newsics.com/ನ್ಯೂಸಿಕ್ಸ್
ಪ್ರೀತಿಯ ವಿಚಾರಕ್ಕೆ ತಂದೆಯಿಂದಲೇ ಮಗಳ ಕೊಲೆ ನಡೆದಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದ ಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಬಾಲಕಿ ಮೇಘನ ಸಂಬಂಧಿಯನ್ನು ಪ್ರೀತಿಸಿದಳು. ಇದನ್ನು ತಂದೆ ತಿಮ್ಮರಾಯಪ್ಪ ವಿರೋಧಿಸಿ ಮೇಘನಾಳನ್ನ ಭೀಕರವಾಗಿ ಕೊಲೆ ಮಾಡಿದ್ದ. ಕಲ್ಲು ಎತ್ತಿಹಾಕಿ ಮಗಳನ್ನು ಕೊಂದು ಹಳ್ಳದಲ್ಲಿ ಹೂತು ಹಾಕಿದ್ದ. ಮಗಳ ಪ್ರೀತಿಗೆ ವಿರೋಧಿಸಿ ಪ್ರೀತಿಯ ವಿಚಾರದಲ್ಲಿ ಹೆತ್ತಮಗಳನ್ನು ಕೊಲೆ ಮಾಡಿದ್ದಾನೆ. ಏಪ್ರಿಲ್ 16 ರಂದು ಈ ಒಂದು ಕೊಲೆ ನಡೆದಿತ್ತು. ಕೊಲೆಯಾದ ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ತಿಮ್ಮರಾಯಪ್ಪ ನಾಟಕ ಮಾಡಿದ್ದಾನೆ.
ಹತ್ಯೆಯ ಬಳಿಕ ಮೇಘನಾ ತಂದೆ ತಿಮ್ಮರಾಯಪ್ಪ ಊರು ಬಿಟ್ಟಿದ್ದ ಆದರೆ ಪತ್ನಿ ಪೊಲೀಸ್ ಠಾಣೆಗೆ ಕೊಟ್ಟಿರುತ್ತಾರೆ. ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ತಿಮ್ಮರಾಯಪ್ಪನ ಈ ಒಂದು ಬಯಲಾಗಿದೆ. ಕಳ್ಳಂಬೆಳ್ಳ ಠಾಣೆ ಪೊಲೀಸ್ ತನಿಖೆಯಲ್ಲಿ ಕೃತ್ಯ ಬಯಲಾಗಿದೆ. ಸದ್ಯ ಪೊಲೀಸರು ತಿಮ್ಮರಾಯಪ್ಪನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
Woman dies by elephant ಎಲಿಫೆಂಟ್ ಬಾತಿಂಗ್ ವೇಳೆ ಮೈಮೇಲೆ ಆನೆ ಬಿದ್ದು ಮಹಿಳೆ ಸಾವು, ಪತಿ ಗಂಭೀರ