newsics.com
ಹಾಸನ : ಭಾರೀ ಮಳೆಯಿಂದಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಹಾಸನದ ಮಂಜರಾಬಾದ್ ಕೋಟೆಯ ಒಂದು ಪಾರ್ಶ್ವ ಕುಸಿದಿದೆ. ಕೋಟೆಯ ಒಳಭಾಗದ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಭಾಗ ಎಂದು ಹೇಳಲಾಗುವ ಪ್ರದೇಶವು ಕುಸಿದುಬಿದ್ದಿದೆ.
ಕೋಟೆ ಕಟ್ಟಿದ್ದು ಯಾರು, ಎಂದು?
ನಕ್ಷತ್ರಾಕಾರದಲ್ಲಿರುವ ಮಂಜರಾಬಾದ್ ಕೋಟೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೂರಾರು ಪ್ರವಾಸಿಗರ ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ, ಐತಿಹಾಸಿಕ ಮಂಜರಾಬಾದ್ ಕೋಟೆಯನ್ನು ಮಂಜರಾಬಾದ್ ಕೋಟೆಯನ್ನು 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದರು.
ಈ ಕೋಟೆ ನಕ್ಷತ್ರಾಕಾರದಲ್ಲಿದ್ದು, ಈ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿದ್ದಲ್ಲಿ ಈ ಕೋಟೆಯಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದು ಎಂಬ ಪ್ರತೀತಿ ಇದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ನಿರ್ಮಾಣವಾಗಿದೆ.
ಕೆಲಕಾಲ ಪ್ರವಾಸಿಗರಿಗೆ ನಿಷೇಧ
ಸಮುದ್ರ ಮಟ್ಟದಿಂದ ಈ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಅಂದರೆ 3393 ಅಡಿಗಳು 252 ಮೆಟ್ಟಿಲುಗಳನ್ನು ಹತ್ತಿದರೇ, ಸಿಗುವ ಈ ಕೋಟೆಯ ನಕ್ಷೆ ವಿಶಿಷ್ಟ ತಂತ್ರವನ್ನು ಒಳಗೊಂಡಿದೆ. ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1956 ರಿಂದ ಪುರಾತತ್ವ ಇಲಾಖೆಯು ವಹಿಸಿಕೊಂಡಿದೆ. ಕೋಟೆಯ ಒಂದು ಭಾಗ ಕುಸಿದ ಹಿನ್ನಲೆಯಲ್ಲಿ ಇಂದು ಬಂದಿರುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದು, ಬಂದ ದಾರಿಗೆ ಸುಂಕವಿಲ್ಲವೆಂಬತೆ ಟೂರಿಸ್ಟ್ ಗಳು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ.
ತಂಗಿ ಜೊತೆಗಿದ್ದ ಫೋಟೋ ಶೇರ್; ಪುಡಿರೌಡಿಗಳಂತೆ ಯುವಕನಿಗೆ ಕ್ರೂರವಾಗಿ ಥಳಿಸಿದ ಪುಂಡರು