Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Wedding fraud ಏಳು ತಿಂಗಳಲ್ಲಿ 25 ಮದುವೆಯಾದ ಯುವತಿ ಈಗ ಪೊಲೀಸರ ಅತಿಥಿ! ಸರಾಸರಿ ಎಂಟು ದಿನಕ್ಕೊಂದು ಮದುವೆ!
ದೇಶಪ್ರಮುಖ

Wedding fraud ಏಳು ತಿಂಗಳಲ್ಲಿ 25 ಮದುವೆಯಾದ ಯುವತಿ ಈಗ ಪೊಲೀಸರ ಅತಿಥಿ! ಸರಾಸರಿ ಎಂಟು ದಿನಕ್ಕೊಂದು ಮದುವೆ!

Share
2 Min Read
SHARE

newsics.com

ಭೋಪಾಲ್: ಓರ್ವ ಯುವತಿ ಕೇವಲ ಏಳು ತಿಂಗಳ ಅವಧಿಯಲ್ಲಿ 25 ಜನರನ್ನು ಮದುವೆಯಾಗಿದ್ದಲ್ಲದೆ ಚಿನ್ನಾಭರಣಗಳನ್ನು ದೋಚಿದ್ದಾಳೆ.

ಯುವತಿಯ ಈ ಕೃತ್ಯವು 2015ರ ಬಾಲಿವುಡ್ ಚಿತ್ರ ‘ಡಾಲಿ ಕಿ ಡೋಲಿ’ಯಲ್ಲಿನ ಸೋನಂ ಕಪೂರ್ ಪಾತ್ರದಂತೆ ಇದೆ.

23 ವರ್ಷದ ಅನುರಾಧಾ ಪಾಸ್ವಾನ್ ಎಂಬ ಯುವತಿಯನ್ನು ರಾಜಸ್ಥಾನದ ಸವಾಯಿ ಮಾಧೋಪುರ ಪೊಲೀಸರು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ.

ವಿವಾಹವಾದ ಕೆಲವೇ ದಿನಗಳ ನಂತರ ಚಿನ್ನಾಭರಣ, ಹಣ, ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಕದ್ದು ಓಡಿಹೋಗುತ್ತಿದ್ದ ಈಕೆ ಈಗ ಪೊಲೀಸರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.

ಅನುರಾಧಾ ಪಾಸ್ವಾನ್ ತನ್ನ ಮದುವೆ ವಂಚನೆಯನ್ನು ಒಂದು ಸಂಘಟಿತ ಜಾಲದೊಂದಿಗೆ ನಡೆಸುತ್ತಿದ್ದಳು ಎನ್ನಲಾಗಿದೆ. ಅದರಂತೆ, ಈ ಜಾಲದಲ್ಲಿ ರೋಷ್ಣಿ, ರಘುಬೀರ್, ಗೋಲು, ಮಜ್ಬೂತ್ ಸಿಂಗ್ ಯಾದವ್, ಮತ್ತು ಅರ್ಜನ್ ಎಂಬ ಇತರ ಆರೋಪಿಗಳು ಭಾಗಿಯಾಗಿದ್ದರು.

ಈ ವಂಚನೆಯ ಜಾಲವು ಸವಾಯಿ ಮಾಧೋಪುರದ ನಿವಾಸಿಯೊಬ್ಬರಾದ ವಿಷ್ಣು ಶರ್ಮಾ ಎಂಬುವರ ದೂರಿನಿಂದ ಬಯಲಿಗೆ ಬಂದಿದೆ.

ಈ ಗುಂಪು ಸಣ್ಣ ಪಟ್ಟಣಗಳಲ್ಲಿ ವಿವಾಹಕ್ಕಾಗಿ ಹತಾಶರಾಗಿರುವ ಯುವಕರನ್ನು ಗುರಿಯಾಗಿಸಿಕೊಂಡು ಮದುವೆಯ ನಾಟಕವಾಡುತ್ತಿತ್ತು ಎನ್ನಲಾಗಿದೆ. ಇದರೊಂದಿಗೆ ವಾಟ್ಸ್ಯಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಂಭಾವ್ಯ ವಧುವಿನ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಇದಕ್ಕಾಗಿ ₹2 ಲಕ್ಷದಿಂದ ₹5 ಲಕ್ಷದವರೆಗೆ ಶುಲ್ಕ ವಿಧಿಸಲಾಗುತ್ತಿತ್ತು.

