newsics.com/ನ್ಯೂಸಿಕ್ಸ್
ಬೆಂಗಳೂರು: ಯುವ ಕವಯಿತ್ರಿ ಹಾಗೂ ಲೇಖಕಿ ಅಮನ ಜೆ ಕುಮಾರ್ ಅವರ 5ನೇ ಕೃತಿ “The Mystical Waves”ನ್ನು ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಬಿಡುಗಡೆ ಮಾಡಿದರು.
ನೀವೂ ಮೊಬೈಲ್ ತಲೆ ಹತ್ತಿರ ಇಟ್ಟುಕೊಂಡು ಮಲಗುತ್ತೀರಾ? ಹಾಗಾದ್ರೆ ಎಚ್ಚರವಹಿಸಿ
ಬೆಂಗಳೂರು ಮೂಲದ ಅಮನ ಜೆ ಕುಮಾರ್ ಅವರ ಈ ಹೊಸ ಕೃತಿ ಕವನ ಸಂಕಲನವಾಗಿದ್ದು, ಜೀವನ ಪಯಣ, ಅನುಭವ, ನಿರೀಕ್ಷೆ ಹಾಗೂ ಭಾವನೆಗಳ ಸಂವೇದನಾತ್ಮಕ ಅಭಿವ್ಯಕ್ತಿಯನ್ನು ಒಳಗೊಂಡಿದೆ.
ಬ್ಲ್ಯಾಕ್ಔಟ್ ಕವನಗಳು ಮತ್ತು ಸಾನೆಟ್ಗಳ ಸಮನ್ವಯದಲ್ಲಿ ಮೂಡಿಬಂದಿರುವ ಈ ಕೃತಿ ಓದುಗರನ್ನು ಚಿಂತನೆಗೆ ದೂಡುವಂತಿದೆ. ಕಡಿಮೆ ಪದಗಳಲ್ಲಿ ಆಳವಾದ ಅರ್ಥವನ್ನು ವ್ಯಕ್ತಪಡಿಸುವ ಶೈಲಿ ಈ ಕೃತಿಯ ವಿಶೇಷತೆಯಾಗಿದೆ.
ಈ ಕೃತಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಮುನ್ನುಡಿ ಬರೆದಿದ್ದಾರೆ. ಅಮನ ಜೆ ಕುಮಾರ್ ಅವರು ಇತ್ತೀಚೆಗೆ ಜಯನಗರದ ಆರ್.ವಿ. ಪಿಯು ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದ್ದಾರೆ. ಅವರು ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಂದರೆ ಕೇವಲ 11ನೇ ವಯಸ್ಸಿನಲ್ಲಿ ಕವನ ಹಾಗೂ ಪುಸ್ತಕ ಬರವಣಿಗೆ ಆರಂಭಿಸಿದ್ದರು.
ಇದುವರೆಗೆ ಅವರ ನಾಲ್ಕು ಕೃತಿಗಳು ಪ್ರಕಟಗೊಂಡಿದ್ದು, ಅವುಗಳಲ್ಲಿ ಮೂರು ಇಂಗ್ಲಿಷ್ ಹಾಗೂ ಒಂದು ಹಿಂದಿ ಭಾಷೆಯಲ್ಲಿವೆ. “Echoes of Soulful Poems”, “World Amidst the Words”, “Lafzon Ki Mehphil” ಮತ್ತು “Galore of Mysteries” ಕೃತಿಗಳು ಓದುಗರ ಮೆಚ್ಚುಗೆ ಪಡೆದಿವೆ.
ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಮನ ಜೆ ಕುಮಾರ್ ಅವರಿಗೆ India Book of Records, Asia Book of Records, Golden Book of World Records ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಮಾನ್ಯತೆಗಳು ಲಭಿಸಿವೆ.
Sprouted Potatoes ಮೊಳಕೆ ಬಂದ ಆಲೂಗಡ್ಡೆ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ.!