newsics.com
ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಮಳೆಯ ಆರ್ಭಟ ಜೋರಾಗಿದೆ. ಇತ್ತೀಚೆಗಷ್ಟೇ ನೆರೆ ರಾಜ್ಯದಲ್ಲಿ ಭಾರೀ ಮಳೆ, ಗುಡುಗು-ಮಿಂಚಿನ ಮಧ್ಯೆ 4 ಮಂದಿ ಮರವೊಂದರ ಅಡಿಯಲ್ಲಿ ಕುಳಿತಿದ್ದಾಗ, ಸಿಡಿಲು ಬಡಿದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಐಪಿಎಸ್ ಅಧಿಕಾರಿಯೊಬ್ಬರು ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಇವರಿಗೆ ಸಿಡಿಲು ಬಡಿಯಲು ಕಾರಣ ಮೊಬೈಲ್ ಫೋನ್ ಕಾರಣ ಎಂದು ಹೇಳಿದ್ದರು.
ಐಪಿಎಸ್ ಅಧಿಕಾರಿ ಜುಗಲ್ ಕಿಶೋರ್ ಟ್ವೀಟ್ ಮಾಡಿರುವ ಪ್ರಕಾರ, ‘ಮೃತರ ಫೋನ್ಗಳಲ್ಲಿ ಇಂಟರ್ನೆಟ್ ಆನ್ ಆಗಿತ್ತು, ಆದ್ದರಿಂದ ಈ ಅಪಘಾತ ಸಂಭವಿಸಿದೆ. ಹೀಗಾಗಿ ಗುಡುಗು-ಮಿಂಚು ಇದ್ದಾಗ ಫೋನ್ ಅನ್ನು ತಕ್ಷಣವೇ ಏರ್ಪ್ಲೇನ್ ಮೋಡ್ಗೆ ಹಾಕಬೇಕು. ಏಕೆಂದರೆ ಮಿಂಚು 10 ಸಾವಿರ ವೋಲ್ಟ್ಗಳಿಗಿಂತ ಹೆಚ್ಚು ಎಂಬುದನ್ನು ನೆನಪಿಡಿ’ ಎಂದು ಬರೆದುಕೊಂಡಿದ್ದರು. ನಂತರ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದರು. ಇದೀಗ ಕಿಶೋರ್ ಅವರು ಮಾಡಿರುವ ಟ್ವೀಟ್ ನಿಜವೇ ಎಂಬ ಪ್ರಶ್ನೆ ಎದ್ದಿದೆ.
ಮಿಂಚಿನ ಸಮಯದಲ್ಲಿ ಏನು ಮಾಡಬೇಕು?
ನಿಮ್ಮ ಬಳಿ ಫೋನ್ ಇದೆಯೋ ಇಲ್ಲವೊ ಅದು ಮುಖ್ಯವಲ್ಲ, ಆದರೆ ನೀವು ತೆರೆದ ಜಾಗದಲ್ಲಿ ಇದ್ದರೆ ಮತ್ತು ಸಮೀಪದಲ್ಲಿ ಯಾವುದೇ ಅರ್ಥಿಂಗ್ ಇಲ್ಲದಿದ್ದರೆ ಖಂಡಿತವಾಗಿಯೂ ಸಿಡಿಲು ಬಡಿತದ ಅಪಾಯವನ್ನು ಎದುರಿಸಬೇಕಾಗುತ್ತದೆ.
ಭಾರೀ ಮಳೆ, ಗುಡುಗು ಅಥವಾ ಮಿಂಚು ಬಂದಾಗ, ಫೋನ್ ಅನ್ನು ಚಾರ್ಜ್ ಮಾಡಬೇಡಿ. ವಿದ್ಯುತ್ ಆಘಾತದ ಅಪಾಯವಿರುತ್ತದೆ, ಇದು ಫೋನ್ ಮತ್ತು ಚಾರ್ಜರ್ ಎರಡನ್ನೂ ಹಾನಿಗೊಳಿಸುತ್ತದೆ.
ಮಿಂಚಿನ ಸಮಯದಲ್ಲಿ ಫೋಟೊ ಅಥವಾ ವಿಡಿಯೊ ತೆಗೆಯಲು ಹೋಗಬೇಡಿ. ಇದು ಅಪಾಯಕಾರಿಯಾಗಬಹುದು.
ಮಳೆ ಮತ್ತು ಮಿಂಚಿನ ಸಮಯದಲ್ಲಿ ಲೋಹದ ತಂತಿಯಿಂದ ಸಂಪರ್ಕ ಹೊಂದಿದ ಯಾವುದೇ ಸಾಧನಗಳನ್ನು ಬಳಸಬಾರ