newsics.com
ಬೆಳಗಾವಿ; ಮದವೇರಿದ ಆನೆಯೊಂದು ಮನೆ ಆವರಣದಲ್ಲಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿದ ಘಟನೆ ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ಮಧ್ಯೆರಾತ್ರಿ ನಡೆದಿದೆ.
ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿರುವ ಡಾ. ನಿರಂಜನ್ ಕದಮ್ ಎಂಬವರ ಮನೆ ಆವರಣಕ್ಕೆ ನುಗ್ಗಿದ ಆನೆ, ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರನ್ನು ಎತ್ತಿ ಬೀಸಾಕಿ ಜಖಂಗೊಳಿಸಿದೆ.
ಕದಮ್ ಅವರ ಮನೆಯಲ್ಲಿದ್ದ ಗೋವಾದ ಮಡಗಾಂವ ಮೂಲದ ಸಂಬಂಧಿಕರನ್ನು ಕರೆದುಕೊಂಡು ಹೋಗಲು ಬಂದಿದ್ದ ಸಚೀನ್ ಪಾಟೀಲ ಎಂಬವರ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜು ಆಗಿದೆ.
ಬೆಳಗಿನ ಜಾವ 1-30ರ ಸುಮಾರಿಗೆ ಈ ಆನೆ ದಾಳಿ ನಡೆಸಿದ್ದ, ದಾಳಿಗೆ ಕಾರು ಗುರುತು ಸಿಗದಂತಾಗಿದೆ. ಅಲ್ಲದೇ, ಮನೆಯ ಬಳಿಯಿದ್ದ ಎರಡು ಸಿಂಟೆಕ್ಸ್ ನೀರಿನ ಟ್ಯಾಂಕುಗಳನ್ನು ಕೂಡ ಒಡೆದು ಹಾಕಿರುವ ಆನೆ ಪುಂಡಾಟ ಮೆರೆದಿದ್ದಾನೆ.
ಈ ಘಟನೆಯಿಂದ ಸುತ್ತ ಮುತ್ತಲಿನ ಪರಿಸರದಲ್ಲಿ ಆತಂಕ ಮನೆ ಮಾಡಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳುನ್ನು ಒತ್ತಾಯಿಸಿದ್ದಾರೆ.