Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Shiradi Sai Mandir ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದದೂಟಕ್ಕೆ ಕೂಪನ್: ನಾಳೆಯಿಂದಲೇ ಜಾರಿ
ದೇಶಪ್ರಮುಖ

Shiradi Sai Mandir ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದದೂಟಕ್ಕೆ ಕೂಪನ್: ನಾಳೆಯಿಂದಲೇ ಜಾರಿ

Share
1 Min Read
SHARE

newsics.com
ಶಿರಡಿ: ಭದ್ರತೆಯ ದೃಷ್ಟಿಯಿಂದ ಇಲ್ಲಿನ ಸಾಯಿಬಾಬಾ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದದೂಟಕ್ಕೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಈ ವ್ಯವಸ್ಥೆ ನಾಳೆಯಿಂದಲೇ (ಫೆ.7) ಜಾರಿಯಾಗಲಿದೆ. ಸಾಯಿಬಾಬಾ ದರ್ಶನಕ್ಕೆ ಬರುವ ಭಕ್ತರಿಗೆ ಟೋಕನ್ ವಿಧಾನದ ಮೂಲಕ ಉಚಿತ ಪ್ರಸಾದ ನೀಡಲಾಗುವುದು. ಸಾಯಿ ಪ್ರಸಾದಾಲಯದಲ್ಲಿ ಭಕ್ತರಿಗೆ ಉಚಿತ ಊಟಕ್ಕಾಗಿ ಕೂಪನ್‌ಗಳನ್ನು ನೀಡಲಾಗುವುದು. ಶಿರಡಿಯಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಅಪರಾಧ ಪ್ರಮಾಣ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿದಿನ 50 ರಿಂದ 60 ಸಾವಿರ ಜನರು ಊಟ ಮಾಡುತ್ತಾರೆ. ಶಿರಡಿ ಸಂಸ್ಥಾನದ ಭಕ್ತ ನಿವಾಸದಲ್ಲಿ ಆಹಾರಕ್ಕಾಗಿ ಕೂಪನ್‌ಗಳನ್ನು ಸಹ ನೀಡಲಾಗುವುದು. ಪ್ರಸಾದಾಲಯದಲ್ಲಿ ಕೂಪನ್‌ಗಳನ್ನು ಪಡೆಯಲು ಹೆಚ್ಚುವರಿ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ ಗಾಡಿಲ್ಕರ್ ಹೇಳಿದ್ದಾರೆ.

ಈ ಮೊದಲು ಶಿರಡಿಯಲ್ಲಿ ಉಚಿತ ಊಟಕ್ಕೆ ನೇರ ಪ್ರವೇಶವಿತ್ತು. ಆದರೆ ಇನ್ನು ಕೂಪನ್‌ಗಳನ್ನು ಹೊಂದಿರುವವರಿಗೆ ಮಾತ್ರ ಪ್ರವೇಶ ಅನುಮತಿಸಲಾಗುವುದು ಎಂದು ತಿಳಿಸಿದರು.

ದರೋಡೆ ಮಾಡುವ ಉದ್ದೇಶದಿಂದ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಶಿರಡಿ ಸಾಯಿಬಾಬಾ ಸಂಸ್ಥಾನದ ಇಬ್ಬರು ಉದ್ಯೋಗಿಗಳನ್ನು ಹತ್ಯೆ ಮಾಡಿದ್ದರು.

ಅಲ್ಲದೆ, ಕೆಲವು ದಿನಗಳ ಹಿಂದೆ, ಮಾಜಿ ಸಂಸದ ಮತ್ತು ಬಿಜೆಪಿ ನಾಯಕ ಸುಜಯ್ ವಿಖೆ, ಶಿರಡಿಯಲ್ಲಿ ಉಚಿತ ಊಟವನ್ನು ನಿಲ್ಲಿಸಬೇಕು.‌ ಶಿರಡಿ ದೇವಸ್ಥಾನದೊಳಗೆ ಯಾರ್ ಯಾರೋ ಆಗಮಿಸುತ್ತಾರೆ. ಊಟದ ಕೋಣೆಗೂ ಬರುತ್ತಾರೆ. ಹೀಗಾಗಿ ಅಪಾಯ ಕೂಡ ಹೆಚ್ಚಿದೆ. ಶಿರಡಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಉಚಿತ ಊಟ ನಿಲ್ಲಿಸಬೇಕೆಂದು ಸುಜಯ್ ವಿಖೆ ಒತ್ತಾಯಿಸಿದ್ದರು.

Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?

TAGGED:Coupon to Prasadam at Shirdi Sai Baba Mandir: Enforcement from tomorrow
Share This Article
Facebook Twitter Copy Link Print
Previous Article Fire tragedy ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಇಬ್ಬರು ಸಜೀವ ದಹನ, ಇಬ್ಬರಿಗೆ ಗಾಯ
Next Article Mukesh Ambani ಮುಖೇಶ್ ಅಂಬಾನಿಗಾಗಿ ತಯಾರಾದ ಬುಲೆಟ್ ಪ್ರೂಫ್ ರೋಲ್ಸ್ ರಾಯ್ಸ್ ಕಾರು… ಬೆಲೆ ಎಷ್ಟು?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?