newsics.com
ತಿರುಮಲ: ‘ದೇವರ ಪ್ರಸಾದ ರುಚಿಗಲ್ಲ, ಭಕ್ತಿಯ ಭಾಗ’ ಎಂಬ ಮಾತಿದ್ದರೂ ತಿರುಪತಿ ತಿಮ್ಮಪ್ಪನ ಲಡ್ಡು ಸ್ವಾದಿಷ್ಟ ಕಳೆದುಕೊಂಡಿದೆ ಎಂದು ಭಕ್ತರು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ದೂರುತ್ತಿದ್ದರು.
ಇತ್ತೀಚೆಗಂತೂ ಲಡ್ಡು ತನ್ನ ಸ್ವಾದಿಷ್ಟದ ಘಮಲು ಕಳೆದುಕೊಂಡಿದೆ ಎಂಬುದು ಭಕ್ತರ ಒಕ್ಕೊರಲ ಅನಿಸಿಕೆಯಾಗಿತ್ತು. ಆದರೆ ಆಂಧ್ರದಲ್ಲೀಗ ಆಡಳಿತದ ಚುಕ್ಕಾಣಿ ಬದಲಾಗಿದ್ದು, ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಗಾಳಿ ತಿರುಮಲ ತಿರುಪತಿ ಮೇಲೂ ಬಲವಾಗಿಯೇ ಬೀಸುತ್ತಿದೆ. ಸ್ವಚ್ಛತೆಯ ವಿಚಾರವಾಗಿರಬಹುದು, ಗೋವಿಂದನ ಘೋಷಣೆಯೊಂದೇ ಕೇಳಬೇಕು ಎಂಬ ಸಿಎಂ ನಾಯ್ಡು ಅವರ ಆದೇಶವಿರಬಹುದು ಎಲ್ಲವೂ ಭಕ್ತರಿಗೆ ಖುಷಿ ನೀಡುವ ಸುದ್ದಿಯೇ ಆಗಿದೆ.
ಚಂದ್ರಬಾಬು ನಾಯ್ಡು ಎಂಟ್ರಿ- ಜಗನ್ ಎಕ್ಸಿಟ್ ಪರಿಣಾಮವೇನೋ ಎಂಬಂತೆ ತಿರುಪತಿ ಲಡ್ಡು ಮೊದಲಿನಂತೆಯೇ ಸ್ವಾದಿಷ್ಟಭರಿತವಾಗಲಿದೆ ಎಂದು TTD ಸಿಹಿಸುದ್ದಿಯನ್ನೂ ನೀಡಿದೆ.
TTD ನೂತನ ಸಾರಥಿ ಜೆ. ಶ್ಯಾಮಲಾ ರಾವ್ ಅವರು ಗುಣಮಟ್ಟದ ತುಪ್ಪ, ಗುಣಮಟ್ಟದ ಕಡಲೆ ಬೇಳೆ ಮತ್ತು ಗುಣಮಟ್ಟದ ಏಲಕ್ಕಿ ಮತ್ತಿತರ ಗುಣಮಟ್ಟದ ಪರಿಕರಗಳನ್ನು ಬಳಸಿ ಲಡ್ಡುಗಳನ್ನು ರುಚಿಕರವಾಗಿ ತಯಾರಿಸುವಂತೆ ಸೂಚಿಸಿದ್ದಾರೆ.
ತಿರುಮಲದ ಗೋಕುಲಂ ವಿಶ್ರಾಂತಿ ಗೃಹದಲ್ಲಿ ಮಂಡಳಿಯ ಉನ್ನತಾಧಿಕಾರಿಗಳಾದ ವೀರಬ್ರಹ್ಮ ಮತ್ತು ಸಿವಿಎಸ್ಒ ನರಸಿಂಹ ಕಿಶೋರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ ವೇಳೆ ಈ ಸೂಚನೆ ನೀಡಿದ್ದಾರೆ.
250 ಕೋಟಿ ಸಾಲದ ಸುಳಿಯಲ್ಲಿ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕುಟುಂಬ
ಹಾರ್ವರ್ಡ್ ವಿವಿ ಸಂಶೋಧಕರ ವರದಿಗೆ ಬೆಚ್ಚಿಬಿದ್ದ ಜಗತ್ತು: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ!
ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಚಿತ್ರಾಲ್ ರಂಗಸ್ವಾಮಿ
ಚಡ್ಡಿ ಸ್ವಾಮಿ ಪವಾಡ: ಟಾನಿಕ್ ಇಲ್ಲ, ಮಾತ್ರೆ ಇಲ್ಲ, ಈತ ಹೊಡೆದ್ರೆ ಸಾಕು ಕಾಯಿಲೆ ಮಾಯ