newsics.com/ನ್ಯೂಸಿಕ್ಸ್
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಟಿವಿಕೆ ಪಕ್ಷಕ್ಕೆ ಬೆಂಬಲ ಸಿಕ್ಕ ಖುಷಿಯಲ್ಲಿ ಸರ್ಕಾರ ರಜನೆಗೆ ರಾಜ್ಯಪಾಲರ ಅವಕಾಶ ಕೋರಿದ್ದಾರೆ. ದೇಶದ ರಾಜಕೀಯ ಬೆಳವಣಿಗೆ ನಡುವೆ ಸದ್ದಿಲ್ಲದೆ ಮತ್ತೊಂದು ಬಿರುಗಾಳಿ ಎದ್ದಿದೆ.
ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಂಜಾಬ್ನ ಸಚಿವ ಸಂಜೀವ್ ಅರೋರ ಅರೆಸ್ಟ್ ಆಗಿದ್ದಾರೆ.
ಜಿಎಸ್ಟಿ ವ್ಯವಹಾರದಲ್ಲಿ ಅಕ್ರಮ
ಪಂಜಾಬ್ನ ಆಪ್ ನಾಯಕ, ಪಂಜಾಬ್ ಮಿನಿಸ್ಟರ್ ಸಂಜೀವ್ ಆರೋರ ಕಳೆದ ಕೆಲ ದಿನಗಳಿಂದ ಇಡಿ ರೇಡಾರ್ನಲ್ಲಿದ್ದರು. ಜಿಎಸ್ಟಿ ಬಿಲ್ಲಿಂಗ್, ಅಕ್ರಮ ವ್ಯವಹಾರಗಳ ಆರೋಪದಡಿ ಇಡಿ ಅಧಿಕಾರಿಗಳು ಸತತ ತನಿಖೆ ನಡೆಸುತ್ತಿದ್ದರು. ಇಂದು ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸಂಜೀವ್ ಆರೋರಾ ಅವರ ಕಚೇರಿ, ಮನೆ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಇಡಿ ದಾಳಿ ನಡೆಸಿತ್ತು. ಬರೋಬ್ಬರಿ 8 ಗಂಟೆಗಳ ಶೋಧ ಕಾರ್ಯ, ವಿಚಾರಣೆ ಬಳಿಕ ಸಂಜೀವ್ ಅರೋರಾರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ನಕಲಿ ಜಿಎಸ್ಟಿ ಬಿಲ್ಲಿಂಗ್ ಪ್ರಕರಣದಲ್ಲಿ ಇಂದು ಇಡಿ ಅಧಿಕಾರಿಗಳು ಏಕಕಾಲಕ್ಕೆ ದೆಹಲಿ, ಪಂಜಾಬ್, ಗುರುಗ್ರಾಂ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದರು. ಎಪ್ರಿಲ್ 17 ರಂದು ಇದೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ಮತ್ತೆ 2ನೇ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲೇ ಸಂಜೀವ್ ಆರೋರ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಸತತ 8 ಗಂಟೆಗಳ ವಿಚಾರಣೆ ಹಾಗೂ ಶೋಧ ಕಾರ್ಯದ ಬಳಿಕ ಅರೆಸ್ಟ್ ಮಾಡಿದ್ದಾರೆ.