newsics.com
ಬೆಂಗಳೂರು: ದುಡ್ಡಿಗಾಗಿ ನಡುರಾತ್ರಿ ಷೇರು ಮಾರುಕಟ್ಟೆ ಹೂಡಿಕೆದಾರರೊಬ್ಬರನ್ನು ಅಪಹರಿಸಿ ಅಡಿಯಾಳಾಗಿ ಇರಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಸದಾ ಗಿಜಿಗುಡುತ್ತಿರುವ ರಾಜ್ಯ ರಾಜಧಾನಿಯ ಎಂಜಿ ರಸ್ತೆಯಲ್ಲಿ ಇವರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಅಪಹರಣಕಾರರು 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹೂಡಿಕೆದಾರ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದನ್ನು ಗಮನಿಸಿಯೇ ಇವರನ್ನು ಅಪಹರಿಸಿದ್ದ ಇಬ್ಬರನ್ನು ಬಂಧಿಸಲಾಗಿದ್ದು ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ಕೆಲವರಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ.ಈ ಪ್ರಕರಣ ಜೂನ್ 16 ರಂದು ನಡೆದಿದ್ದರೂ ಭಾನುವಾರ ಬೆಳಕಿಗೆ ಬಂದಿದೆ.
ಇವರು 6-7 ತಿಂಗಳಿಂದ ಎಂ ಜಿ ರಸ್ತೆಯ ಹೋಟೆಲ್ ನಲ್ಲಿ ವಾಸವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ರಾಜು ಅವರ ಜೀವನಶೈಲಿ ಗಮನಿಸಿಯೇ ಅಪಹರಣದ ಸೂತ್ರಧಾರ ಅಪಹರಣಕ್ಕೆ ಸಂಚು ರೂಪಿಸಿದ್ದರು.
ಆಗ ಅಪಹರಣಕಾರರು ರಾಜು ಅವರನ್ನು ಕಾರಿನೊಳಗೆ ದಬ್ಬಿ ಬಾಗಿಲು ಹಾಕಿಕೊಂಡು ತೆಲಂಗಾಣದತ್ತ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅವರನ್ನು ತೋಟದ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿ 5 ಕೋಟಿ ರೂಪಾಯಿ ಮತ್ತು ಬಿಟ್ ಕಾಯಿನ್ ಗೆ ಬೇಡಿಕೆ ಇರಿಸಿದ್ದರು. ರಾಜು ಅವರ ಸ್ನೇಹಿತ ನೀಡಿದ ದೂರಿನ ಅನ್ವಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮೊಬೈಲ್ ಸಿಮ್ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ: ಇಂದಿನಿಂದ ಜಾರಿ, ಮೊಬೈಲ್ ಬಳಕೆದಾರರ ಸುರಕ್ಷತೆಗೆ ಟ್ರಾಯ್ ಕ್ರಮ
ಬಾಲಕನ ಕಾಲಿಗೆ ಗಾಯ: ಖಾಸಗಿ ಅಂಗಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು!
ಮನುಷ್ಯರಿಗೆ ಸಿಡಿಲು ಬಡಿಯಲು ಮೊಬೈಲ್ ಫೋನ್ ಕಾರಣವೇ? ಇಲ್ಲಿದೆ ಅಚ್ಚರಿ ಮಾಹಿತಿ!