Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Mystery ಸಿಜೆ ರಾಯ್ ಡೈರಿಯಲ್ಲಿ ಶಾಸಕರು, ಸಂಸದರ ಹೆಸರು! ಸಾಯುವ ಮುನ್ನ 15 ನಿಮಿಷ ಮಾತಾಡಿದ್ದು ಯಾರ ಜತೆ?
ಕರ್ನಾಟಕದೇಶಪ್ರಮುಖಮನರಂಜನೆ

Mystery ಸಿಜೆ ರಾಯ್ ಡೈರಿಯಲ್ಲಿ ಶಾಸಕರು, ಸಂಸದರ ಹೆಸರು! ಸಾಯುವ ಮುನ್ನ 15 ನಿಮಿಷ ಮಾತಾಡಿದ್ದು ಯಾರ ಜತೆ?

Share
4 Min Read
SHARE

https://youtube.com/shorts/kIkAyfI4sxw?si=aggVueBL3fodeELS

Subscribe ನ್ಯೂಸಿಕ್ಸ್ ಕನ್ನಡ

newsics.com

ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ ಎಂದು ಹೆದರಿ ಗುಂಡು ಹಾರಿಸಿಕೊಂಡು ನಿನ್ನೆ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಆಗಿರುವ ಸಿಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಅವರು ಬರೆದಿರುವ ಡೈರಿಯಲ್ಲಿ ಹಲವು ಸ್ಪೋಟಕ ಅಂಶಗಳು ಬರೆಯಲಾಗಿದ್ದು ರಾಜ್ಯದ ಇಬ್ಬರು ಪ್ರಭಾವಿ ಶಾಸಕರ ಹೆಸರನ್ನು ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ರಾಯ್ ಅವರಿಗೆ ಡೈರಿ ಬರೆಯುವ ಅಭ್ಯಾಸ ಇತ್ತು. ಡೈರಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಡೈರಿಯಲ್ಲಿ ಇಬ್ಬರು ಪ್ರಭಾವಿ ಶಾಸಕರ ಹೆಸರುಗಳನ್ನು ಉಲ್ಲೇಖ ಮಾಡಿದ್ದು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಹೆಸರುಗಳನ್ನು ಅವರು ಬರೆದಿದ್ದಾರೆ.

ಇದರ ಜೊತೆ ಒಬ್ಬ ಸಂಸದರ ಹೆಸರನ್ನು ಕೂಡ ಬರೆದಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಂಸದರು ಚಿತ್ರದ ರಂಗದ ಗಣ್ಯರ ಹೆಸರು ಅನೇಕ ನಟಿಯರು ಮೋಡಲ್ ಗಳ ಹೆಸರು ಕೂಡ ಉಲ್ಲೇಖ ಮಾಡಿದ್ದಾರೆ. ವ್ಯವಹಾರಿಕವಾಗಿ ಒಂದಷ್ಟು ವಿಚಾರಗಳು ಹಾಗು ಒಪ್ಪಂದಗಳ ಕುರಿತಂತೆ ಕೂಡ ಡೈರಿಯಲ್ಲಿ ಬರೆದಿದ್ದಾರೆ ಎಂದು ಗೊತ್ತಾಗಿದೆ.

ಶೂನ್ಯ ಸಾಲದ ಬ್ಯುಸಿನೆಸ್‌ ಮಾಡೆಲ್‌ನಿಂದ ಪ್ರಖ್ಯಾತಿ ಗಳಿಸಿದ್ದ ರಾಯ್‌ ಸಾವಿನ ಹಿಂದೆ ಅನುಮಾನದ ಹುತ್ತವೇ ಬೆಳೆದು ನಿಂತಿದೆ.

ಐಟಿ ಟಾರ್ಚರ್‌ಗೆ ಆತ್ಮಹತ್ಯೆ?

