newsics.com
ಚನ್ನರಾಯಪಟ್ಟಣ(ಹಾಸನ): ಕೋರ್ಟ್ಗೆ ಸಾಕ್ಷಿ ಹೇಳಲು ಬಂದ ಕುಟುಂಬದವರ ಮೇಲೆ ದುಷ್ಕರ್ಮಿಗಳು ಸಿನಿಮಾ ಶೈಲಿಯಲ್ಲಿ ಹಲ್ಲೆ ಮಾಡಿರುವ ಘಟನೆ ಪಟ್ಟಣದ ನ್ಯಾಯಾಲಯದ ಎದುರು ಸೋಮವಾರ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿ ಅಂಕನಹಳ್ಳಿ ಗ್ರಾಮದಿಂದ ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಯನ್ನು ದಿನೇಶ್ ಎಂದು ಗುರುತಿಸಲಾಗಿದೆ. ಜೆಎಂಎಫ್ಸಿ ನ್ಯಾಯಾಲಯದ ಮುಂಭಾಗ ಈ ಘಟನೆ ನಡೆದಿದೆ.
ತಾಲ್ಲೂಕಿನ ಅಂಕನಹಳ್ಳಿ ಗ್ರಾಮದ ವೆಂಕಟೇಶ್ ಮತ್ತು ಅವರ ದಾಯಾದಿಗಳ ನಡುವೆ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿತ್ತು. ಜಮೀನು ವ್ಯಾಜ್ಯದ ಕೇಸ್ಗೆ ಸಂಬಂಧಿಸಿದಂತೆ ಕುಟುಂಬದವರೆಲ್ಲರೂ ಹಾಜರಾಗುವಂತೆ ನ್ಯಾಯಾಧೀಶರು ನೀಡಿದ್ದ ಆದೇಶದಂತೆ ಎಲ್ಲರೂ ಬಂದಿದ್ದರು. ಅದರಂತೆ ವೆಂಕಟೇಶ್, ಆತನ ಭಾವ ಮಂಜುನಾಥ್, ಅಕ್ಕ ಮಧುಕುಮಾರಿ, ಪತ್ನಿ ರಮ್ಯ ಸೇರಿದಂತೆ 7 ತಿಂಗಳ ಹಸುಗೂಸಿನೊಂದಿಗೆ ತಮ್ಮ ಕಾರಿನಲ್ಲಿ ಬಂದಿದ್ದರು.
ನ್ಯಾಯಾಲಯದ ಮುಂಭಾಗ ಕಾರ್ ನಿಲ್ಲಿಸಿ ಕೆಳಕ್ಕೆ ಇಳಿಯುವ ವೇಳೆಗೆ ಸಿನಿಮೀಯ ರೀತಿಯಲ್ಲಿ ಅಲ್ಲಿಗೆ ಬಂದ ಅಪರಿಚತ ವ್ಯಕ್ತಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಕುಟುಂಬಸ್ಥರ ಮೇಲೆ ದಾಳಿ ನಡೆಸಿದರು. ಪರಿಣಾಮ ವೆಂಕಟೇಶ್, ಮಂಜುನಾಥ್ ಎಂಬುವರು ಪರಾರಿಯಾಗಲು ಯತ್ನಿಸಿದರು. ಆ ವೇಳೆ ಸ್ಥಳೀಯರು ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಆರೋಪಿಗಳಾದ ಪಟ್ಟಣದ ದಿನೇಶ್, ಚೇತನ್, ಬೆಂಗಳೂರು ಮೂಲದ ಪ್ರಕಾಶ್ ಪೊಲೀಸರ ವಶದಲ್ಲಿದ್ದಾರೆ. ಗಾಯಾಳು ಮಂಜುನಾಥ್ ಮತ್ತು ವೆಂಕಟೇಶ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
cigarette kills life ಒಂದು ಸಿಗರೇಟ್ನಿಂದ ಮಹಿಳೆಯರ 22 ನಿಮಿಷ, ಪುರುಷರ 17 ನಿಮಿಷ ಜೀವಿತಾವಧಿ ನಾಶ!