newsics.com
ತಾಯಿಯವರ ಅಗಲಿಕೆಯ ಬಳಿಕ ಬಿಗ್ ಬಾಸ್ 11ಕ್ಕೆ ಮರಳಿರುವ ಕಿಚ್ಚ ಸುದೀಪ್ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.
ವೇದಿಕೆಗೆ ಬಂದಾಕ್ಷಣ ಸುದೀಪ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸುವ ಹಾಗೂ ಸಾಂತ್ವನ ಹೇಳುವ ಬಿಗ್ ಬಾಸ್ ಹಿನ್ನೆಲೆ ಧ್ವನಿಯ ಮಾತುಗಳಿಗೆ ಭಾವುಕರಾದರು. ಹಿಂದಿನ ಬಿಗ್ ಬಾಸ್ ಸ್ಪರ್ಧಿ ಹಾಗೂ ಗಾಯಕ, ನಿರ್ದೇಶಕ ವಾಸುಕಿ ವೈಭವ್ ಅವರು ‘ಪರಪಂಚ ನೀನೇ…’ ಹಾಡು ಹಾಡುತ್ತಾ ವೇದಿಕೆಗೆ ಬಂದಾಗ ಕಿಚ್ಚ ಅಕ್ಷರಶಃ ಕಣ್ಣೀರಿಟ್ಟರು.

ಬಿಗ್ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಾಮಾನ್ಯವಾಗಿ ಸಖತ್ ಖಡಕ್, ಇಲ್ಲ ತಮಾಷೆ ಮಾಡುತ್ತಾ ಕಾಣಿಸಿಕೊಳ್ಳುವ ಸುದೀಪ್ ಶನಿವಾರ ಮಾತ್ರ ತೀರಾ ಭಾವುಕರಾದರು. ಬಿಗ್ ಬಾಸ್ ವೇದಿಕೆ ಮೇಲೆಯೇ ಸುದೀಪ್ ಕಣ್ಣೀರು ಹಾಕಿದರು.
ಅಕ್ಟೋಬರ್ 19ರಂದು ಬಿಗ್ಬಾಸ್ ಶೋ ನಡೆಸಿಕೊಡುವಾಗಲೇ ತಾಯಿಯ ಅನಾರೋಗ್ಯದ ಸುದ್ದಿ ತಿಳಿದು ಅರ್ಧಕ್ಕೇ ಶೋ ನಿಲ್ಲಿಸಿ ಹೋಗಿದ್ದ ಸುದೀಪ್ ಒಂದು ವಾರದ ಗ್ಯಾಪ್ ಬಳಿಕ ವೇದಿಕೆ ಮೇಲೆ ಮರಳಿದ್ದಾರೆ.
ಸುದೀಪ್ ಅವರ ತಾಯಿಗೆ ಬಿಗ್ಬಾಸ್ ಸಹ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಭಾವುಕರಾಗಿದ್ದಾರೆ.

ಹಿಂದಿನ ಬಿಗ್ಬಾಸ್ ಸ್ಪರ್ಧಿ, ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ವೇದಿಕೆಗೆ ಬಂದು ಪರಪಂಚ ನೀನೆ ಹಾಡುವಾಗ ಎಲ್ಸಿಡಿಯಲ್ಲಿ ಸುದೀಪ್ ತಾಯಿಯವರ ಚಿತ್ರ ಮೂಡಿತು. ಬಿಗ್ಬಾಸ್ ಸ್ಪರ್ಧಿಗಳು ಸಹ ಎಲ್ಲರೂ ಎದ್ದು ನಿಂತು ಸುದೀಪ್ ತಾಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಮದ್ದುಗುಂಡಿನ ಕಾರ್ಟ್ರಿಡ್ಜ್ ಪತ್ತೆ, ಹೇಗಾಯ್ತು ಭದ್ರತಾ ಲೋಪ?
ರಷ್ಯಾ ಬೆಂಬಲಿಸಿದ ಭಾರತದ 19 ಕಂಪನಿ ಮೇಲೆ ಅಮೆರಿಕ ನಿರ್ಬಂಧ: ಭಾರತ ಹೇಳಿದ್ದೇನು?
ಹಬ್ಬದ ವೇಳೆಯಲ್ಲೂ ಕಾರು ಕೊಳ್ಳುವವರಿಲ್ಲ! ಮಾರಾಟದಲ್ಲಿ ಭಾರೀ ಕುಸಿತ, ಏನು ಕಾರಣ?