Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬೆಂಗಳೂರು: ಬಿಗ್ ಬಾಸ್ ಕನ್ನಡ -12 ರ ಆಟದಲ್ಲಿ ಮೊದಲ ವಾರ ಮುಕ್ತಾಯ ಕಂಡಿದೆ. ಈ ಸೀಸನ್ನ ಮೊದಲ ವಾರದಲ್ಲೇ ರೋಚಕ ಟ್ವಿಸ್ಟ್ಗಳನ್ನು ನೀಡಲಾಗಿದೆ.
ಒಂಟಿ – ಜಂಟಿಗಳ ಆಟದಲ್ಲಿ ಗೊಂದಲ – ಗದ್ದಲದೊಂದಿಗೆ ಮೊದಲ ವಾರ ಮುಕ್ತಾಯ ಕಂಡಿದೆ.
ಇದರ ಜರೆ ದೊಡ್ಮನೆಯಲ್ಲಿ ಎಲಿಮಿನೇಷನ್ ಟೆನ್ಷನ್ ಶುರುವಾಗಿದೆ. ಒಂಟಿ – ಜಂಟಿಗಳ ಪೈಕಿ ಒಬ್ಬರು ಅಥವಾ ಇಬ್ಬರು ಮನೆಯಿಂದ ಹೊರಬರುವುದು ಪಕ್ಕಾ ಆಗಿದೆ.
ಈ ವಾರ ಕಾವ್ಯ, ಗಿಲ್ಲಿ, ಅಮಿತ್, ಕರಿಬಸಪ್ಪ, ಅಭಿಷೇಕ್ , ಅಶ್ವಿನಿ ಧನುಷ್ ಹಾಗೂ ಮಲ್ಲಮ್ಮ ನಾಮಿನೇಟ್ ಆಗಿದ್ದರು. ಈ ಪೈಕಿ ಮೊದಲ ದಿನ ಮಲ್ಲಮ್ಮ ಅವರು ಸೇಫ್ ಆಗಿದ್ದಾರೆ. ಇನ್ನುಳಿದವರ ಏಳು ಮಂದಿಯಲ್ಲಿ ಒಬ್ಬರು ಅಥವಾ ಇಬ್ಬರು ಹೊರಗೆ ಹೋಗಲಿದ್ದಾರೆ.
ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಕಾವ್ಯ – ಗಿಲ್ಲಿ ದೊಡ್ಮನೆಯಲ್ಲಿ ಮೊದಲ ವಾರ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇನ್ನು ಅಭಿಷೇಕ್ – ಅಶ್ವಿನಿ ಅಷ್ಟಾಗಿ ಮನೆಯಲ್ಲಿ ಕಂಡಿಲ್ಲ. ಧನುಷ್ ಅವರು ಒಂದಷ್ಟು ಗಮನ ಸೆಳೆದಿದ್ದಾರೆ. ಆದರೆ ಜಂಟಿಗಳಾಗಿರುವ ಅಮಿತ್ – ಕರಿಬಸಪ್ಪ ಅವರು ಇಡೀ ವಾರ ಎಲ್ಲೂ ಕೂಡ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ಬಹುಶಃ ಎಲಿಮಿನೇಷನ್ ವಿಚಾರದಲ್ಲಿ ಈ ಅಂಶ ಅಮಿತ್ – ಕರಿಬಸಪ್ಪ ಅವರಿಗೆ ಮುಳುವಾಗಬಹುದು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಟ್ರೆಂಡ್ ಪ್ರಕಾರ ಈ ವಾರ ಅಮಿತ್ – ಕರಿಬಸಪ್ಪ ಅವರು ದೊಡ್ಮನೆಯಿಂದ ಹೊರಗಡೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಹೆಚ್ಚು:
ಈ ಸಲ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ. ಮೊದಲ ಫಿನಾಲಿಸ್ಟ್ ಆಗಿ ಕಾಕ್ರೋಚ್ ಸುಧಿ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ಫಿನಾಲೆಗೂ ಮುನ್ನ ದೊಡ್ಮನೆಯಿಂದ ಸರಣಿ ಎಲಿಮಿನೇಷನ್ ನಡೆಯಲಿದೆ ಎನ್ನಲಾಗುತ್ತಿದೆ. ಎಲಿಮಿನೇಷನ್ ಆದವರ ಜಾಗಕ್ಕೆ ನಾಲ್ವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬರಲಿದ್ದಾರೆ ಎನ್ನಲಾಗುತ್ತಿದೆ.