ಸತತ ಮೂರು ತಿಂಗಳಿಂದಲೂ ಕಾನ್ಫಿಡೆಂಟ್‌ ಗ್ರೂಪ್‌ ಮೇಲೆ ಐಟಿ ಅಧಿಕಾರಿಗಳು ರೇಡ್‌ ನಡೆಸಿದ್ದಾರೆಂಬ ಮಾಹಿತಿ ಇದೆ. ಕಳೆದ ಡಿಸೆಂಬರ್‌ನಲ್ಲೂ ಕೇರಳದ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ರೇಡ್‌ ಮಾಡಿದ್ದರು ಎನ್ನಲಾಗಿದೆ. ಈಗ ಅದೇ ಡಿಸೆಂಬರ್‌ ರೇಡ್‌ನ ಮುಂದುವರಿದ ದಾಳಿ ಶುಕ್ರವಾರ ನಡೆದಿತ್ತು. ಬುಧವಾರ ಕೇರಳದ ಕೊಚ್ಚಿಯಿಂದ ಐಟಿ ಅಧಿಕಾರಿಗಳ ತಂಡ ಆಗಮಿಸಿತ್ತು. ಬುಧವಾರದಿಂದ ಪರಿಶೀಲನೆ ಬಳಿಕ ಕೆಲ ಸ್ಪಷ್ಟನೆ ಕೇಳಲು ಶುಕ್ರವಾರ ಮತ್ತೆ ಐಟಿ ತಂಡ, ಮಧ್ಯಾಹ್ನ 3ಗಂಟೆ ಸುಮಾರಿಗೆ ರಾಯ್‌ ಅಪಾರ್ಟ್‌ಮೆಂಟ್‌ ಕಚೇರಿಗೆ ಬಂದಿತ್ತು.

ಹೀಗಾಗಿ, ಐಟಿ ಅಧಿಕಾರಿಗಳ ಟಾರ್ಚರ್‌ ಸಹೋದರನ ಸಾವಿಗೆ ಕಾರಣ. ಐಟಿ ಅಧಿಕಾರಿ ಅಡಿಷನಲ್‌ ಕಮಿಷನರ್‌ ಕೃಷ್ಣಪ್ರಸಾದ್‌ ಎಂಬುವವರೇ ಸಾವಿಗೆ ಕಾರಣ ಎಂದು ರಾಯ್‌ ಸಹೋದರ ಬಾಬು ಸಿ ಜೋಸೆಫ್‌ ಆರೋಪ ಮಾಡಿದ್ದಾರೆ.

ರಾಯ್‌ ಸಹೋದರ ಹೇಳಿದಂತೆ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ 2 ಕಾರುಗಳಲ್ಲಿ 10 ಮಂದಿ ಕೊಚ್ಚಿಯ ಐಟಿ ಅಧಿಕಾರಿಗಳ ತಂಡ ಆನೆಪಾಳ್ಯದ ಅಪಾರ್ಟ್‌ಮೆಂಟ್‌ ಕಚೇರಿಗೆ ಬಂದಿತ್ತು. ಆದರೆ, ಆ ವೇಳೆ ಪ್ರತ್ಯೇಕವಾಗಿ ಕೊಠಡಿಗೆ ರಾಯ್‌ ಹೋಗಿದ್ದೇಕೆ ಎಂಬುದೇ ಈಗ ಅನುಮಾನಕ್ಕೆ ಕಾರಣವಾಗಿದೆ.

ಪ್ರತ್ಯೇಕವಾಗಿ ಕೊಠಡಿಗೆ ರಾಯ್‌ ಹೋಗಿದ್ದೇಕೆ?

ಐಟಿ ದಾಳಿ ವೇಳೆ ಸಾಮಾನ್ಯವಾಗಿ ಆರೋಪಿ ಮುಂದೆಯೇ ಪರಿಶೀಲನೆ ನಡೆಯುತ್ತದೆ. ಆದರೆ, ಐಟಿ ರೇಡ್‌ ರೇಡ್‌ ವೇಳೆಯೇ ರಾಯ್‌ ಪ್ರತ್ಯೇಕವಾಗಿ ಕೊಠಡಿಗೆ ಹೋಗಿದ್ದೇಕೆ? ಯಾವ ದಾಖಲೆ ತರಲು ಹೋದರು? ಹೋದರೂ 15 ನಿಮಿಷಗಳ ಕಾಲ ಅವರನ್ನು ಒಳಗೆ ಬಿಟ್ಟಿದ್ದೇಕೆ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

15 ನಿಮಿಷ ಫೋನ್‌ ಕಾಲ್‌ ಮಾಡಿದ್ರಾ?

