newsics.com
ಹೈದರಾಬಾದ್: ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗುವಂತಹ ವ್ಯವಸ್ಥೆ ಅಳವಡಿಕೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.
ಕೃತಕ ಬುದ್ಧಿಮತ್ತೆ ಮೂಲಕ ಮುಖದ ಗುರುತು ಪತ್ತೆ ತಂತ್ರಜ್ಞಾನ ಅಳವಡಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ನಿರ್ಧರಿಸಿದ್ದು, ಇದರಿಂದಾಗಿ ಭಕ್ತರಿಗೆ ಶೀಘ್ರವೇ ತಿಮ್ಮಪ್ಪನ ದರ್ಶನ ಸಾಧ್ಯವಾಗಲಿದೆ.
ಆರು ತಿಂಗಳೊಳಗೆ ಎಐ ಪವರ್ಡ್ ಸಿಸ್ಟಮ್ ಅನುಷ್ಠಾನಕ್ಕೆ ಬರಲಿದೆ. ಒಮ್ಮೆ ಈ ನೂತನ ಎಐ ವ್ಯವಸ್ಥೆ ಅನುಷ್ಠಾನಗೊಂಡರೆ ಸಾಮಾನ್ಯ ಭಕ್ತರೂ ಕೇವಲ ಒಂದೇ ಗಂಟೆಯೊಳಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ತಿಳಿಸಿದ್ದಾರೆ.
ತಿರುಮಲ ಮತ್ತು ತಿರುಪತಿಯಲ್ಲಿ ಈಗಾಗಲೇ ಬೆಂಗಳೂರು ಮೂಲದ ಕಂಪನಿಯೊಂದು ಈ ಮಹತ್ವದ ಯೋಜನೆಯ ತಯಾರಿಯಲ್ಲಿ ತೊಡಗಿದ್ದು, ತಿರುಮಲವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತಿಸುವ ಕನಸು ನನಸಾಗಲಿದೆ.
ವಿಮಾನ ನಿಲ್ದಾಣದಲ್ಲಿ ಉಪಯೋಗಿಸಲ್ಪಡುವ ಡಿಜಿ ಯಾತ್ರಾ ವ್ಯವಸ್ಥೆಯ ತಂತ್ರಜ್ಞಾನದಿಂದ ಪ್ರಭಾವಿತರಾಗಿ ನಾವು ಎಐ ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದೇವೆ. ಹೀಗೆ ಎಐ ತಂತ್ರಜ್ಞಾನ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಲಿಪಿರಿ ಸೇರಿದಂತೆ ನಿಗದಿಪಡಿಸಿದ 20 ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರ ಮುಖಗಳನ್ನು ಸ್ಕ್ಯಾನ್ ಮಾಡಲಿದೆ. ಅದು ದರ್ಶನದ ಕರಾರುವಕ್ ಸಮಯವನ್ನು ನಿಗದಿಪಡಿಸಲಿದ್ದು, ನಂತರ ಭಕ್ತರು ಸಾಲಿನಲ್ಲಿ ನಿಂತು ಕೇವಲ ಒಂದು ಗಂಟೆಯೊಳಗೆ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ ಎಂದು ನಾಯ್ದು ಹೇಳಿದ್ದಾರೆ.
Ustad Zakir Memory ಡಮರುಗವಾದ ತಬಲಾ… ಉಸ್ತಾದ್ ಝಾಕಿರ್ ಕೈಬೆರಳುಗಳ ಚಮತ್ಕಾರ ನೋಡಿ, ಅವರ ಅದ್ಭುತ ಮಾತನ್ನೂ ಕೇಳಿ!
12 people died ರೆಸ್ಟೋರೆಂಟ್ನಲ್ಲಿ 12 ಮಂದಿಯ ಶವ ಪತ್ತೆ: ಸಾವಿಗೇನು ಕಾರಣ?