newsics.com/ ನ್ಯೂಸಿಕ್ಸ್
ಬೆಂಗಳೂರು: ಆರ್ಎಸ್ಎಸ್ (RSS) ನೋಂದಣಿ, ದೇಣಿಗೆ, ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಗೃಹಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪತ್ರ ಬರೆದಿದ್ದರು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ (Mohan Bhagwat) ಪತ್ರ ಬರೆದು, 8 ವಿಚಾರಗಳ ಕುರಿತು ಸ್ಪಷ್ಟನೆ ಕೇಳಿದ್ದರು.
ಈ ಪತ್ರದ ಕುರಿತಂತೆ ಮೋಹನ್ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆ. ಕೇರಳದ ತಿಶೂರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಮೋಹನ್ ಭಾಗವತ್, ಇದೊಂದು ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದಾರೆ. ಆರ್ಎಸ್ಎಸ್ ರಹಸ್ಯವಾಗಿಲ್ಲ, ನಾವು ತೆರೆದ ಬಯಲಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮೋಹನ್ ಭಾಗವತ್ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರವನ್ನು ರಾಜಕೀಯ ಗಿಮಿಕ್ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಟೀಕಿಸಿದ್ದಾರೆ. ಕೇರಳದ ತ್ರಿಶೂರ್ನಲ್ಲಿ ನಡೆಯುತ್ತಿರುವ ಆರ್ಎಸ್ಎಸ್ ಸಭೆಯಲ್ಲಿ ಮಾತನಾಡಿದ ಭಾಗವತ್, ಆರ್ಎಸ್ಎಸ್ ಯಾವಾಗಲೂ ಬಹಿರಂಗವಾಗಿ ಕಾರ್ಯನಿರ್ವಹಿಸಿದೆ ಮತ್ತು ಎಂದಿಗೂ ರಹಸ್ಯವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ರಹಸ್ಯವಾಗಿಲ್ಲ:
ನಾವು ಅಂದರೆ ಆರ್ಎಸ್ಎಸ್ ರಹಸ್ಯವಾಗಿಲ್ಲ; ನಾವು ಮುಕ್ತ ಮೈದಾನದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಶಾಖೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ, ನಮ್ಮ ಕಾರ್ಯಕರ್ತರಾದವರು ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಾರೆ ಮತ್ತು ಜನರು ಅವರನ್ನು ಪ್ರತಿದಿನ ನೋಡುತ್ತಾರೆ ಅಂತ ಮೋಹನ್ ಭಾಗವತ್ ಹೇಳಿದ್ದಾರೆ.
ಈ ವರ್ಷ ಪ್ರತಿ ಬ್ಲಾಕ್ನಲ್ಲಿ ಹಿಂದೂ ಸಮ್ಮೇಳನಗಳು ಸೇರಿದಂತೆ ನಮಗೆ ಅಗಾಧವಾದ ಪ್ರಚಾರ ಕಾರ್ಯಕ್ರಮಗಳಿವೆ ಎಂದು ಅವರು ಹೇಳಿದ್ದಾರೆ.
ಸಂಘವು ಪ್ರಾರಂಭವಾದಾಗಿನಿಂದ ಇದೇ ರೀತಿಯ ಸವಾಲುಗಳನ್ನು ಎದುರಿಸಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಸಂಘವನ್ನು ಪ್ರಾರಂಭಿಸಿದ 10-15 ವರ್ಷಗಳ ನಂತರ, ನಾವು ಇವೆಲ್ಲವನ್ನೂ ಎದುರಿಸಬೇಕಾಯಿತು. ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ಅವು ಸಂಭವಿಸದಿದ್ದರೆ, ಏನೋ ತಪ್ಪಾಗಿದೆ ಎಂದು ನಮಗೆ ಅನಿಸುತ್ತದೆ ಎಂದು ಅವರು ವ್ಯಂಗ್ಯವಾಡಿದ್ರು.