ಅನುರಾಧಾ ಕೆಲ ಸಮಯ ವರನೊಂದಿಗೆ ಕಾನೂನುಬದ್ಧವಾಗಿ ನೋಂದಾಯಿತ ವಿವಾಹವನ್ನು ನಡೆಸುತ್ತಿದ್ದಳು. ಇದರಿಂದ ಯಾವುದೇ ಸಂದೇಹಕ್ಕೆ ಆಸ್ಪದ ಇರಲಿಲ್ಲ. ಆದರೆ, ವಿವಾಹವಾದ ಕೆಲವೇ ದಿನಗಳಲ್ಲಿ, ರಾತ್ರಿಯ ವೇಳೆಯಲ್ಲಿ ಚಿನ್ನ, ಹಣ, ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದು ಓಡಿಹೋಗುತ್ತಿದ್ದಳು.

ಅನುರಾಧಾ ಸರಾಸರಿ ಪ್ರತಿ 8 ದಿನಗಳಿಗೊಮ್ಮೆ ಹೊಸ ವಿವಾಹವಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾನ್ಪುರ ಪೊಲೀಸ್ ಠಾಣೆಯ ತನಿಖಾಧಿಕಾರಿ ಮೀತಾ ಲಾಲ್ ಅವರ ಪ್ರಕಾರ, ಅನುರಾಧಾ ವಧುವಿನಂತೆ ನಟಿಸಿ, ಕಾನೂನು ದಾಖಲೆಗಳನ್ನು ಬಳಸಿ ಮದುವೆಯ ನಾಟಕವಾಡುತ್ತಿದ್ದಳು. ಕೆಲ ದಿನಗಳ ಕಾಲ ಅಲ್ಲಿಯೇ ಇದ್ದು, ರಾತ್ರಿಯ ನೆಪದಲ್ಲಿ ಕದ್ದ ಚಿನ್ನ, ನಗದು ಮತ್ತು ಎಲೆಕ್ಟ್ರಾನಿಕ್ಸ್‌ಗಳೊಂದಿಗೆ ಕಣ್ಮರೆಯಾಗುತ್ತಿದ್ದಳು ಎಂದರು.

ಸವಾಯಿ ಮಾಧೋಪುರ ನಿವಾಸಿ ವಿಷ್ಣು ಶರ್ಮಾ ಮೇ 3 ರಂದು ನೀಡಿದ ದೂರಿನ ನಂತರ ಈ ವಂಚನೆ ಬೆಳಕಿಗೆ ಬಂದಿದೆ. ಶರ್ಮಾ ಅವರು ಸುನೀತಾ ಮತ್ತು ಪಪ್ಪು ಮೀನಾ ಎಂಬ ಇಬ್ಬರು ಏಜೆಂಟರಿಗೆ 2 ಲಕ್ಷ ರೂ.ಗಳನ್ನು ಪಾವತಿಸಿದ್ದಾಗಿ, ಅವರು ತನಗೆ ಸೂಕ್ತವಾದ ಮದುವೆಯನ್ನು ಏರ್ಪಡಿಸುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.

ಅನುರಾಧಾಳನ್ನು ಆದರ್ಶ ವಧುವಾಗಿ ಬಿಂಬಿಸಿದ ನಂತರ ಏಪ್ರಿಲ್ 20ರಂದು ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವನ್ನು ನೆರವೇರಿಸಲಾಯಿತು. ಕೆಲವೇ ದಿನಗಳ ನಂತರ ಅಂದರೆ ಮೇ 2 ರಂದು ಅವಳು ಚಿನ್ನಾಭರಣಗಳೊಂದಿಗೆ ಪರಾರಿಯಾಗುವಾಗ ಸಿಕ್ಕಿಬಿದ್ದಿದ್ದಾಳೆ.

Viral Video: ಟ್ರೇನ್‌ನಲ್ಲಿ ಪ್ರೇಮಿಗಳ ಸರಸ – ರೊಚ್ಚಿಗೆದ್ದ ಪ್ರಯಾಣಿಕರು, ವೈರಲ್ ವಿಡಿಯೋ ನೋಡಿ

ನೇಣು ಬಿಗಿದು ಜೀವ ಕಳೆದುಕೊಂಡ ಸಬ್‌ ಇನ್ಸ್‌ಪೆಕ್ಟರ್‌ ಪತ್ನಿ

ಮದವೇರಿದ ಗಜರಾಜನ ಪುಂಡಾಟಿಕೆಗೆ ಕಾರು ನುಜ್ಜುಗುಜ್ಜು

TAGGED:Young woman arrested for marrying 25 times in seven months
Share This Article
Facebook Twitter Copy Link Print
Previous Article Rain ರಾಜ್ಯಾದ್ಯಂತ ಅಬ್ಬರಿಸಿದ ಮಳೆ:ಧಾರವಾಡದಲ್ಲಿ ಸಿಡಿಲು ಬಡಿದು ಯುವಕ ಸಾವು
Next Article ಜೈಲಿನಲ್ಲಿ ಮತ್ತೆ ಮಾರಾಮಾರಿ : ಕೈದಿಗಳ ಮಧ್ಯೆ ಹೊಡೆದಾಟ

Popular Posts

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

2 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?