newsics.com
ದಾವಣಗೆರೆ: ಸೇಬನ್ನು ಹೆಚ್ಚಾಗಿ ಕಾಶ್ಮೀರ, ಹಿಮಾಚಲ ಪ್ರದೇಶ ಸೇರಿದಂತೆ ಈಶಾನ್ಯ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಆದರೆ ಇಲೊಬ್ಬ ರೈತ ಬಯಲು ಸೀಮೆಯ ಮಣ್ಣಿನಲ್ಲಿ ಸೇಬನ್ನು ಬೆಳೆದು ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ನಿವಾಸಿ ರೈತ ರುದ್ರಮುನಿ ಅವರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೂಡಲಮಾಚಿಕೆರೆ ಗ್ರಾಮದ ತಮ್ಮ 1.25 ಎಕರೆ ಜಮೀನಿನಲ್ಲಿ ಮೂರು ತಳಿಯ ಸೇಬು ಬೆಳೆದು ಹುಬ್ಬೇರಿಸುವ ಸಾಧನೆ ಮಾಡಿದ್ದಾನೆ
ಜಮೀನಿನಲ್ಲಿ ಒಟ್ಟು 550 ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿ ನಾಟಿ ಮಾಡಿ 17 ತಿಂಗಳು ಉರುಳಿದ್ದು, ಈಗಾಗಲೇ ಗೊಂಚಲು ಕಾಯಿ ಬಿಟ್ಟಿದೆ. ಈಗಾಗಲೇ ಗೊಂಚಲು ಗೊಂಚಲು ಸೇಬು ಕಾಯಿಗಳು ಬಿಟ್ಟಿವೆ. ಇನ್ನೇನು ಮೇ ತಿಂಗಳ ಕೊನೆಯಲ್ಲಿ ರೈತನಿಗೆ ಭರಪೂರ ಫಸಲು ಸಿಗಲಿದೆ.
ಮೇ ಅಂತ್ಯಕ್ಕೆ ಕಟಾವು ಮಾಡಲಾಗುತ್ತದೆ. ಬರೋಬ್ಬರಿ 500 ಕೆ.ಜಿ ಫಸಲಿನ ನಿರೀಕ್ಷೆ ಇದೆ. ಒಂದು ಕೆಜಿಗೆ ನೂರು ರೂಪಾಯಿ ಯಂತೆ ಬೆಲೆ ಸಿಗಬಹುದು. 1.25 ಎಕರೆಯಲ್ಲಿ ಆ್ಯಪಲ್ ಬೆಳೆದಿದ್ದೇನೆ. 550 ಗಿಡ ಹಾಕಿದ್ದು, ಜ್ಯೋತಿಪ್ರಕಾಶ್ ಎಂಬುವರ ನರ್ಸರಿಯಿಂದ ಸಸಿ ತರಲು 1.25 ಲಕ್ಷ, ಸಸಿ ಹಾಕಲು 25 ಸಾವಿರ ರೂ. ಖರ್ಚಾಗಿದೆ. ಇದಕ್ಕೂ ಫಂಗಸ್ ರೋಗ ಬರುತ್ತದೆ. ಗಿಡ ಮೇಲಿಂದ ಒಣಗಿಕೊಂಡು ಬರುವುದೇ ಫಂಗಸ್. ಡಿಸೆಂಬರ್ ಚಳಿಗಾಲದಲ್ಲಿ ವೇಳೆ ಬ್ರೂನಿಂಗ್ (ಕಟಿಂಗ್) ಮಾಡುತ್ತೇವೆ. ಕಾಯಿ ಆಗಿ ಮೇ ತಿಂಗಳು ಕೊನೆಯಲ್ಲಿ ಫಸಲು ಬರಲಿದೆ. ನಮಗೆ ಒಂದು ಕೆ.ಜಿಗೆ ನೂರು ರೂಪಾಯಿ ಸಿಗಬಹುದೆಂದು ಅಂದಾಜು ಇದೆ. ಬೆಳೆದಿರುವ ಸೇಬು ಕೈ ಹಿಡಿಯಲಿದೆ ರೈತ ರುದ್ರಮುನಿ ಹೇಳಿದ್ದಾರೆ.
https://www.newsics.com/2025/03/29/brothers-who-murdered-a-young-man-for-loving-his-younger-brother/