ಹಿಂದೆ 2 ಬಾರಿ ನಿಷೇಧ ಹೇರಲಾಗಿತ್ತು:
ಬ್ರಿಟಿಷ್ ಆಳ್ವಿಕೆಯಲ್ಲಿ ಈ ಸಂಘಟನೆಯು ಸಾರ್ವಜನಿಕ ಇಚ್ಛೆಯಿಂದ ಹುಟ್ಟಿಕೊಂಡಿತು ಎಂದು ಅವರು ಹೇಳಿದರು. ಹಿಂದೆ ಎರಡು ಬಾರಿ ಆರ್ಎಸ್ಎಸ್ ಅನ್ನು ನಿಷೇಧಿಸಲಾಗಿತ್ತು, ಆದರೆ ನಿಷೇಧಗಳನ್ನು ತೆಗೆದುಹಾಕಲಾಯಿತು, ಒಮ್ಮೆ ನ್ಯಾಯಾಲಯದ ಆದೇಶದ ಮೂಲಕ ಮತ್ತು ಒಮ್ಮೆ ಸತ್ಯಾಗ್ರಹದ ಮೂಲಕ ತೆರವುಗೊಳಿಸಲಾಯ್ತು.
ನಮಗೆ ಯಾರೂ ನೋಂದಾಯಿಸಲು ಹೇಳಿರಲಿಲ್ಲ:
ಸಂಘ ಇದೆ ಎಂದು ಸರ್ಕಾರಕ್ಕೆ ತಿಳಿದಿದೆ. ನಮ್ಮ ಪ್ರಸ್ತಾವನೆಯನ್ನು 1950ರ ದಶಕದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಯಾರೂ ನಮಗೆ ನೋಂದಾಯಿಸಲು ಹೇಳಲಿಲ್ಲ. ಹಿಂದೂ ಧರ್ಮವನ್ನು ನೋಂದಾಯಿಸಲಾಗಿಲ್ಲ. ಅನೇಕ ವಿಷಯಗಳನ್ನು ನೋಂದಾಯಿಸಲಾಗಿಲ್ಲ. ಹಾಗಿದ್ದಾಗ ನಾನು ಏಕೆ ಪ್ರತಿಕ್ರಿಯಿಸಬೇಕು? ಇದೆಲ್ಲವೂ ರಾಜಕೀಯ. ಅದರಲ್ಲಿ ಗಂಭೀರವಾಗಿ ಏನೂ ಇಲ್ಲ ಅಂತ ಮೋಹನ್ ಭಾಗವತ್ ಪ್ರತಿಕ್ರಿಯಿಸಿದ್ದಾರೆ.
ಜನರಲ್ಲಿ ಅನುಮಾನ ಹುಟ್ಟಿಸುವ ಕೆಲಸ:
ರಾಜಕೀಯ ವಿರೋಧಿಗಳು ಸಂಘದ ಕೆಲಸಕ್ಕೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋಹನ್ ಭಾಗವತ್ ಆರೋಪಿಸಿದರು. ಆದರೆ ಜನರು ನಮ್ಮ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ಇಂತಹ ತಹ ಪ್ರಯತ್ನಗಳು ವಿಫಲಗೊಳ್ಳುತ್ತವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
2 ಪುಟಗಳ ಪತ್ರ ಬರೆದಿದ್ದ ಪ್ರಿಯಾಂಕ್ ಖರ್ಗೆ:
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಕರ್ನಾಟಕದ ಗೃಹಸಚಿವ ಪ್ರಿಯಾಂಕ್ ಖರ್ಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದರು. 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಆರ್ಎಸ್ಎಸ್ಗೆ ಅಭಿನಂದನೆ ಸಲ್ಲಿಸಿರುವ ಅವರು, ಸಾಂಸ್ಥಿಕ ಸ್ಥಿತಿಯ ಕುರಿತು ಕಾನೂನು ಸ್ಪಷ್ಟೀಕರಣಕ್ಕಾಗಿ ವಿನಂತಿಸಿಕೊಂಡಿದ್ದರು. ಈ ಪತ್ರದಲ್ಲಿ ಆರ್ಎಸ್ಎಸ್ ನೋಂದಣಿ, ದೇಣಿಗೆ ಮತ್ತು ತೆರಿಗೆ ಕುರಿತಂತೆ 8 ಪ್ರಶ್ನೆಗಳನ್ನು ಕೇಳಿದ್ದರು.
Letter to RSS ಆರೆಸ್ಸೆಸ್ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್ಗೆ ಕೇಳಿದ ಪ್ರಶ್ನೆಗಳೇನು?