Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

Share
2 Min Read
SHARE

newsics.com/ನ್ಯೂಸಿಕ್ಸ್

ಮಳೆಗಾಲದಲ್ಲಿ ತಂಪು ವಾತಾವರಣ ಇರುವುದರಿಂದ ಕೀಟಗಳು ಮನೆಯೊಳಗೆ ಪ್ರವೇಶಿಸುತ್ತವೆ. ಮುಖ್ಯವಾಗಿ ಮಳೆಗಾಲದಲ್ಲಿ ಮನೆಯೊಳಗೆ ಹಾವುಗಳು ಬರುವ ಅಪಾಯ ಹೆಚ್ಚಿರುತ್ತದೆ. ಹಾವಿನ ಹೆಸರು ಕೇಳಿದರೆ ಅನೇಕರು ಹೆದರುತ್ತಾರೆ. ಹೃದಯ ಬಡಿತ ಹೆಚ್ಚಾಗುತ್ತದೆ. ಹಾವನ್ನು ನೋಡಿದಾಗ ಭಯದಿಂದ ನಡುಗುತ್ತಾರೆ. ವಿಷಪೂರಿತ ಹಾವು ಕಚ್ಚಿದರೆ ಜೀವಕ್ಕೆ ಮಾರಕವಾಗುತ್ತದೆ.

ಹಾವುಗಳು ಎಲ್ಲಿ ಬೇಕಾದರೂ ಸುಲಭವಾಗಿ ಅಡಗಿಕೊಳ್ಳಬಹುದು. ಮನೆಯ ಸುತ್ತಲಿನ ವಸ್ತುಗಳು ಹಾವುಗಳನ್ನು ಆಕರ್ಷಿಸುತ್ತವೆ. ನಿಮ್ಮ ಮನೆಯೊಳಗೆ ಹಾವುಗಳಿಂದ ಸುರಕ್ಷಿತವಾಗಿರಿಸಲು ಒಂದಿಷ್ಟು ಸಲಹೆಗಳನ್ನು ಅನುಸರಿಸಬೇಕು. ಜೊತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಕೆಲವು ವಸ್ತುಗಳ ವಾಸನೆ (smell) ಕಂಡರೆ ಹಾವುಗಳಿಗೆ ಆಗಿಬರೋದೇ ಇಲ್ಲ! ಆ ವಾಸನೆ ಬಂದ ತಕ್ಷಣ ಅವು ಅಲ್ಲಿಂದ ಓಡಿಹೋಗುತ್ತವೆ.

ವಿನೆಗರ್‌ ವಾಸನೆ:ವಿನೆಗರ್‌ನ ಬಲವಾದ ಆಮ್ಲೀಯ ವಾಸನೆಯು ಹಾವುಗಳ ಇಂದ್ರಿಯಗಳಿಗೆ ಹಾನಿ ಮಾಡುತ್ತದೆ. ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಪ್ರವೇಶ ದ್ವಾರ, ಕಿಟಕಿಗಳು ಅಥವಾ ಹಾವುಗಳು ಕಾಣಿಸಿಕೊಂಡಿರುವ ಪ್ರದೇಶಗಳ ಸುತ್ತಲೂ ಸಿಂಪಡಿಸಿ. ಹಾವುಗಳನ್ನು ಮನೆಯಿಂದ ದೂರವಿಡುತ್ತದೆ.

 

