newsics.com/ನ್ಯೂಸಿಕ್ಸ್
ವಿಜಯ್ ಅವರ ಕೊನೆ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷ್ಯಾದಲ್ಲಿ ನಡೆದಾಗ ತುಂಬಾ ಕಡಿಮೆ ಮಾತನಾಡುವ ನೀವು ಇಷ್ಟು ಪವರ್ಫುಲ್ ಆಗಿ ಭಾಷಣ ಮಾಡುತ್ತಿದ್ದೀರಿ, ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟ, ಕಪ್ ಮುಖ್ಯಂ ಬಿಗಿಲ್ ಎಂದಿದ್ದರು. ಅಂದರೆ ನಟ ಗೆಲುವಿಗಾಗಿ, ಚುನಾವಣೆಗಾಗಿ ಹೆಚ್ಚು ಫೋಕಸ್ ಮಾಡಿದ್ದರು.
ನಟ-ರಾಜಕಾರಣಿ ವಿಜಯ್ ಅವರು ತೀರಾ ಖಾಸಗಿ ಮತ್ತು ಅಂತರ್ಮುಖಿ ವ್ಯಕ್ತಿ ಎಂದೇ ಇಂಡಸ್ಟ್ರಿಯಲ್ಲಿ ಫೇಮಸ್. ವಿಶೇಷವಾಗಿ ಅವರ ವೈಯಕ್ತಿಕ ದುರಂತಗಳ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಆದರೆ ಅವರ ಜೀವನದ ಎಂದೂ ಮರೆಯಲಾಗದ ನೋವೊಂದು ಅವರನ್ನು ಅಂತರ್ಮುಖಿಯಾಗಿಸಿದೆ ಎನ್ನುವುದು ಸತ್ಯ.
ಅವರ ಈಗಿರುವ ಸಂಯಮದ ಸ್ವಭಾವವು ಕೇವಲ ಒಂಬತ್ತು ವರ್ಷದವನಿದ್ದಾಗ ಅವರ ತಂಗಿ ವಿದ್ಯಾಳನ್ನು ಕಳೆದುಕೊಂಡ ಆಳವಾದ ಪರಿಣಾಮದ ಕಾರಣವಾಗಿದೆ ಎನ್ನಲಾಗಿದೆ. ಅವರು ಈ ದುರಂತದ ಅಷ್ಟಾಗಿ ಎಲ್ಲಿಯೂ ಮಾತನಾಡಿಯೂ ಇಲ್ಲ.
ಇದು ವಿಜಯ್ ಅವರಿಗೆ ದೊಡ್ಡ ಭಾವನಾತ್ಮಕ ಎಫೆಕ್ಟ್ ಆಗಿತ್ತು. ವಿಜಯ್ ಒಂಬತ್ತು ವರ್ಷದವನಿದ್ದಾಗ ಅವರ ಸಹೋದರಿ ವಿದ್ಯಾ ಎರಡನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದು ನಟನನ್ನು ಆಳವಾಗಿ ಪ್ರಭಾವಿಸಿತ್ತು. ಅವರನ್ನು ಮೌನ ಹೆಚ್ಚಾಯಿತು. ಚಟಪಟ ಅಂತ ಮಾತನಾಡುವ ಬಾಲಕನಾಗಿದ್ದ ವಿಜಯ್ ಅಂತರ್ಮುಖಿಯಾಗಿ ಪರಿವರ್ತಿಸಿತು.
ವಿಜಯ್ ತನ್ನ ತಂಗಿಯನ್ನು ತುಂಬಾ ಇಷ್ಟಪಡುತ್ತಿದ್ದರು. 2 ವರ್ಷದ ತಂಗಿಯನ್ನು ನೋಡಿ, ಪ್ರೀತಿಸುವಷ್ಟು ದೊಡ್ಡವರಾಗಿದ್ದರು. ಆದರೆ ನೋವಿನಿಂದ ಎಷ್ಟು ಎಫೆಕ್ಟ್ ಆಯಿತು ಎಂದರೆ ಅವರು ಎಲ್ಲಿಯೂ ನೋವು ಹೇಳಿಕೊಳ್ಳಲಿಲ್ಲ. ಅಳಲಿಲ್ಲ. ಮೌನಿಯಾಗಿಬಿಟ್ಟರು.
ಅವರು ತಮ್ಮ ನಿರ್ಮಾಣ ಸಂಸ್ಥೆಗೆ ವಿ.ವಿ. ಎಂದು ಹೆಸರಿಸಿದರು. ಲೋಕೇಶ್, ಅಟ್ಲೀ ಮತ್ತು ಮುರುಗದಾಸ್ ಅವರಂತಹ ನಿರ್ದೇಶಕರು ವಿಜಯ್ ಅವರು ತುಂಬಾ ಸಂಯಮದಿಂದ ಕೂಡಿದ್ದರೂ, ಅವರು “ಒನ್-ಟೇಕ್” ನಟ ಎಂದು ಬಣ್ಣಿಸುತ್ತಾರೆ.
ವಿಶೇಷವಾಗಿ ಭಾವನಾತ್ಮಕ ದೃಶ್ಯಗಳಲ್ಲಿ, ಈ ಆಳವಾದ ಎಮೋಷನಲ್ ಆಗಿರುವ ದೃಶ್ಯಗಳಲ್ಲಿ ವಿಜಯ್ ಅವರು ವೈಯಕ್ತಿಕ ಭಾವನಾತ್ಮಕ ಕ್ಷಣವನ್ನು ತಮ್ಮ ಕೆಲಸದಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದು ಗಮನಿಸಿದ್ದಾರೆ.
ವಿದ್ಯಾ ಅವರು 1984ರಲ್ಲಿ ಸಾವನ್ನಪ್ಪಿದ್ದಾರೆ. 2 ವರ್ಷ ಇದ್ದಾಗ ವಿಜಯ್ ತಂದೆ ಶೂಟಿಂಗ್ಗಾಗಿ ಮನೆಯಿಂದ ದೂರ ಇದ್ದಾಗ ಘಟನೆ ನಡೆದಿತ್ತು. ದಿಢೀರ್ ಅನಾರೋಗ್ಯದಿಂದ ಮಗು ಮೃತಪಟ್ಟಿತ್ತು ಎನ್ನಲಾಗಿದ್ದರೂ ನಿಜವಾದ ಕಾರಣ ರಿವೀಲ್ ಆಗಿರಲಿಲ್ಲ.
ಆಗ ವಿಜಯ್ 9-10 ವರ್ಷದ ಬಾಲಕ. ಕೆಲವರು ವಿದ್ಯಾ ವಿಜಯ್ ತೋಳುಗಳಲ್ಲೇ ಕೊನೆ ಉಸಿರೆಳೆದಳು ಎನ್ನುತ್ತಾರೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಈ ಸಾವು ವಿಜಯ್ ಅವರನ್ನು ತುಂಬಾನೆ ಬಾಧಿಸಿದ್ದು ನಿಜ.