newsics.com
ನವದೆಹಲಿ: ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಮುಂಬೈ ಮೂಲದ ಹಣಕಾಸು ಸಲಹೆಗಾರ ಮತ್ತು ಅವರ ಕಂಪನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಸುಮಾರು 37 ಕೋಟಿ ರೂಪಾಯಿ ನಗದು ಹೊರತುಪಡಿಸಿ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ಠೇವಣಿಗಳನ್ನು ವಶಪಡಿಸಿಕೊಂಡಿದೆ.
ಪೊಂಜಿ ಯೋಜನೆ ಮೂಲಕ 600 ಕೋಟಿ ರೂ.ಗಳನ್ನು ವಂಚಿಸಿರುವ ಸಂಬಂಧ ಪ್ರಕರಣ ದಾಖಲಾಗಿದೆ.
ಅಂಬರ್ ದಲಾಲ್ ಮತ್ತು ಅವರ ಕಂಪನಿ ರಿಟ್ಜ್ ಕನ್ಸಲ್ಟೆನ್ಸಿ ಸರ್ವಿಸಸ್ ವಿರುದ್ಧ ಜೂನ್ 21 ರಂದು ಮೆಟ್ರೋಪಾಲಿಟನ್ ನಗರದಲ್ಲಿ ದಾಳಿ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫೆಡರಲ್ ಏಜೆನ್ಸಿ ತಿಳಿಸಿದೆ.
ಚಾರ್ಟರ್ಡ್ ಅಕೌಂಟೆಂಟ್ ಮತ್ತು ಅವರ ಕಂಪನಿಯು ಹೆಚ್ಚಿನ ಆದಾಯದ ಭರವಸೆ ನೀಡಿ ಪೊಂಜಿ ಸ್ಕೀಮ್ ಮೂಲಕ ಹೂಡಿಕೆದಾರರಿಂದ ಹಣವನ್ನು ತೆಗೆದುಕೊಂಡಿದ್ದಕ್ಕಾಗಿ ಮುಂಬೈ ಪೋಲೀಸರು ಎಫ್ಐಆರ್ ದಾಖಲಿಸಿದ್ದು, ಈಗ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಆರಂಭಿಕ ರಿಟರ್ನ್ಸ್ ನೀಡಿದ ನಂತರ ಆರೋಪಿ ದಲಾಲ್ ಈ ಹಣದೊಂದಿಗೆ ಪರಾರಿಯಾಗಿದ್ದು,
ದಲಾಲ್ 1,300 ಹೂಡಿಕೆದಾರರಿಂದ 600 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ. ದಲಾಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಇಡಿ ಹೇಳಿದೆ.
ಧೂಳ್ ಎಬ್ಬಿಸಾವ ಹಾಡಿನಲ್ಲಿ ‘ಗೌರಿ’ಹಾಟ್ ಜೋಡಿ:ಸಾಂಗ್ ಸಖತ್ ಟ್ರೆಂಡಿಂಗ್
ನನ್ನಿಂದ ತಪ್ಪಾಗಿದೆ, ಯುವ ಹೇಳಿದ್ದಕ್ಕೆ ಮುಂದುವರೆದೆ… ಸಪ್ತಮಿ ಗೌಡ ಆಡಿಯೋ ವೈರಲ್!