ಐಟಿ ಅಧಿಕಾರಿಗಳ ನೋಟಿಸ್‌ಗೆ ಸಹಿ ಮಾಡಿ ಸಿಜೆ ರಾಯ್‌ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಇದಾದ 15 ನಿಮಿಷಗಳ ಬಳಿಕ ಕೊಠಡಿಯಿಂದ ಗುಂಡಿನ ಸದ್ದು ಕೇಳಿಸಿತ್ತು. ಈ 15 ನಿಮಿಷಗಳ ಅವಧಿಯಲ್ಲಿ ರಾಯ್‌ ಯಾರಿಗೋ ಫೋನ್‌ ಕಾಲ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಫೋನ್ ಕಾಲ್‌ ಮಾಡಿದ್ಯಾರಿಗೆ? ಆ ಸಮಯದಲ್ಲಿ ಫೋನ್ ಮಾಡಿದ್ದೇಕೆ ಎಂಬ ಅನುಮಾನ ಈಗ ದಟ್ಟವಾಗಿದೆ.

ಎರಡು ತಿಂಗಳಿಂದ ಎಲ್ಲಾ ಸಿಸಿಟಿವಿ ಆಫ್‌!

ಕಾನ್ಫಿಡೆಂಟ್‌ ಗ್ರೂಪ್‌ ದೊಡ್ಡ ಕಂಪನಿ. ಅದರಲ್ಲೂ ನಿತ್ಯವೂ ನೂರಾರು ಜನರು ಬಂದು ಹೋಗುವ ಅಪಾರ್ಟ್‌ಮೆಂಟ್‌ ಕಚೇರಿ. ಸಣ್ಣ ಅಂಗಡಿಗಳಿಗೂ ಸಿಸಿ ಕ್ಯಾಮರಾ ಆ್ಯಕ್ಟಿವ್‌ ಇಟ್ಟುಕೊಳ್ಳುತ್ತಾರೆ. ಆದರೆ, ಇಷ್ಟು ದೊಡ್ಡ ಕಚೇರಿಯ ಸಿಸಿಟಿವಿಗಳು ಎರಡು ತಿಂಗಳಿಂದ ಆಫ್‌ ಆಗಿವೆ ಎನ್ನಲಾಗುತ್ತಿದೆ. ಇದಕ್ಕೆ ತಾಂತ್ರಿಕ ಕಾರಣ ಇದೆಯಾ? ಅಥವಾ ಬೇರೆಯದ್ದೇ ಕಾರಣವೇ? ಉದ್ದೇಶಪೂರ್ವಕವಾಗಿ ಆಫ್‌ ಮಾಡಲಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.

ಪೆನಾಲ್ಟಿ ಕಟ್ಟಲು ಕಷ್ಟವಾಗಿತ್ತಾ?

ಸಿಜೆ ರಾಯ್ ಐಟಿ ದಾಳಿಗೆ ಹೆದರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನವೂ ಅಚ್ಚರಿ ಮೂಡಿಸಿದೆ. ಯಾಕೆಂದರೆ ದುಬೈ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರಾಪರ್ಟಿ ಹೊಂದಿರುವ ಸಿಜೆ ರಾಯ್‌ ಸಾವಿರಾರು ಕೋಟಿ ರೂ.ಗಳ ಒಡೆಯ. ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ರಾಯ್‌ಗೆ ಒಂದು ವೇಳೆ ಐಟಿ ದಾಳಿಯಲ್ಲಿ ಲೋಪ ಕಂಡುಬಂದಿದ್ದರೂ ಪೆನಾಲ್ಟಿ ಕಟ್ಟುವುದು ಕಷ್ಟವಾಗಿರಲಿಲ್ಲ. ಕಾನೂನು ಹೋರಾಟದ ಆಪ್ಷನ್‌ ಕೂಡ ಇತ್ತು. ದೊಡ್ಡ ಕಂಪನಿಗಳ ಚಾರ್ಟರ್ಡ್‌ ಅಕೌಂಟೆಂಟ್‌ಗಳೇ ನಿಭಾಯಿಸಬಹುದಾದ, ವಕೀಲರು ನೋಡಿಕೊಳ್ಳಬಹುದಾದ ಕೇಸ್‌ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ..

