newsics.com
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ತನಿಖೆ ನಡೆಸಿದ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಜರಡಿ ಹಿಡಿದಂತೆ ಜಾಲಾಡಿದ್ದಾರೆ. ದರ್ಶನ್ ಗ್ಯಾಂಗ್ ಕೇಸ್ಗೆ ಮತ್ತೊಂದು ಸ್ಫೋಟಕ ಸಾಕ್ಷ್ಯ ಲಭ್ಯವಾಗಿದೆ.
ರೇಣುಕಾಸ್ವಾಮಿ ಕೊನೆಯುಸಿರೆಳೆದ ಮೇಲೆ ದರ್ಶನ್ ಗ್ಯಾಂಗ್ನಿಂದ ಸಾಕ್ಷಿ ನಾಶಕ್ಕೆ ಹುನ್ನಾರಗಳು ನಡೆದಿವೆ. ದರ್ಶನ್ ಬಾಡಿಗಾರ್ಡ್ನಿಂದಲೇ ಸಾಕ್ಷಿ ನಾಶಕ್ಕೆ ಹುನ್ನಾರ ನಡೆದಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿತ್ತು ಎನ್ನಲಾಗಿದೆ.
ದರ್ಶನ್ ಬಾಡಿಗಾರ್ಡ್ ನಾಗೇಶ್, ಸಾಕ್ಷಿ ನುಡಿಯದಂತೆ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರಂತೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಬಾಡಿಗಾರ್ಡ್ ನಾಗೇಶ್ ವಿರುದ್ಧ ದೂರು ನೀಡಿದ್ದಾರೆ. ಆ ವ್ಯಕ್ತಿ ದರ್ಶನ್ ಗ್ಯಾಂಗ್ನಿಂದ ನಾಶ ಮಾಡಲಾಗಿದ್ದ ಬಟ್ಟೆ ಸಂಬಂಧ ಸಾಕ್ಷಿ ನುಡಿಯಲು ಬಂದಿದ್ದರು. ಈ ವೇಳೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ 100 ಮೀಟರ್ ದೂರದಲ್ಲಿ ಸಾಕ್ಷಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಾಗೇಶ್ ಕರೆಸಿ ವಿಚಾರಣೆ ಮಾಡಿದ್ದ ಪೊಲೀಸರು ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡಿದ್ದರು.
Child Kidnapped ಕುಡಿದ ಮತ್ತಿನಲ್ಲಿ ಮಗು ಅಪಹರಣ: 20 ಗಂಟೆ ಬಳಿಕ ಸುಖಾಂತ್ಯ, ಅಪಹರಣಕ್ಕೆ ಕಾರಣವೇನು?