newsics.com
ಹೊನ್ನಾವರ(ಉತ್ತರ ಕನ್ನಡ): ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಪ್ರವಾಸಿ ಬಸ್ ಚಾಲಕನ ನಿಯಙತ್ರಣ ತಪ್ಪಿ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69 ಬಾಳೆಗದ್ದೆ ತಿರುವಿನ ಸಮೀಪ ಬಸ್ ಪಲ್ಟಿಯಾಗಿದೆ.
ಗೋಕರ್ಣಕ್ಕೆ ತೆರಳುವ ವೇಳೆ ಹೊನ್ನಾವರದ ಮುಗ್ವಾ ಗ್ರಾಪಂ ವ್ಯಾಪ್ತಿಯ ಬಾಳೆಗದ್ದೆಯ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಗಟಾರದಲ್ಲಿ ಬಿದ್ದಿದೆ. ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಕರೆಂಟ್ ಶಾಕ್ ಅನಾಹುತ ತಪ್ಪಿದೆ. ಬಸ್ನಲ್ಲಿದ್ದ 28 ಪ್ರಯಾಣಿಕರಲ್ಲಿ 22 ಪ್ರಯಾಣಿಕರು ಗಾಯಗೊಂಡಿದ್ದು, ಎಂಟು ಜನರು ತಿವ್ರ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಉಡುಪಿ ಮತ್ತು ಮಂಗಳೂರು, ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕ ರಾಮನಗರ ಜಿಲ್ಲೆ ಕನಕಪುರದ ಬಸ್ ಚಾಲಕ ಶಿವಕುಮಾರ ಎಸ್. ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
kpsc Exam ಕೆಎಎಸ್ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಅಭ್ಯರ್ಥಿಗಳ ಆಕ್ರೋಶ
Health Tips ನಿಮ್ಮ ತುಟಿಗಳನ್ನು ಪಿಂಕ್ ಆಗಿಸಬೇಕೇ?: ಈ ಸಿಂಪಲ್ ಟೀಪ್ಸ್ ಟ್ರೈ ಮಾಡಿ ಸಾಕು
Bigg Boss Kannada ಬಿಗ್ ಬಾಸ್ ಮನೆಯಲ್ಲಿ ಭವ್ಯಗೌಡ ಒಂದೇ ಸಮನೆ ನಾಚಿ ನೀರಾಗಿ ಹೋಗಿದ್ದು ಯಾಕೆ?