Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ
ಕರ್ನಾಟಕಪ್ರಮುಖವೈರಲ್

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

Share
2 Min Read
SHARE

newsics.com| ನ್ಯೂಸಿಕ್ಸ್

ಹಾಸನ: ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರು ಸೀಟ್‌ಗಾಗಿ ಪರಸ್ಪರ ಕಿತ್ತಾಡಿಕೊಳ್ಳುವುದು‌ ಮಾಮೂಲಿಯಾಗಿಬಿಟ್ಟಿದೆ.

ಈಗ ಮಹಿಳಾ ಪ್ರಯಾಣಿಕರೊಬ್ಬರು ತುಸು ಮುಂದುವರಿದಿದ್ದಾರೆ. ತಾವು ಹತ್ತಿದ್ದ ಬಸ್‌ನ ಕಂಡಕ್ಟರ್‌ ಜತೆಯೇ ಜಗಳಕ್ಕೆ ಇಳಿದಿದ್ದರು. ಅದಕ್ಕೆ ಪ್ರತಿಯಾಗಿ ಕಂಡಕ್ಟರ್‌ ಕೂಡ ಕೈಮಿಲಾಯಿಸಿದ್ದಾರೆ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಬೇಲೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಘಟನೆ ನಡೆದಿದೆ. ಇದರಲ್ಲಿ ನಿರ್ವಾಹಕಿ ಮತ್ತು ಮಹಿಳಾ ಪ್ರಯಾಣಿಕರೊಬ್ಬರ ಮಧ್ಯೆ ತೀವ್ರವಾಗಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅದು ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿತ್ತು. ಇನ್ನು ಈ ಮಹಿಳೆ ಮದ್ಯಪಾನ ಮಾಡಿ ಬಸ್‌ ಹತ್ತಿದ್ದರು. ಉಳಿದ ಪ್ರಯಾಣಿಕರು ಕೂಡ ಮಹಿಳೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಘಟನೆ ನಡೆದಿದ್ದು ಯಾವಾಗ?

ಈ ಘಟನೆ ನಡೆದಿದ್ದು ಶನಿವಾರ (ಜು.18) ಸಂಜೆ 4ಗಂಟೆ ಹೊತ್ತಿಗೆ. ಕೆಎಸ್‌ಆರ್‌ಟಿಸಿ ಬಸ್ (ನಂಬರ್ KA-13 F 2353) ಹಾಸನ ಮಾರ್ಗವಾಗಿ ಚಲಿಸುತ್ತಿತ್ತು. ಮಹಿಳೆ ಕುಡಿದು ಬಸ್‌ ಹತ್ತಿದ್ದರು. ಮೊದಲು ನಿರ್ವಾಹಕಿ ಮತ್ತು ಈಕೆಯ ಮಧ್ಯೆ ಸಣ್ಣದಾಗಿ ಜಗಳ ಶುರುವಾಯಿತು. ಅದಾದ ಮೇಲೆ ಮಹಿಳೆ ನಿರ್ವಾಹಕಿಗೆ ಏನು ಮಾಡಿದಳೋ ಗೊತ್ತಿಲ್ಲ, ನಿರ್ವಾಹಕಿ ಈಕೆಗೆ ಹೊಡೆದಿದ್ದಾರೆ. ಕಾಲಿನಿಂದ ಒದ್ದಿದ್ದಾರೆ.

ಅಲ್ಲಿದ್ದ ಉಳಿದ ಮಹಿಳೆಯರೂ, ಈ ಮದ್ಯಪಾನ ಮಾಡಿ ಗಲಾಟೆ ಸೃಷ್ಟಿಸಿದ ಮಹಿಳೆ ವಿರುದ್ಧ ತಿರುಗಿಬಿದ್ದಿದ್ದರು. ಇನ್ನು ಅಲ್ಲಿದ್ದ ಕೆಲವರು ʼಆಕೆಯನ್ನು ಬಸ್‌ನಿಂದ ಆಚೆಗೆ ಹಾಕಿʼ ಎಂದು ಹೇಳುತ್ತಿರುವುದನ್ನೂ ವಿಡಿಯೊದಲ್ಲಿ ಕೇಳಬಹುದು.

ಬಸ್‌ನಲ್ಲಿ ಈ ಗಲಾಟೆ ಶುರುವಾಗುತ್ತಿದ್ದಂತೆ ಉಳಿದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಯಾವ ಕಾರಣಕ್ಕಾಗಿ ಗಲಾಟೆ ಶುರುವಾಯಿತು. ಯಾರದ್ದು ತಪ್ಪು ಎಂಬಿತ್ಯಾದಿ ಮಾಹಿತಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಕಲೆಹಾಕಲು ಪ್ರಯತ್ನಿಸುತ್ತಿದ್ದಾರೆ.

