newsics.com
ಉದಕಮಂಡಲ(ತಮಿಳುನಾಡು): ಊಟಿಯಲ್ಲಿ ತಾಪಮಾನ ಶೂನ್ಯಕ್ಕೆ ತಲುಪಿದೆ. ಇದೇ ವೇಳೆ ಊಟಿ ಸನಿಹದ ಎವಲಾಂಚ್ ಎಂಬಲ್ಲಿ ತಾಪಮಾನ -2 ಡಿಗ್ರಿಗೆ ಕುಸಿದಿದೆ. ಊಟಿ, ಕಂಥಲ್, ಥಲೈಕುಂಥ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಿವೆ.
ಇದರಿಂದ ಜನರು ಪರದಾಡುವಂತಾಗಿದೆ. ಅತ್ತ ವಿಪರೀತ ಚಳಿಯಿಂದಾಗಿ ಟೀ ತೋಟಗಳಿಗೆ ಹಾನಿಯಾಗುತ್ತಿದ್ದು, ಬೆಳೆಗಾರರು ಚಿಂತಿತರಾಗಿದ್ದಾರೆ. ಈ ಚಳಿ ಇನ್ನೂ ಕೆಲ ದಿನಗಳ ಕಾಲ ಹೀಗೆಯೇ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಉತ್ತರ ಭಾರತವೂ ಚಳಿಯಿಂದ ನಡುಗುತ್ತಿದೆ ಕಾಶ್ಮೀರದಲ್ಲಿ ಮೈನಸ್ 7.8, ರಾಜಸ್ಥಾನದಲ್ಲಿ 2.5, ಹರ್ಯಾಣದಲ್ಲಿ 5 ಡಿಗ್ರಿ, ದಿಲ್ಲಿಯಲ್ಲಿ 10.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡರೆ ಕ್ಯಾಶ್ಲೆಸ್ ಟ್ರೀಟ್ಮೆಂಟ್: ಸಚಿವ ಗಡ್ಕರಿ ಘೋಷಣೆ
Severe cold in state ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ ಮೂರು ದಿನ ಭಾರೀ ಚಳಿ