ಮಾತ್‌ಬಾಲ್ಸ್ ಬೆಸ್ಟ್:ಮಾತ್‌ಬಾಲ್‌ಗಳು ಮನೆಯಿಂದ ಹಾವುಗಳನ್ನು ದೂರವಿಡುವಲ್ಲಿ ಸಹ ಪರಿಣಾಮಕಾರಿ. ಹಾವುಗಳು ಮಾತ್‌ಬಾಲ್ಸ್​ಗಳಲ್ಲಿರುವ ನಾಫ್ಥಲೀನ್ ಸಂಯುಕ್ತದ ರಾಸಾಯನಿಕ ವಾಸನೆಯನ್ನು ಇಷ್ಟಪಡುವುದಿಲ್ಲ. ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳು ಅಥವಾ ಮಕ್ಕಳಿದ್ದರೆ, ಅವುಗಳನ್ನು ಬಳಸುವಾಗ ನೀವು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈರುಳ್ಳಿ-ಬೆಳ್ಳುಳ್ಳಿ ಮ್ಯಾಜಿಕ್: ನಮ್ಮ ಅಡುಗೆ ಮನೆಯಲ್ಲಿ ದಿನಾ ಬಳಸುವ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕಟುವಾದ ವಾಸನೆ ಎಂದರೆ ಹಾವುಗಳಿಗೆ ತೀವ್ರ ಅಲರ್ಜಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ, ಹಾವುಗಳು ಬರಬಹುದಾದ ಜಾಗಗಳಲ್ಲಿ ಹಾಕಿಡಬಹುದು. ಇಲ್ಲದಿದ್ದರೆ, ಇವುಗಳ ರಸವನ್ನು ನೀರಿನೊಂದಿಗೆ ಮಿಕ್ಸ್ ಮಾಡಿ ಗೋಡೆಗಳ ಮೂಲೆ ಹಾಗೂ ಬಾಗಿಲುಗಳ ಹತ್ತಿರ ಸ್ಪ್ರೇ  ಮಾಡಿದರೆ ಹಾವುಗಳು ಆ ಕಡೆ ಸುಳಿಯುವುದೇ ಇಲ್ಲ.

ಹೊಗೆಯ ಪ್ರಯೋಗ: ಹಾವುಗಳಿಗೆ ಹೊಗೆ ಎಂದರೆ ಸಿಕ್ಕಾಪಟ್ಟೆ ಸೆನ್ಸಿಟಿವ್. ನಿಮ್ಮ ಮನೆಯ ಸುತ್ತಮುತ್ತ ಎಲ್ಲಾದರೂ ಹಾವು ಇರಬಹುದು ಎಂಬ ಅನುಮಾನ ಬಂದರೆ, ತಕ್ಷಣ ಸ್ವಲ್ಪ ಒಣಗಿದ ಎಲೆಗಳು ಅಥವಾ ಸಾಂಬ್ರಾಣಿ, ಊದಿನಕಡ್ಡಿಗಳನ್ನು ಹಚ್ಚಿ ಹೊಗೆ ಹಾಕಿ. ಈ ಹೊಗೆಯ ವಾಸನೆಗೆ ಹಾವುಗಳು ತಕ್ಷಣವೇ ಆ ಜಾಗವನ್ನು ಖಾಲಿ ಮಾಡುತ್ತವೆ.

ಪುದೀನಾ ಮತ್ತು ತುಳಸಿ ವಾಸನೆ: ನಿಮ್ಮ ಮನೆಯ ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಪುದೀನಾ ಮತ್ತು ತುಳಸಿ ಗಿಡಗಳನ್ನು ಬೆಳೆಸುವುದರಿಂದ ಹಾವಿನ ಕಾಟ ತಪ್ಪಿಸಬಹುದು. ಈ ಗಿಡಗಳ ಸ್ಟ್ರಾಂಗ್ ವಾಸನೆಯನ್ನು ತಡೆದುಕೊಳ್ಳುವ ಶಕ್ತಿ ಹಾವುಗಳಿಗಿಲ್ಲ. ಇವುಗಳನ್ನು ನೆಡುವುದರಿಂದ ಹಾವುಗಳು ದೂರ ಇರುವುದರ ಜೊತೆಗೆ, ನಿಮ್ಮ ಮನೆಗೂ ಒಂದು ಒಳ್ಳೆ ಫ್ರೆಶ್ ಲುಕ್ ಮತ್ತು ಸುಗಂಧ ಸಿಗುತ್ತದೆ.

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

TAGGED:Snakes will not be able to escape from your home if they smell these things.
Share This Article
Facebook Twitter Copy Link Print
Previous Article Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

Popular Posts

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

You Might Also Like

ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?