newsics.com
ವಯನಾಡು(ಕೇರಳ): ನೀರು, ಜಲಪಾತ, ಬೆಟ್ಟ ಗುಡ್ಡಗಳಿಂದ ಕಂಗೊಳಿಸುತ್ತಿದ್ದ ವಯನಾಡು ಈಗ ಭೂಕುಸಿತ ಹಾಗೂ ಪ್ರವಾಹದಿಂದ ಸ್ಮಶಾನದಂತಾಗಿದೆ. ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ದುರಂತ ಸ್ಥಳದ ಹಲವು ಭಾಗದಲ್ಲಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ.
ಹೀಗಾಗಿ ಭಾರತೀಯ ಸೇನೆ, ಎನ್ಡಿಆರ್ಎಫ್ ಹಾಗೂ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿವೆ. ಇದೀಗ ಸಿಗ್ನಲ್ ಪತ್ತೆಯಾದ ಕಡೆಯಲ್ಲಿ ಶೋಧಕಾರ್ಯ ಆರಂಭಿಸಲಾಗಿದೆ.
ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ದುರಂತ ಸ್ಥಳದ ಹಲವು ಭಾಗದಲ್ಲಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ.
ಹೀಗಾಗಿ ಭಾರತೀಯ ಸೇನೆ, ಎನ್ಡಿಆರ್ಎಫ್ ಹಾಗೂ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ಚುರುಕುಗೊಳಿಸಿವೆ. ಇದೀಗ ಸಿಗ್ನಲ್ ಪತ್ತೆಯಾದ ಕಡೆಯಲ್ಲಿ ಶೋಧಕಾರ್ಯ ಆರಂಭಿಸಲಾಗಿದೆ.
ವಯನಾಡಿನ ಮುಂಡಕ್ಕೈನಲ್ಲಿ ರೇಡಾರ್ ತಪಾಸಣೆ ಆರಂಭಿಸಲಾಗಿದೆ. ಮನೆಗಳು, ಕಟ್ಟಡಗಳು ಇದ್ದ ಜಾಗದಲ್ಲಿ ಇದೀಗ ಕಲ್ಲು ಮಣ್ಣು ಕೆಸರು ತುಂಬಿಕೊಂಡಿದೆ. ಕೆಲ ಮನೆಗಳ ಅವಶೇಷಗಳಡಿಯಲ್ಲಿ ಜನ ಉಸಿರಾಡುತ್ತಿರುವ ಸಿಗ್ನಲ್ ಪತ್ತೆಯಾಗಿದೆ. ಸಿಗ್ನಲ್ ಪತ್ತೆಯಾದ ಸ್ಥಳಗಳನ್ನು ಗುರಿತಿಸಲಾಗಿದೆ. ಈ ಸ್ಥಳಗಳಲ್ಲಿ ಇದೀಗ ಎನ್ಡಿಆರ್ಎಫ್ ತಂಡ ಮಣ್ಣು, ಕಲ್ಲುಗಳನ್ನು ಸರಿಸಿ, ಮನೆ ಅವಶೇಷಗಳನ್ನು ಕೊರೆಯುವ ಪ್ರಯತ್ನ ಮಾಡಲಾಗುತ್ತಿದೆ.
ಸಿಗ್ನಲ್ ಪತ್ತೆಯಾದ ಸ್ಥಳಗಳನ್ನು ಗುರಿತಿಸಲಾಗಿದೆ. ಈ ಸ್ಥಳಗಳಲ್ಲಿ ಇದೀಗ ಎನ್ಡಿಆರ್ಎಫ್ ತಂಡ ಮಣ್ಣು, ಕಲ್ಲುಗಳನ್ನು ಸರಿಸಿ, ಮನೆ ಅವಶೇಷಗಳನ್ನು ಕೊರೆಯುವ ಪ್ರಯತ್ನ ಮಾಡಲಾಗುತ್ತಿದೆ.
ಕೆಲ ಮನೆಗಳ ಭಾಗದಲ್ಲಿ ಈಗಲೂ ಉಸಿರಾಡುತ್ತಿರುವ ಸಿಗ್ನಲ್ ಪತ್ತೆಯಾಗಿದೆ. ಹೀಗಾಗಿ ಮನೆಗಳ ಅಡಿಯಲ್ಲಿ ಹಲವರು ಸಿಲುಕಿದ್ದಾರೆ. ಭೂಕುಸಿತದಲ್ಲಿ ಅವಶೇಷ, ಕಲ್ಲು ಬಂಡೆಗಳಲ್ಲಿ ಹಲವರು ಸಿಲುಕಿದ್ದಾರೆ. ರೇಡಾರ್ನಲ್ಲಿ ಪಲ್ಸ್ ಪತ್ತೆಯಾಗಿದೆ. ನಾಡಿ ಮಿಡಿತದ ಸಿಗ್ನಲ್ ಸಿಕ್ಕಿದೆ. ಸಿಗ್ನಲ್ ಪತ್ತೆಯಾಗಿರುವ ಅಡಿಯಲ್ಲಿ ಜೀವಗಳಿರುವ ಸೂಚನೆ ಸ್ಪಷ್ಟವಾಗಿದೆ. ಹೀಗಾಗಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಕ್ಕದ ಬೆಟ್ಟಗಳಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಪ್ರಾಣ ಉಳಿಸಿಕೊಳ್ಳಲು ಬೆಟ್ಟ ಹತ್ತಿರುವ ಸಾಧ್ಯತೆ ಇರುವ ಕಾರಣ ಕಾಡುಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇನ್ಬು ರಕ್ಷಣಾ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಒಂದೆಡೆ ಆಪ್ತರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಣೆದುರೇ ಕುಟುಂಬಸ್ಥರು ಕೊಚ್ಚಿಕೊಂಡು ಹೋದ ಭೀಕರತೆಯನ್ನು ಅರಗಿಸಿಕೊಳ್ಳಲಾಗದೆ ಹಲವರು ಅಸ್ವಸ್ಥಗೊಂಡಿದ್ದಾರೆ.