newsics.com
ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ(ನ.25) ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ನಡೆಯಲಿದೆ.
ಆಹಾರ ಇಲಾಖೆ ಸ್ಥಳೀಯ ಕಚೇರಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್ ಕಾರ್ಡ್ಗಳ ತಿದ್ದುಪಡಿ ಕಾರ್ಯ ನಡೆಯಲಿದೆ.
ಆಧಾರ್, ಪಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿದವರು ಕಾರ್ಡುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ನೌಕರರೇ, ತೆರಿಗೆ ಪಾವತಿದಾರರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವರು. ಕಾರ್ಡ್ ಹೊಂದಿದವರು ಬಡವರೇ, ಶ್ರೀಮಂತರೇ ಎಂದು ಮನೆ ಪರಿಶೀಲಿಸಿ ಆರ್ಡಿ ನಂಬರ್ ಜತೆಗೆ ದಾಖಲೆ ಪರಿಶೀಲಿಸಲಿದ್ದಾರೆ. ಕಾರ್ಡ್ ಬದಲಾಯಿಸಲು ಕನಿಷ್ಠ 10 ರಿಂದ 15 ದಿನ ಕಾಲಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.
ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡು ರದ್ದಾದವರಿಗೆ ಪರಿಶೀಲನೆ ಬಳಿಕ ತಿದ್ದುಪಡಿ ಕಾರ್ಡ್ ನೀಡಲಾಗುವುದು. ಈಗಾಗಲೇ ಅಂತಹ ಕಾರ್ಡ್ದಾರರು ಪಡಿತರ ಪಡೆದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
Seasonal Health Tips ಚಳಿಗಾಲದಲ್ಲಿ ಹೆಚ್ಚಿದ ಹೃದಯಾಘಾತ, ಪಾರ್ಶ್ವವಾಯು ಪ್ರಕರಣ: ಇದರಿಂದ ಪಾರಾಗಲು ಹೀಗೆ ಮಾಡಿ
Big Boss Kannada 11 | ಅಚ್ಚರಿಯ ಎಲಿಮಿನೇಷನ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಟ ಧರ್ಮ ಕೀರ್ತಿರಾಜ್
Google Map Confusion ನಿರ್ಮಾಣ ಹಂತದ ಸೇತುವೆಯಿಂದ ಬಿದ್ದ ಕಾರು: ಸ್ಥಳದಲ್ಲೇ ಮೂವರ ಸಾವು