newsics.com
ನಾವು ಹುಟ್ಟಿದ ದಿನ, ಘಳಿಗೆ ನಮ್ಮ ಭವಿಷ್ಯ ನಿರ್ಧಾರ ಮಾಡುತ್ತದೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆ ಹಲವು ಬಾರಿ ನಿಜವಾದದ್ದೂ ಇದೆ. ಜನ್ಮಸಂಖ್ಯೆಯು ಅದರದ್ದೇ ಆದ ವಿಶಿಷ್ಟ ಶಕ್ತಿ ಹೊಂದಿರುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದ ಅಭಿಪ್ರಾಯ. ಈ ಸಂಖ್ಯೆಗನುಗುಣವಾಗಿ ಮಂತ್ರಗಳನ್ನು ಜಪಿಸಿದರೆ ನಮ್ಮ ಜೀವನದಲ್ಲಿ ನಾವು ಸಮಗ್ರ ಏಳಿಗೆಯನ್ನು ಕಾಣಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಹೆಚ್ಚಿನ ಆದ್ಯತೆ ಇದೆ. ಮಂತ್ರಗಳು ಮನಸ್ಥಿತಿ, ಸಮೃದ್ಧಿ ಎಲ್ಲವನ್ನೂ ಹೆಚ್ಚಿಸುತ್ತದೆ ಎಂಬ ಗಾಢ ನಂಬಿಕೆ ಇದೆ. ಆಯಾ ಜನ್ಮಸಂಖ್ಯೆಯವರು ಅವರಿಗೆ ಅನುಗುಣವಾಗುವ ಮಂತ್ರಗಳನ್ನು ಹೇಳುವ ಮೂಲಕ ದೈವಿಕ ಅನುಗ್ರಹ ಪಡೆಯಬಹುದು, ಧನಾತ್ಮಕ ಕಂಪನಗಳನ್ನು ವರ್ಧಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.
ನೀವು ಹುಟ್ಟಿದ ದಿನಾಂಕ. ಜನ್ಮಸಂಖ್ಯೆಯು ನಿಮ್ಮ ದಿನದ ಸಂಖ್ಯೆಯ ಏಕ-ಅಂಕಿಯ ಒಟ್ಟು ಮೊತ್ತವಾಗಿದೆ. ಉದಾಹರಣೆಗೆ, ನೀವು ನಿಮ್ಮ ಜನ್ಮ ದಿನಾಂಕ 14 ಆಗಿದ್ದರೆ, ನಿಮ್ಮ ಜನ್ಮಸಂಖ್ಯೆ 1+4=5 ಆಗಿರುತ್ತದೆ. ಅದೇ ನೀವು 5, 6 ರಂದು ಹುಟ್ಟಿದ್ದರೆ ಅದೇ ಸಂಖ್ಯೆಯನ್ಬು ಪರಿಗಣಿಸಿ.
ಸಂಖ್ಯೆ 1 (ಸೂರ್ಯ)
ಈ ದಿನದಲ್ಲಿ ಹುಟ್ಟಿದವರು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಅಭಿವೃದ್ಧಿ ಹೊಂದುತ್ತಾರೆ. ಇವರು ಓಂ ಸೂರ್ಯಾಯ ನಮಃ ಎಂದು ಜಪಿಸಬೇಕು. ಇದು ಅವರ ಬಲ ಹಾಗೂ ವರ್ಚಸ್ಸನ್ನು ಹೆಚ್ಚಿಸುತ್ತದೆ. ಸೂರ್ಯನ ತೇಜಸ್ಸನ್ನು ಪಡೆಯುವ ಮೂಲಕ ಮುಂದೆ ಹೋಗುವ ದಾರಿಯನ್ನು ಸುಗಮಗೊಳಿಸುತ್ತದೆ.
ಸಂಖ್ಯೆ 2 (ಚಂದ್ರ)
ಸಂಖ್ಯೆ 2ರಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ಅರ್ಥಗರ್ಭಿತ ವ್ಯಕ್ತಿಗಳು. ಇವರು ಓಂ ಚಂದ್ರಾಯ ನಮಃ ಎಂಬ ಮಂತ್ರ ಜಪಿಸಬೇಕು. ಇದು ಸಮತೋಲನವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ಮಂತ್ರವು ಭಾವನಾತ್ಮಕ ಸಾಮರಸ್ಯ ಹೆಚ್ಚಿಸುತ್ತದೆ ಮತ್ತು ಶಾಂತ ಮನಸ್ಸನ್ನು ಬೆಳೆಸುತ್ತದೆ.
ಸಂಖ್ಯೆ 3 (ಗುರು)
ಈ ಸಂಖ್ಯೆಯಲ್ಲಿ ಹುಟ್ಟಿದವರು ಓಂ ಗುರುವೇ ನಮಃ ಎಂಬ ಸ್ತೋತ್ರವನ್ನು ಪಠಿಸಬೇಕು. ಇದು ಬುದ್ಧಿವಂತಿಕೆಯ ಬಾಗಿಲು ತೆರೆಯುತ್ತದೆ. ವೈಯಕ್ತಿಕ ಬೆಳವಣಿಗೆಯನ್ನು ವರ್ಧಿಸುತ್ತದೆ.