ಆದರೂ ಕೆಲವರು ಹೇಳುತ್ತಿರುವ ಪ್ರಕಾರ ಈ ಮಹಿಳೆ ಕುಡಿದಿದ್ದರು. ನಿಲ್ಲಲು ಸಾಧ್ಯವಾಗದೆ ಇದ್ದಾಗ ಸೀಟ್‌ಗಾಗಿ ಜಗಳ ಮಾಡಿದ್ದಾರೆ. ಸೀಟ್‌ ಬೇಕು ಎಂದು ಗಲಾಟೆ ಮಾಡಿದ್ದಾರೆ. ಬಿಟ್ಟು ಬಿಡದೆ ಮಹಿಳಾ ಕಂಡಕ್ಟರ್‌ಗೆ ತೊಂದರೆ ಕೊಟ್ಟಿದ್ದರು. ಕಂಡಕ್ಟರ್‌ ಮೇಲೆ ಹಲ್ಲೆಯನ್ನೂ ನಡೆಸಿದ್ದರು.

ಅದಕ್ಕೆ ಪ್ರತಿಯಾಗಿ ಕಂಡಕ್ಟರ್‌ ಮತ್ತು ಉಳಿದ ಮಹಿಳೆಯರು ಈಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ. ಆದರೆ ವಿಡಿಯೊದಲ್ಲಿ ಅರ್ಧದಿಂದ ಕಾಣಿಸುತ್ತಿದೆ. ಅದರಲ್ಲಿ ಮೊದಲಿಗೆ ನಿರ್ವಾಹಕಿಯೇ ಆಕೆಯ ಮೇಲೆ ಹಲ್ಲೆ ಮಾಡೋದನ್ನ ನೋಡಬಹುದು.

ಸರ್ಕಾರಿ ಬಸ್‌ಗಳಲ್ಲಿ ಸೀಟಿಗಾಗಿ ಬೈಗುಳ-ಜಗಳಗಳು ಸಾಮಾನ್ಯ. ಅದರಲ್ಲೂ ಮಹಿಳೆಯರ ಮಧ್ಯೆಯೇ ಗಲಾಟೆ ಆಗುವುದು ಹೆಚ್ಚು. ಇನ್ನು ಚಿಲ್ಲರೆ ವಿಷಯಕ್ಕೆ, ಬಸ್‌ ಸರಿಯಾದ ಜಾಗದಲ್ಲಿ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಕಂಡಕ್ಟರ್‌ ಜತೆ ಜಗಳವೂ ನಡೆಯುತ್ತದೆ. ಅದರಲ್ಲೂ ಮಹಿಳೆಯರಿಗೆ ಫ್ರೀ ಬಸ್‌ ಪ್ರಯಾಣ ಆದಾಗಿನಿಂದಲೂ ಬಸ್‌ಗಳು ಜಾಸ್ತಿ ರಶ್‌ ಆಗುತ್ತವೆ. ಸೀಟ್‌ಗಾಗಿ ನಡೆಯುವ ಫೈಟ್‌ ಹೆಚ್ಚಾಗಿದೆ.

Public Transport or Battleground? Fight Erupts Between Woman Conductor and Passenger

A heated argument between a woman conductor and a woman passenger on a KSRTC bus travelling from Belur to Hassan escalated into a physical altercation on Saturday evening.The incident took place… pic.twitter.com/LarOphAVdh

— Karnataka Portfolio (@karnatakaportf) July 19, 2026

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

Menstrual Cycle ಲ್ಯಾಪ್‌ಟಾಪ್ ಸ್ಕ್ರೀನ್ ಹಾಗೂ ಒತ್ತಡದಿಂದ ಪಿರಿಯಡ್ಸ್ ಲೇಟ್ ಆಗ್ತಿದ್ಯಾ? ಇಲ್ಲಿದೆ ಸಿಂಪಲ್ ಪರಿಹಾರ

Junk food ban ರಾಜ್ಯದ ಎಲ್ಲ ಆಸ್ಪತ್ರೆ, ಶಾಲಾ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ನಿಷೇಧ, ಮಾಲ್‌ಗಳಲ್ಲಿ ಕಳಪೆ‌ ಆಹಾರಕ್ಕೆ ನಿರ್ಬಂಧ: ಸಚಿವ ಖಾದರ್

 

 

TAGGED:#ksrtcbus #hassan #seat #women #fight # attack #womanconducter #news #video #kannadanews #newsics
Share This Article
Facebook Twitter Copy Link Print
Previous Article Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್
Next Article Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

Popular Posts

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read

You Might Also Like

ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read
ಪ್ರಮುಖವಿದೇಶ

Samsung Layoffs ಸ್ಯಾಮ್‌ಸಂಗ್ ಉದ್ಯೋಗಿಗಳಿಗೆ ಬಿಗ್ ಶಾಕ್; ಹೆಡ್‌ಕ್ವಾರ್ಟರ್ಸ್ ಶಿಫ್ಟ್ ನೆಪದಲ್ಲಿ 800 ನೌಕರರ ವಜಾ

2 Min Read
ದೇಶಪ್ರಮುಖ

DGP found dead ಕಚೇರಿಯಲ್ಲೇ ಡಿಜಿಪಿ ನಿಗೂಢ ಸಾವು: ಇಲಾಖೆಯಲ್ಲಿ ತಲ್ಲಣ!

1 Min Read
ಪ್ರಮುಖದೇಶ

Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?