newsics.com
ತಿರುವನಂತಪುರಂ: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶೂಟಿಂಗ್ ವಿರಾಮದ ಸಮಯದಲ್ಲಿ ಸಹೋದ್ಯೋಗಿಗಳಿಗೆ ಪ್ರತಿಕ್ರಿಯಿಸದ ಕಾರಣ ರೂಂಗೆ ಹೋದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಹೌದು, ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಭಾನುವಾರ ತಿರುವನಂತಪುರಂನಲ್ಲಿರುವ ತಮ್ಮ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇನ್ನು ನಟ ಕೊನೆಯದಾಗಿ ಎರಡು ದಿನಗಳ ಹಿಂದೆ ಸೆಟ್ನಲ್ಲಿದ್ದರು ಮತ್ತು ಚಿತ್ರೀಕರಣ ಪುನರಾರಂಭಗೊಂಡ ನಂತರ ಹಿಂತಿರುಗಲು ಯೋಜಿಸಿದ್ದರು, ಅಲ್ಲಿಯವರೆಗೆ ಹೋಟೆಲ್ನಲ್ಲಿ ಉಳಿಯಲು ನಿರ್ಧರಿಸಿದ್ದರು.
ದಿಲೀಪ್ ಅವರ ಸಹ ನಟರು ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಳವಳಗೊಂಡ ಅವರು ಅವರನ್ನು ಪರೀಕ್ಷಿಸಲು ಹೋಟೆಲ್ಗೆ ಭೇಟಿ ನೀಡಿದರು. ಕೊಠಡಿಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಆತನ ಶವವನ್ನು ಪತ್ತೆ ಮಾಡಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.