newsics.com
ಮಂಡ್ಯ: ಕಾವೇರಿ ಮಡಿಲಲ್ಲಿ ಮೂರನೇ ಬಾರಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ 94 ವರ್ಷದ ಗೊರುಚ ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಸಾಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ನಾಡೋಜ ಡಾ.ಗೊ.ರು. ಚನ್ನಬಸಪ್ಪ ಅವರನ್ನು ಮೆರವಣಿಗೆ ಮೂಲಕ ಮೈಸೂರು- ಬೆಂಗಳೂರು ರಸ್ತೆ ಮಾರ್ಗದ ಮೂಲಕ ಸಮ್ಮೇಳನ ನಡೆಯುತ್ತಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸಮ್ಮೇಳನ ಮಂಟಪದವರೆಗೆ ಕರೆತರಲಾಯಿತು.
ಸಾಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ನಾಡೋಜ ಡಾ.ಗೊ.ರು. ಚನ್ನಬಸಪ್ಪನವರು ಆಸೀನರಾಗಿದ್ದರೆ, ಮುಂಭಾಗದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಚಿಟ್ಟಿಮೇಳ, ಪುಸ್ತಕ ಮೆರವಣಿಗೆ, ಪೂರ್ಣಕುಂಭ, ಕೋಲಾಟ, ಕಂಸಾಳೆ, ಸೋಮನ ಕುಣಿತ, ತಮಟೆ, ಕೊಂಬು ಕಹಳೆ, ಸಾಂಪ್ರದಾಯಿಕ ಎತ್ತಿನ ಬಂಡಿ, ಕುದುರೆ ಟಾಂಗಾ, ಮಹಾಪುರುಷರ ಛದ್ಮವೇಷಧಾರಿಗಳು ಸೇರಿದಂತೆ ಪೊಲೀಸ್ ಬ್ಯಾಂಡ್ ಕಲರವ ಮೊಳಗಿತು.
ಎಲ್ಲೆಡೆ ಹಳದಿ, ಕೆಂಪು ಬಾವುಟ, ಶಲ್ಯ, ತೋರಣಗಳೇ ಕಂಗೊಳಿಸುತ್ತಿದ್ದು, ಮೆರವಣಿಗೆಯುದ್ದಕ್ಕೂ ಜನರು ಸಂಭ್ರಮದಿಂದ ಹೆಜ್ಜೆ ಹಾಕಿದರು. ಅಷ್ಟದಿಕ್ಕುಗಳಿಂದಲೂ ಕನ್ನಡಮ್ಮ ಜಯಘೋಷ ಮೊಳಗುತ್ತಿದ್ದು, ಕನ್ನಡ ನಾಡು, ನುಡಿ ಅಭಿಮಾನ ಮುಗಿಲು ಮುಟ್ಟುತ್ತಿದೆ.
Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ
Mandya sahitya sammelana ಸಕ್ಕರೆ ನಾಡಲ್ಲಿ ನುಡಿಜಾತ್ರೆ: ಕೊನೆ ಕ್ಷಣದವರೆಗೂ ಸಿದ್ಧತೆ ಕಸರತ್ತು
Jewargi bandh ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ಜೇವರ್ಗಿ ಬಂದ್