ಮದವೇರಿದ ಗಜರಾಜನ ಪುಂಡಾಟಿಕೆಗೆ ಕಾರು ನುಜ್ಜುಗುಜ್ಜು

newsics.com ಬೆಳಗಾವಿ; ಮದವೇರಿದ ಆನೆಯೊಂದು ಮನೆ ಆವರಣದಲ್ಲಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಘಟನೆ ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ಮಧ್ಯೆರಾತ್ರಿ ನಡೆದಿದೆ. ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿರುವ ಡಾ. ನಿರಂಜನ್ ಕದಮ್ ಎಂಬವರ ಮನೆ ಆವರಣಕ್ಕೆ ನುಗ್ಗಿದ ಆನೆ, ಅಲ್ಲಿಯೇ ಪಾರ್ಕ್‌ ಮಾಡಿದ್ದ ಕಾರನ್ನು ಎತ್ತಿ ಬೀಸಾಕಿ ಜಖಂಗೊಳಿಸಿದೆ. ಕದಮ್ ಅವರ ಮನೆಯಲ್ಲಿದ್ದ ಗೋವಾದ ಮಡಗಾಂವ‌ ಮೂಲದ ಸಂಬಂಧಿಕರನ್ನು ಕರೆದುಕೊಂಡು ಹೋಗಲು ಬಂದಿದ್ದ ಸಚೀನ್ ಪಾಟೀಲ ಎಂಬವರ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜು ಆಗಿದೆ. ಬೆಳಗಿನ ಜಾವ 1-30ರ ಸುಮಾರಿಗೆ ಈ … Continue reading ಮದವೇರಿದ ಗಜರಾಜನ ಪುಂಡಾಟಿಕೆಗೆ ಕಾರು ನುಜ್ಜುಗುಜ್ಜು