Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!
ಕರ್ನಾಟಕಪ್ರಮುಖ

ಚಾಮುಂಡೇಶ್ವರಿ ದೇವಿಗೆ ತನ್ನ ಮನೆಯನ್ನೇ ಅರ್ಪಿಸಿದ ಶಾರದಾ!

Share
1 Min Read
SHARE

newsics.com

ಶಿವಮೊಗ್ಗ: ಜಿಲ್ಲೆಯ ಆಯನೂರು ಬಳಿಯ ಚಾಮುಂಡಿಪುರ ಗ್ರಾಮದ ವಾಸಿಯಾಗಿರುವ 80 ವರ್ಷದ ಶಾರದಾ ಅವರು ಲಕ್ಷಾಂತರ ರೂಪಾಯಿ ಬೆಲೆಬಾಳುವ ತಮ್ಮ ವಾಸದ ಮನೆ ಹಾಗೂ ಜೀವನ ನಿರ್ವಹಣೆಗೆಂದು ಬ್ಯಾಂಕ್ನಲ್ಲಿಟ್ಟದ್ದ 5 ಲಕ್ಷ ರೂಪಾಯಿ ಠೇವಣಿಯನ್ನು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರೆದುಕೊಟ್ಟಿದ್ದಾರೆ.

ನಾನು ಗ್ರಾಮದ ಚಾಮುಂಡಿ ದೇವಸ್ಥಾನದಲ್ಲಿ ನಾಲ್ಕೈದು ವರ್ಷ ಸೇವೆ ಮಾಡಿದ್ದೇನೆ. ಅಲ್ಲಿ ಕಸ ಗುಡಿಸುವ, ನೆಲ ಒರೆಸುವ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ನನ್ನ ಪತಿ ದಮ್ಮಿನಿಂದಾಗಿ ಮೃತಪಟ್ಟರು. ಇತ್ತೀಚೆಗೆ ದೇವಿ ನನಗೆ ಕನಸಿನ ರೂಪದಲ್ಲಿ ಬಂದು ಕಾಣಿಸುತ್ತಿದ್ದಳು. ಪತಿಯ ನಿಧನದ ನಂತರ ದೇವಿ ನನಗೆ ನಾನಾ ರೂಪದಲ್ಲಿ ಕನಸಿನಲ್ಲಿ ಬರುತ್ತಿದ್ದಳು. ಹೀಗಾಗಿ ನಾನು ಅಂತಿಮವಾಗಿ ಪತಿಯ ದುಡಿಮೆ ಹಣ ಹಾಗೂ ನಾನು ಗ್ರಾಮದ ಪ್ರಮುಖರ ಮನೆಯಲ್ಲಿ ಕೂಲಿ ಕೆಲಸ ಮಾಡಿ ದುಡಿದ ಹಣ ಹಾಗೂ ಮನೆಯನ್ನು ದೇವಸ್ಥಾನಕ್ಕೆ ಬರೆದುಕೊಟ್ಟಿದ್ದೇನೆ. ನನ್ನದೆಲ್ಲವನ್ನೂ ಆ ಅಮ್ಮನ ಪಾದಕ್ಕೆ ಅರ್ಪಿಸಿದ್ದೇನೆ ಎಂದು ಶಾರದಮ್ಮ ಹೇಳಿದ್ದಾರೆ.

ಶಾರದಮ್ಮ ಹಾಗೂ ಆಕೆಯ ಪತಿ ಯಲ್ಲಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಾಲ್ಕೈದು ವರ್ಷದ ಹಿಂದೆ ಯಲ್ಲಪ್ಪ ನಿಧನ ಹೊಂದಿದರು. ಈಗ ಶಾರದಮ್ಮ ಅವರು ತಾವು ವಾಸಿಸುತ್ತಿರುವ ಮನೆಯನ್ನು ವಿಲ್ ಮೂಲಕ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ. ಅವರು ದುಡಿದಿಟ್ಟಿದ್ದ ಸುಮಾರು 5 ಲಕ್ಷ ರೂಪಾಯಿ ನಗದನ್ನೂ ದೇವಸ್ಥಾನ ಸಮಿತಿಯವರಿಗೆ ನೀಡಿದ್ದಾರೆ. ಶಾರದಮ್ಮ ಬದುಕಿರುವವರೆಗೆ ಈಗಿರುವ ಮನೆಯಲ್ಲೇ ವಾಸವಿರುತ್ತಾರೆ. ನಂತರ ಅವರ ಮನೆಯನ್ನು ದೇವಸ್ಥಾನ ಸಮಿತಿಯವರು ವಶಕ್ಕೆ ತೆಗೆದುಕೊಳ್ಳುತ್ತಾರೆ. ಮಕ್ಕಳಿಲ್ಲದ ಯಲ್ಲಪ್ಪ ಹಾಗೂ ಶಾರದಮ್ಮ ದಂಪತಿ ತಮ್ಮ ನಿಧನದ ನಂತರ ತಮ್ಮ ಆಸ್ತಿ ಗ್ರಾಮದ ದೇವಸ್ಥಾನಕ್ಕೆ ನೀಡಬೇಕು ಎಂದು ತೀರ್ಮಾನಿಸಿದ್ದರು. ಅದರಂತೆಯೇ ನಡೆದುಕೊಂಡಿದ್ದಾರೆ. ಈ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಅಕ್ಟೋಬರ್ ಅಂತ್ಯದವರೆಗೂ ನಟ ದರ್ಶನ್‌ಗೆ ಸಂಕಷ್ಟ ಮುಂದವರಿಕೆ, ಜಾಮೀನು ಸಿಗುವುದು ಕಷ್ಟ: ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ

ಅಬ್ಬಬ್ಬಾ! ಊಟದ ಬಳಿಕ ಪಾನ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ?

TAGGED:Sharda wrote the will of the house to Devi Chamundeshwari
Share This Article
Facebook Twitter Copy Link Print
Previous Article ನಾಳೆಯ ಪಂಚಾಂಗದಲ್ಲೇನಿದೆ? ವಿಶೇಷವೇನಿದೆ? ಭಾನುವಾರ 7 ಜುಲೈ 2024
Next Article ಮುದ್ದಿನ ನಾಯಿಗೆ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಉಡುಗೊರೆ ನೀಡಿದ ಮಹಿಳೆ! ವೈರಲ್ ವಿಡಿಯೋ ನೋಡಿ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?