ಸಂಖ್ಯೆ 4 (ರಾಹು)
ಜನ್ಮಸಂಖ್ಯೆ 4 ಆಗಿದ್ದಲ್ಲಿ ಅವರು ಓಂ ರಾಹವೇ ನಮಃ ಎಂದು ಜಪಿಸಬೇಕು. ಈ ಮಂತ್ರದೊಂದಿಗೆ ದಿನ ಆರಂಭಿಸುವುದರಿಂದ ರಾಹುವಿನ ಶಕ್ತಿಯನ್ನು ಶಾಂತಗೊಳಿಸುತ್ತದೆ ಮತ್ತು ಸ್ಥಿರತೆಯನ್ನು ಪೋಷಿಸುತ್ತದೆ. .
ಸಂಖ್ಯೆ 5 (ಬುಧ)
ಓಂ ಬುಧಾಯ ನಮಃ ಎಂದು ಐದನೇ ಸಂಖ್ಯೆಯಲ್ಲಿ ಹುಟ್ಟಿದವರು ಹೇಳುವುದರಿಂದ ಅವರ ಸಂವಹನ ಮತ್ತು ಹಾಸ್ಯವು ಅಭಿವೃದ್ಧಿಗೊಳ್ಳುತ್ತದೆ. ಇದು ಸ್ಪಷ್ಟತೆಯೊಂದಿಗೆ ಮನಸ್ಸನ್ನು ಜೋಡಿಸುವಾಗ ಬುದ್ಧಿಶಕ್ತಿ ಮತ್ತು ಸಂವಹನವನ್ನು ಬಲಪಡಿಸುತ್ತದೆ.
ಸಂಖ್ಯೆ 6 (ಶುಕ್ರ)
ಆರನೇ ಸಂಖ್ಯೆಯವರು ಓಂ ಶುಕ್ರಾಯ ನಮಃ ಎಂಬ ಮಂತ್ರ ಜಪಿಸುವುದರಿಂದ ಪ್ರೀತಿ, ಸೌಂದರ್ಯ ಮತ್ತು ಐಷಾರಾಮವನ್ನು ಪಡೆಯಬಹುದು. ಇದು ಸಂಬಂಧಗಳನ್ನು ಗಾಢವಾಗಿಸುತ್ತದೆ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.
ಸಂಖ್ಯೆ 7 (ಕೇತು)
ಸಂಖ್ಯೆ 7ರಲ್ಲಿ ಹುಟ್ಟಿದವರು ಓಂ ಕೇತವೇ ನಮಃ ಎಂದು ಹೇಳುತ್ತಿರಬೇಕು. ಈ ಮಂತ್ರ ಸ್ಪಷ್ಟತೆಯನ್ನು ತರುತ್ತದೆ, ಗೊಂದಲವನ್ನು ಪರಿಹರಿಸುತ್ತದೆ. ಜೀವನದಲ್ಲಿ ಬೆಳವಣಿಗೆಯನ್ನು ತರುತ್ತದೆ.
ಸಂಖ್ಯೆ 8 (ಶನಿ)
ಸಂಖ್ಯೆ ಎಂಟರ ವ್ಯಕ್ತಿಗಳು ಓಂ ಶಂ ಶನಿಶ್ಚರಾಯ ನಮಃ ಎಂದು ಉಚ್ಛರಿಸುತ್ತಿದ್ದರೆ, ಅವರಿಗೆ ದೇವರ ಅನುಗ್ರಹವಾಗುತ್ತದೆ. ಇದು ಶನಿಯ ತೀವ್ರ ಪ್ರಭಾವವನ್ನು ಸರಾಗಗೊಳಿಸುತ್ತದೆ ಮತ್ತು ಶಿಸ್ತನ್ನು ಉತ್ತೇಜಿಸುತ್ತದೆ.
ಸಂಖ್ಯೆ 9 (ಮಂಗಳ)
9ನೇ ಸಂಖ್ಯೆಯಲ್ಲಿ ಜನಿಸಿದವರಿಗೆ ಓಂ ಮಂಗಳಾಯ ನಮಃ ಮಂತ್ರವು ಇನ್ನಿಲ್ಲದ ಪ್ರಯೋಜನ ನೀಡುತ್ತದೆ. ಇದು ಧೈರ್ಯ, ಗಮನ ಮತ್ತು ಅಚಲ ನಿರ್ಣಯವನ್ನು ಉತ್ತೇಜಿಸುತ್ತದೆ.
Relationship | ಕುಳ್ಳಗಿರುವ ಹುಡುಗಿಯರೇ ಯಾಕೆ ಹುಡುಗರಿಗೆ ಹೆಚ್ಚು ಇಷ್ಟವಾಗ್ತಾರೆ?
Menstrual fluctuations | ಋತುಚಕ್ರ ಏರುಪೇರಾಗ್ತಿದ್ಯಾ? ಮುಟ್ಟು ಹೆಚ್ಚು ಕಮ್ಮಿಯಾಗಲು ಈ ಅಂಶಗಳೇ ಕಾರಣ!