newsics.com
ಉತ್ತರಾಖಂಡ: ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿರುವ ಬದರೀನಾಥ ಧಾಮದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ.
ಬದರೀನಾಥದಲ್ಲಿ ನಾಯಿಗಳು ಬೊಗೊಳೋದಿಲ್ಲವಂತೆ. ಅಷ್ಟೇ ಅಲ್ಲ, ಇಲ್ಲಿ ಸಿಡಿಲು, ಗುಡುಗಿನ ಸದ್ದಿಲ್ಲ. ಬದರೀನಾಥದಲ್ಲಿ, ಮೋಡಗಳಿಂದ ಎಂದಿಗೂ ಗುಡುಗು ಮತ್ತು ಸಿಡಿಲಿನ ಸದ್ದನ್ನು ಕೇಳೋದಕ್ಕೆ ಸಾಧ್ಯವಿಲ್ಲ.
ಭಗವಾನ್ ಶ್ರೀ ಹರಿ ನಾರಾಯಣ ಬದರೀನಾಥ ಧಾಮದಲ್ಲಿ ಏಕಾಗ್ರತೆಯ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಹಾಗಾಗಿ ಪ್ರಕೃತಿಯೂ ಅವನ ಧ್ಯಾನಕ್ಕೆ ಸಹಕರಿಸುತ್ತಿದೆ. ಹಾಗಾಗಿಯೇ ಹರಿಯ ತಪಸ್ಸನ್ನು ಭಂಗಗೊಳಿಸಲು ಇಷ್ಟಪಡದ ಗುಡುಗು, ನಾಯಿ ಮೌನ. ಇಲ್ಲಿ ಸಾಕಷ್ಟುಮಳೆ ಸುರಿದರೂ ಗುಡುಗು, ಸಿಡಿಲಿನ ಸದ್ದೇ ಇರುವುದಿಲ್ಲ.
ಪೌರಾಣಿಕ ನಂಬಿಕೆಗಳ ಪ್ರಕಾರ, ವಿಷ್ಣುವು ಬದರೀನಾಥದಲ್ಲಿ ನಾರಾಯಣನಾಗಿ ಅವತಾರ ತಾಳಿದನು. ಆ ಸಮಯದಲ್ಲಿ, ಅವರು ನಾಯಿಗಳು ಈ ಸ್ಥಳದಲ್ಲಿ ಎಂದಿಗೂ ಬೊಗಳಬಾರದು ಎಂದು ಶಪಿಸಿದರಂತೆ. ಮತ್ತೊಂದು ನಂಬಿಕೆಯೆಂದರೆ ನಾಯಿಗಳು ಈ ಸ್ಥಳದಲ್ಲಿ ದೇವರ ಸೇವಕರು. ಹಾಗಾಗಿಯೇ ನಾಯಿಗಳು ಇಲ್ಲಿ ಶಾಂತಿದೂತರಂತೆ ಮೌನವಾಗಿರುತ್ತವೆ.