಾ ಘಾಟ್ನ ಪುಸಾದ್ ಬಳಿ ಮಧ್ಯಾಹ್ನ 3 ಗಂಟೆ ವೇಳೆಗೆ ಮಹಾರಾಷ್ಟ್ರ ಸಾರಿಗೆ ಬಸ್ನ್ನು ಹಲವು ಕೋತಿಗಳು ತಡೆದು ನೀರಿಗಾಗಿ ಪರಿತಪಿಸಿದ ಘಟನೆ ನಡೆದಿದೆ.
ಬಸ್ನಲ್ಲಿದ್ದ ಪ್ರಯಾಣಿಕರು ಘಟನೆ ವಿವರಿಸಿದ್ದಾರೆ. ವಾಶಿಂನಿಂದ ಪುಸಾದ್ಗೆ ಪ್ರಯಾಣಿಕರ ಹೊತ್ತು ತೆರಳಿದ್ದ ಬಸ್ ಖಂಡಾಲಾ ಘಾಟ್ನಲ್ಲಿ ಪ್ರಯಾಣಿಸುತ್ತಿತ್ತು. ಕಾಡುಗಳಿಂದ ಕೂಡಿದ ಘಾಟ್ ವಲಯದಲ್ಲಿ ಒಂದೆರಡು ಕೋತಿಗಳು ದಿಢೀರ್ ಆಗಿ ಸಾರಿಗೆ ಬಸ್ ಎದುರಿಗೆ ಬಂದಿವೆ. ರಸ್ತೆಯಲ್ಲಿ ನಿಂತಿದೆ. ಬಸ್ ಹಾರ್ನ್ ಹೊಡೆದರು ಹತ್ತಿರ ಬಂದರೂ ಕೋತಿಗಳು ಕದಲಲಿಲ್ಲ. ಬಸ್ನ್ನೇ ನೋಡುತ್ತಾ ರಸ್ತೆಯಲ್ಲೇ ನಿಂತಿವೆ.
ಬಸ್ ಡ್ರೈವರ್ ತಕ್ಷಣವೇ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಬಳಿಕ ಹಾರ್ನ್ ಹೊಡೆದು ಕೋತಿಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಕಂಡಕ್ಟರ್ ಕೂಡ ಕೋತಿಗಳನ್ನು ಓಡಿಸಲು ಶಬ್ದ ಮಾಡಿದ್ದಾರೆ. ಆದರೆ ರಣ ಬಿಸಿಲಿನಲ್ಲಿ ಕೋತಿಗಳು ಬಸ್ ಪಕ್ಕಕ್ಕೆ ಬಂದಿವೆ. ತಕ್ಷಣವೇ ಪ್ರಯಾಣಿಕರು ಕೋತಿಗಳು ತೀವ್ರ ಅಸ್ವಸ್ಥಗೊಂಡಿರುವುದು ಗಮನಿಸಿದ್ದಾರೆ. ಹೀಗಾಗಿ ಒಂದು ಕೋತಿಗೆ ಪ್ರಯಾಣಿಕನೊಬ್ಬ ನೀರಿನ ಬಾಟಲಿ ನೀಡಿದ್ದಾನೆ.
ಬಾಟಲಿ ನೀರು ಕುಡಿದ ಕೋತಿಗಳು
ನೀರು ಸಿಕ್ಕ ಖುಷಿಯಲ್ಲಿ ಕೋತಿಯೊಂದು ಬಾಟಲಿ ಎತ್ತಿ ಕುಡಿದಿದೆ. ಇತ್ತ ಹಲವು ಕೋತಿಗಳು ಈ ಬಾಟಲಿ ನೀರಿಗಾಗಿ ಜಗಳವಾಡಿವೆ. ಇದೇ ವೇಳೆ ಹಲವು ಪ್ರಯಾಣಿಕರು ತಮ್ಮ ಬಳಿ ಇದ್ದ ನೀರಿನ ಬಾಟಲಿಯ ಮುಚ್ಚಳ ತೆಗೆದು ಕೋತಿಗಳಿಗೆ ನೀಡಿದ್ದಾರೆ. ಕೋತಿಗಳು ಈ ಬಾಟಲಿ ಪಡೆದು ನೀರು ಕುಡಿದಿವೆ. ರಣಬಿಸಿಲಿನಿಂದ ಕಂಗಾಲಾಗಿದ್ದ ಕೋತಿಗಳು ಬಾಯಾರಿ ಬಸವಳಿದಿದ್ದವು. ಕೋತಿಗಳಿಗೆ ನೀರು ಸಿಗುವ ಯಾವುದೇ ದಾರಿ ಉಳಿದಿರಲಿಲ್ಲ. ಪ್ರಯಾಣಿಕರು ನೀರಿನ ಬಾಟಲಿ ಹಿಡಿದು ತೆರಳುತ್ತಿರುವುದನ್ನು ಕೋತಿಗಳು ಗಮನಿಸಿವೆ. ಹೀಗಾಗಿ ದಾರಿ ಬದಿಯಲ್ಲೇ ಕೋತಿಗಳು ನೀರಿಗಾಗಿ ಪರಿತಪಿಸುತ್ತಾ ನಿಂತಿವೆ.
ಕೆಲವೇ ಕ್ಷಣಗಳಲ್ಲಿ ಕಾಡಿನಿಂದ, ಸುತ್ತ ಮುತ್ತಲಿನಿಂದ ಹಲವು ಕೋತಿಗಳು ಆಗಮಿಸಿದೆ. ಪ್ರಯಾಣಿಕರು ತಮ್ಮಲ್ಲಿದ್ದ ಎಲ್ಲಾ ನೀರಿನ ಬಾಟಲಿಗಳನ್ನು ನೀಡಿದ್ದಾರೆ. ಕೆಲ ಪ್ರಯಾಣಿಕರು ಕೋತಿಗಳಿಗೆ ಬಾಟಲಿ ಮೂಲಕ ಕೋತಿಗಳ ಬಾಯಿಗೆ ನೀರು ಸುರಿದಿದ್ದಾರೆ. ಎಲ್ಲಾ ಕೋತಿಗಳು ನೀರು ಕುಡಿದಿದೆ. ಇದೇ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೂ ಬಾಟಲಿ ನೀರುಗಳನ್ನು ಕೋತಿಗಳಿಗೆ ನೀಡಿದ್ದಾರೆ.
Yavatmal – पुसदच्या खंडाळा घाटात तहानलेल्या माकडांचा आटापिटा; प्रवाशांनी पाजले पाणी
सध्या वाढत्या उन्हाळ्याच्या झळा केवळ माणसांनाच नव्हे, तर वन्यप्राण्यांनाही मोठ्या प्रमाणात सोसाव्या लागत असल्याचे ज्वलंत उदाहरण काल दुपारी तीन वाजताच्या सुमारास पुसदच्या खंडाळा घाटात पाहायला… pic.twitter.com/50pxx2ZnMR— Jai Maharashtra News (@JaiMaharashtraN) May 20, 2026
Marriage and divorce ಮದುವೆ ಬಳಿಕ ಮೇಕಪ್ ತೆಗೆದ ವಧು, ಬೆಚ್ಚಿಬಿದ್ದ ವರ! ವಿಚ್ಛೇದನಕ್ಕೆ ಅರ್ಜಿ