newsics.com
ಮಡಿಕೇರಿ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿಂದ ಕೊಡಗಿಗೆ ಪತಿ ಸ್ನೇಹಿತರ ಜೊತೆಬಂದಿದ್ದು, ಇಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ‘ಕಾಫಿ ಸಿಪ್’ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. ನನ್ನ ಪತಿ ದತ್ತ ಕೂಡ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಸಿಂಧು ಬಹಿರಂಗಪಡಿಸಿಲ್ಲ.
ವಿಶ್ವಚಾಂಪಿಯನ್ ಶಿಪ್, ಒಲಂಪಿಕ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಧು, ಬ್ಯಾಡ್ಮಿಂಟನ್ನಲ್ಲಿ ವರ್ಲ್ಡ್ ರ್ಯಾಂಕಿಂಗ್ 2 ಸ್ಥಾನದಲ್ಲಿದ್ದಾರೆ.
ಹೆಸರಾಂತ ಉದ್ಯಮಿ ವೆಂಕಟದತ್ತ ಸಾಯಿ ಅವರನ್ನು ಕಳೆದ ಡಿಸೆಂಬರ್ನಲ್ಲಿ ವಿವಾಹವಾಗಿರುವ ಸಿಂಧು ವಿಶ್ರಾಂತಿ ಬಯಸಿ ಪತಿಯೊಂದಿಗೆ ಕೊಡಗಿಗೆ ಬಂದಿದ್ದರು.