newsics.com
ಬೆಂಗಳೂರು: ಗಿಣಿರಾಮ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ಕಿರುತೆರೆಯ ನಟಿ ನಯನಾ ನಾಗರಾಜ್ ಅದೇ ಧಾರಾವಾಹಿ ತಂಡದ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ.
ನಾನೇ ಗಿಣಿರಾಮ ಸೀರಿಯಲ್ ಬಿಟ್ಟು ಹೊರಬಂದೆ ಎಂದಿರುವ ನಯನಾ, ಶೂಟಿಂಗ್ ವೇಳೆ ಆದ ಕಹಿ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಆನ್ಸ್ಕ್ರೀನ್ನಲ್ಲಿ ವೀಕ್ಷಕರ ಮುಂದೆ ಎಲ್ಲರೂ ಕಲರ್ ಕಲರ್ ಆಗಿಯೇ ಕಾಣಿಸುತ್ತಾರೆ. ಆದರೆ ಅದೇ ಆಫ್ಸ್ಕ್ರೀನ್ನಲ್ಲಿ ಆಗುವ ಅನುಭವಗಳಲ್ಲಿ ಕಹಿಯೇ ಜಾಸ್ತಿ ಎಂದು ನಯನಾ ಭಾವುಕರಾಗಿ ಹೇಳಿಕೊಂಡಿದ್ದಾರೆ.
ರೇಡಿಯೋ ಸಿಟಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಯನಾ ನಾಗರಾಜ್, ಹಾವೇರಿ ಜಿಲ್ಲೆಯಲ್ಲಿ ಶೂಟಿಂಗ್ ಇತ್ತು. ಹುಳಗಳನ್ನು ಕಂಡ್ರೆ ನನಗೆ ಭಯ ಇತ್ತು. ಅಲ್ಲಿ ಹೆಚ್ಚು ಹುಳಗಳಿದ್ವು. ರಾತ್ರಿ ಮಲಗೋ ಟೈಮ್ನಲ್ಲಿ ಹುಳಗಳು ಕಾಟ ಕೊಡ್ತಿದ್ದವು. ಮನೆಗೆ ಫೋನ್ ಮಾಡಿ ಅಳುತ್ತಿದ್ದೆ. 25 ದಿನವೂ ನಾನು ಮನೆಗೆ ಕಾಲ್ ಮಾಡಿ ಅಳುತ್ತಿದ್ದೆ. ನಾನು ಈ ಚಾನ್ಸ್ ಅನ್ನು ಒಪ್ಪಿಕೊಳ್ಳಬಾರದಿತ್ತು. ದಿನ ರಾತ್ರಿ ಬಂದು ಕಾಲಿಗೆ ಎಣ್ಣೆ ಹಚ್ಚಿಕೊಂಡು ಮಲಗುತ್ತಿದೆ. ಬೆಳಗ್ಗೆ 5 ಗಂಟೆಗೆ ಎದ್ರೆ, ರಾತ್ರಿ 12 ಗಂಟೆಗೆ ರೂಮ್ಗೆ ಬರ್ತಾ ಇದ್ದೆ. ಹನುಮಾನ್ ಚಾಲೀಸ್ ಕೇಳುತ್ತಿದ್ದೆ. ಕೋವಿಡ್ ಬಂದಿದ್ದರಿಂದ ಹಾವೇರಿ ಶೂಟ್ ನಿಲ್ಲಿಸಿದ್ದರು. ಎಷ್ಟೇ ಜ್ವರ ಇದ್ದರೂ ಶೂಟ್ ಮಾಡಲೇಬೇಕು. ನಾನು ಸೆಕೆಂಡ್ ವೇವ್ನಲ್ಲಿ ಶೂಟಿಂಗ್ ಮಾಡಿದ್ದೆ. ನನ್ನ ತಾಯಿಗೆ ಜ್ವರ ಇತ್ತು. ಅಮ್ಮನಿಗೆ ಕೋವಿಡ್ ಇದೇ ಅಂತಾ ಗೊತ್ತಾಯ್ತು. ಅಗ ಗಾಬರಿ ಆಯಿತು.
ಕೋವಿಡ್ ಇದೇ ಅಂತ ಹೇಳಿದ್ದಕ್ಕೆ ಬಾರಮ್ಮಾ ಏನೂ ಆಗಲ್ಲ ಅಂತ ಹೇಳಿಬಿಟ್ಟರು. ಕೋವಿಡ್ ರೆಸ್ಟ್ ಮಾಡಿದ ಬಳಿಕ ಪಾಸಿಟಿವ್ ಬಂತು. ಕ್ಯಾಮರಾಮನ್, ಪ್ರೊಡ್ಯೂಸರ್ ಎಲ್ಲರಿಗೂ ಮೀಟರ್ ಆಫ್ ಆಯ್ತು.
ಗಿಣಿರಾಮ ಬಿಟ್ಟಿದ್ದೇನೆ ಎನ್ನುವ ಕಾರಣಕ್ಕೆ ನನ್ನ ಜೀವನ ಮುಗಿಸಲು ಯತ್ನಿಸಿದರು. ಆಗ ನಾನು ಶೂಟಿಂಗ್ ಇದೆ ಅಂತಾ ಅಳುತ್ತಿದ್ದೆ.
ಡೈಲಾಗ್ ಟೇಕ್ ಮಾಡೋ ಟೈಮ್ನಲ್ಲಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಬೈಯುತ್ತಿದ್ದರು. ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ.
ಗಿಣಿರಾಮ ಸೀರಿಯಲ್ ನಂತರ ತೆಲುಗು ಪ್ರಾಜೆಕ್ಟ್ ಅನ್ನು ಸುಳ್ಳು ಹೇಳಿ ತಪ್ಪಿಸಿದರು. ನಾನು ಎಷ್ಟೇ ಫೋನ್ ಮಾಡಿದ್ರೂ ನಿರ್ಮಾಪಕರು ನನ್ನ ಫೋನ್ ಪಿಕ್ ಮಾಡ್ತಿರಲಿಲ್ಲ ಎಂದು ಶೂಟಿಂಗ್ ಸ್ಥಳದಲ್ಲಿ ಆದ ಕಹಿ ಘಟನೆಗಳ ಬಗ್ಗೆ ನಯನಾ ವಿವರಿಸಿದ್ದಾರೆ.
ನಿಜಕ್ಕೂ ಅಶ್ವಗಂಧ ಗಿಡಮೂಲಿಕೆ ಲೈಂಗಿಕ ಹಾರ್ಮೋನ್ಗೆ ಹಾನಿ ಮಾಡತ್ತಾ, ಗರ್ಭಪಾತಕ್ಕೆ ಕಾರಣವಾಗತ್ತಾ?
ಬೆಂಗಳೂರು ಆಟೋ ಚಾಲಕರಿಗೆ ಭಾರೀ ಶಾಕ್: ಒಂದೇ ದಿನ 800 ಆಟೋಗಳಿಗೆ ದಂಡ, 3.48 ಲಕ್ಷ ರೂ. ವಸೂಲಿ
ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