Subscribe NewsicsKannada/YouTube
newsics.com
ಕಠ್ಮಂಡು: 2 ವರ್ಷ ಎಂಟು ತಿಂಗಳ ಬಾಲಕಿ ಆರ್ಯತಾರಾ ಶಕ್ಯಾ ಅವರನ್ನು ನೇಪಾಳದ ನೂತನ ‘ದೇವಿ’ಯಾಗಿ ಆಯ್ಕೆ ಮಾಡಲಾಗಿದೆ. ಈಗಿರುವ ದೇವಿಯು ಪ್ರೌಢಾವಸ್ಥೆಗೆ ಬರುತ್ತಿರುವುದರಿಂದ ನೂತನ ದೇವಿಯನ್ನು ಆಯ್ಕೆ ಮಾಡಲಾಗಿದೆ.
ಈ ದೇವಿಯನ್ನು ಹಿಂದೂಗಳು ಮತ್ತು ಬೌದ್ಧರು ಆರಾಧಿಸುತ್ತಾರೆ. 2ರಿಂದ 4 ವರ್ಷದೊಳಗಿನ ಹೆಣ್ಣುಮಕ್ಕಳನ್ನು ದೇವಿಯಾಗಿ ಆಯ್ಕೆ ಮಾಡಲಾಗುತ್ತದೆ. ಈ ಮೊದಲು ಆಯ್ಕೆಯಾಗಿರುವ ಹೆಣ್ಣುಮಗು ಪ್ರೌಢಾವಸ್ಥೆ ತಲುಪಿದಾಗ, ಆಕೆಯ ಬದಲು ನೂತನವಾಗಿ ಆಯ್ಕೆ ಮಾಡಲಾದ ‘ಕನ್ಯೆ’ಯನ್ನು ಆರಾಧಿಸಲಾಗುತ್ತದೆ.
ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇವಿಯನ್ನು ರಥದಲ್ಲಿ ಕೂರಿಸಿ, ಭಕ್ತರು ತೇರು ಎಳೆಯುತ್ತಾರೆ. ಆಕೆಯ ಹಣೆ ಮೇಲೆ ಮೂರನೇ ಕಣ್ಣನ್ನು ಬರೆಯಲಾಗುತ್ತದೆ.
ನೇವಾರ್ ಸಮುದಾಯದ ಶಾಕ್ಯ ಕುಲದಿಂದ ಕನ್ಯಾ ದೇವತೆಯ ಆಯ್ಕೆ
ಇಲ್ಲಿ ಕುಮಾರಿಗಳನ್ನು ಅಥವಾ ಕನ್ಯಾ ದೇವತೆಯನ್ನು ನೇವಾರ್ ಸಮುದಾಯದ ಶಾಕ್ಯ ಕುಲಗಳಿಂದ ಆಯ್ಕೆ ಮಾಡಲಾಗುತ್ತದೆ. ಈ ಮಗುವನ್ನು ಕಠ್ಮಂಡು ಕಣಿವೆಯ ಸ್ಥಳೀಯರು, ಹಿಂದೂಗಳು ಮತ್ತು ಬೌದ್ಧರು ಆರಾಧಿಸುತ್ತಾರೆ. ಈ ಕನ್ಯಾ ದೇವತೆಯಾಗಿ 2 ರಿಂದ 4 ವರ್ಷದೊಳಗಿನ ಹೆಣ್ಣು ಮಗುವನ್ನು ಆಯ್ಕೆ ಮಾಡಲಾಗುತ್ತದೆ. ಈ ಸ್ಥಾನಕ್ಕೆ ಆಯ್ಕೆಯಾಗುವ ಮಗು ಕಲೆಯಿಲ್ಲದ ಚರ್ಮ ಹೊಂದಿರಬೇಕು, ಕೂದಲು, ಕಣ್ಣು ಮತ್ತು ಹಲ್ಲುಗಳನ್ನು ಹೊಂದಿರಬೇಕು ಹಾಗೂ ಅವರು ಕತ್ತಲೆಗೆ ಹೆದರಬಾರದು ಈ ಎಲ್ಲ ಮಾನದಂಡಗಳನ್ನು ಹೊಂದಿರುವ ಮಗುವನ್ನು ದೇವತೆಯಾಗಿ ಆಯ್ಕೆ ಮಾಡಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ ನಡೆದ ಇಂದ್ರ ಜಾತ್ರಾ ಉತ್ಸವದ ಸಮಯದಲ್ಲಿ, ಈ ಹಿಂದಿನ ಕುಮಾರಿಯನ್ನು ಭಕ್ತರು ಎಳೆಯುವ ರಥದ ಮೇಲೆ ಕೂರಿಸಿ ನಗರ ಪ್ರದಕ್ಷಿಣೆ ಮಾಡಲಾಗಿತ್ತು. ಕುಮಾರಿ ಯಾವಾಗಲೂ ಕೆಂಪು ಬಣ್ಣವನ್ನು ಧರಿಸುತ್ತಾಳೆ, ಕೂದಲನ್ನು ಮೇಲೆ ಗಂಟುಗಳಲ್ಲಿ ಕಟ್ಟಲಾಗುತ್ತದೆ ಮತ್ತು ಅವರ ಹಣೆಯ ಮೇಲೆ ಮೂರನೇ ಕಣ್ಣನ್ನು ಚಿತ್ರಿಸಲಾಗುತ್ತದೆ. ವಾರಪೂರ್ತಿ ನಡೆಯುವ ಈ ಇಂದ್ರ ಜಾತ್ರಾ ಉತ್ಸವವು ಅಕ್ಟೋಬರ್ನಲ್ಲಿ ನೇಪಾಳದಲ್ಲಿ ನಡೆಯುವ ಆಚರಣೆಗಳ ಸರಣಿಯಲ್ಲಿ ಮೊದಲನೆಯದಾಗಿದೆ. ಇದರಲ್ಲಿ ಮುಖ್ಯ ಹಬ್ಬವಾದ ದಶೈನ್ ಮತ್ತು ಬೆಳಕಿನ ಹಬ್ಬವಾದ ತಿಹಾರ್ ಅಥವಾ ದೀಪಾವಳಿ ಸೇರಿವೆ.
ನೇಪಾಳದ ಜೀವಂತ ದೇವತೆಯನ್ನು ಕುಮಾರಿ ಎಂದು ಕರೆಯಲಾಗುತ್ತದೆ, ಈ ಯುವತಿಯನ್ನು ನೇವಾರಿ ಬೌದ್ಧ ಸಮುದಾಯದಿಂದ ಆಯ್ಕೆ ಮಾಡಲಾಗಿದೆ. ಅವಳನ್ನು ಹಿಂದೂ ದೇವತೆ ತಲೇಜು ಅಂದರೆ ದುರ್ಗೆಯ ಅವತಾರ ದ ಜೀವಂತ ಸಾಕಾರವೆಂದು ಪರಿಗಣಿಸಲಾಗುತ್ತದೆ. ಕುಮಾರಿಯನ್ನು ಕಠಿಣವಾದ ವಿಧ್ಯುಕ್ತ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಒಮ್ಮೆ ಆಯ್ಕೆಯಾದ ನಂತರ, ಹಿಂದೂಗಳು ಮತ್ತು ಬೌದ್ಧರು ಇಬ್ಬರೂ ದೈವಿಕ ವ್ಯಕ್ತಿಯಾಗಿ ಆಕೆಯನ್ನು ಪೂಜಿಸುತ್ತಾರೆ, ಅವರು ವಯಸ್ಸಿಗೆ ಬರುವವರೆಗೆ ಅಥವಾ ತೀವ್ರವಾದ ಗಾಯ ಅಥವಾ ಅನಾರೋಗ್ಯದಿಂದ ಬಳಲುವವರೆಗೆ ಪ್ರತ್ಯೇಕವಾಗಿ ವಾಸಿಸುತ್ತಾರೆ ಆ ಸಮಯದಲ್ಲಿ ದೇವಿಯು ತನ್ನ ದೇಹವನ್ನು ಬಿಡುತ್ತಾಳೆ ಎಂದು ನಂಬಲಾಗುತ್ತದೆ.
Mysuru dasara ಮತ್ತೆ ಅರಮನೆಗೆ ಮರಳಿದ ಜಂಬೂಸವಾರಿ, ಲಕ್ಷಾಂತರ ಜನ ವೀಕ್ಷಣೆ, ಮೆರವಣಿಗೆ ಹೇಗಿತ್ತು? ಏನೇನಾಯ್ತು?