ಸಹೋದರನ ಜತೆ ಸಹಜವಾಗಿ ಮಾತು!

ಐಟಿ ಅಧಿಕಾರಿಗಳು ಟಾರ್ಚರ್‌ ಕೊಡುತ್ತಿದ್ದರು ಎಂದು ರಾಯ್ ಸಹೋದರ ಹೇಳಿದ್ದಾರೆ. ಆದರೆ, ಶುಕ್ರವಾರ ರೇಡ್‌ಗೆ ಮುನ್ನ ಬೆಳಗ್ಗೆ 11ಗಂಟೆಗೆ ಸಹೋದರ ಬಾಬುಗೆ ರಾಯ್‌ ಕರೆ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿ, ‘ಯಾವಾಗ ಬರುತ್ತೀ’ ಎಂದು ಸಹಜವಾಗಿಯೇ ಮಾತಾಡಿದ್ದಾರೆ. ಐಟಿ ಅಧಿಕಾರಿಗಳು ಬರಬಹುದು ಎಂದು ಯಾವುದೇ ಒತ್ತಡ ಇಲ್ಲದೆ ಮಾತನಾಡಿದ್ದರು ಎನ್ನುತ್ತಾರೆ ಬಾಬು ಜೋಸೆಫ್‌.

ಅಷ್ಟೇ ಅಲ್ಲ, ಜನವರಿ 26ರಂದು ಗಣರಾಜ್ಯೋತ್ಸವಕ್ಕೂ ಖುಷಿಯಿಂದಲೇ ರಾಯ್‌ ಪೋಸ್ಟ್‌ ಮಾಡಿಕೊಂಡು, ಶುಭ ಹಾರೈಸಿದ್ದರು. ಇವೆಲ್ಲವನ್ನು ನೋಡಿದರೆ 15 ನಿಮಿಷದಲ್ಲಿ ರಾಯ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿವಾರ್ಯತೆ ಬಂದಿದ್ದೇಕೆ? ಸಾಮ್ರಾಜ್ಯ ಕಟ್ಟಿ ಬೆಳೆಸಿದ ರಾಯ್‌ ಅಷ್ಟರಮಟ್ಟಿಗೆ ಕುಸಿಯಲು ಕಾರಣವೇನು ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ಉತ್ತರಿಸಬೇಕಾದ ರಾಯ್‌ ಬದುಕಿಲ್ಲ. ತನಿಖೆಯಿಂದಷ್ಟೇ ನಿಜ ಸಂಗತಿ ತಿಳಿಯಬೇಕಿದೆ.

Surprising fact ಶ್ರೀಮಂತಿಕೆಗೆ ತಕ್ಕನಾಗಿ ಪ್ರಭಾವ ಇರದಿದ್ದುದೇ ರಾಯ್ ಸಾವಿಗೆ ಕಾರಣವಾಯ್ತಾ? ಸದಾ ತಮ್ಮ ಬಳಿಯೇ ಪಿಸ್ತೂಲ್ ಇಟ್ಟುಕೊಳ್ಳುತ್ತಿದ್ದುದೇಕೆ?

Interesting ದೇವರ ಪ್ರಸಾದ ಮಿಕ್ಸಿಂಗ್‌‌ಗೆ ಜೆಸಿಬಿ ಬಳಸಿದ ದೇವಸ್ಥಾನ!

ಚಿನ್ನ – ಬೆಳ್ಳಿ ಬೆಲೆಯಲ್ಲಿ ದಿಢೀರ್‌ ಕುಸಿತ; ಬೆಳ್ಳಿ ದರ ₹ 15 ಸಾವಿರ, ಚಿನ್ನ₹ 9650 ಇಳಿಕೆ

TAGGED:Names of MLAs and MPs in CJ Roy's diary! Who did he talk to for 15 minutes before his death?
Share This Article
Facebook Twitter Copy Link Print
Previous Article ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸಾಧ್ಯತೆ
Next Article ಗಂಟಲಲ್ಲಿ ಅನ್ನ ಸಿಲುಕಿ 2 ವರ್ಷದ ಮಗು ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?