newsics.com/ನ್ಯೂಸಿಕ್ಸ್
ಬೆಳಗಾವಿ: ಬೆಳಗಾವಿಯ 12 ವರ್ಷದ ಬಾಲಕಿ ಭಾರತೀಯ ಸಂಸ್ಕೃತಿ ಸಾರುವ ಶಿಶುಗೀತೆ (ರೈಮ್ಸ್) ಒಳಗೊಂಡ ಕವನ ಸಂಕಲನ ರಚಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಆ ಇಂಗ್ಲಿಷ್ ಪುಸ್ತಕವನ್ನು ದೇಶದ ಹೆಸರಾಂತ ಲೇಖಕ ಚೇತನ್ ಭಗತ್ ಅವರು ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ.
ದ್ವಾರಕಾ ನಗರದ ಲಾವಣ್ಯ ಪೃಥ್ವಿರಾಜ್ ಕಮ್ಮಾರ ಎಂಬ ಬಾಲಕಿ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಗರದ ಬಿರ್ಲಾ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ 6ನೇ ತರಗತಿ ಪೂರ್ಣಗೊಂಡಿರುವ ಬಾಲಕಿಯ ತಂದೆ ಪೃಥ್ವಿರಾಜ್ ಬಿಲ್ಡರ್ ಆಯಂಡ್ ಡೆವಲಪರ್ ಆಗಿದ್ದು, ತಾಯಿ ತಿಲೋತ್ತಮ ಅವರು ಗೃಹಿಣಿ.
ಲಾವಣ್ಯ ಭಾರತೀಯ ಸಂಸ್ಕೃತಿ, ವೀರಪುರುಷರು, ಮಹಿಳೆಯರು ಹಾಗೂ ಹಲವು ಮಹನೀಯರ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಶಿಶುಗೀತೆ(ರೈಮ್ಸ್)ಗಳನ್ನು ರಚಿಸಿದ್ದು, ‘ದಿ ಶ್ಯಾಡೋ ಆಫ್ ಇನೋಸೆನ್ಸ್ ಆ್ಯಂಡ್ ಇಮ್ಯಾಜಿನೇಷನ್-ರೈಮ್ಸ್ ಫ್ರಮ್ ಬೆಳಗಾವಿ ಟು ಭಾರತ’ ಎಂಬ ಶೀರ್ಷಿಕೆಯಡಿ ಕವನ ಸಂಕಲನ ರಚಿಸಿದ್ದಾಳೆ. ಈ ಪುಸ್ತಕವನ್ನು ಏಪ್ರಿಲ್ 18 ರಂದು ಮುಂಬೈನಲ್ಲಿ ಚೇತನ್ ಭಗತ್ ಅವರು ಲೋಕಾರ್ಪಣೆಗೊಳಿಸಿ, ಲಾವಣ್ಯಳ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
“ನನ್ನ ಪುಸ್ತಕ 38 ಕವಿತೆಗಳನ್ನು ಒಳಗೊಂಡಿದೆ. ಅದರಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಭಗತ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಂತಹ ವೀರರ ಕುರಿತಾದ ಸರಳ ಕವಿತೆಗಳಿವೆ. ಧಾರ್ಮಿಕ ವಿಚಾರವಾಗಿ ಶಿವ, ಶ್ರೀಕೃಷ್ಣ, ಶ್ರೀರಾಮ ಮತ್ತು ಹನುಮಂತ ಸೇರಿ ದೈವೀ ಶಕ್ತಿಗಳ ಕುರಿತು ಕವನ ಬರೆದಿದ್ದೇನೆ. ನಮ್ಮ ದೇಶದ ಮಾಜಿ ಪ್ರಧಾನಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರೀಜಿ, ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆಯೂ ಕವಿತೆಗಳಿವೆ” ಎಂದು ಹೇಳಿದರು.
“ಛೋಟಾ ಭೀಮ್, ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಯ ಬಗೆಯೂ ಕವನಗಳನ್ನು ಸೇರಿಸಿದ್ದಾರೆ.
ಕವನ ಬರೆಯುವುದು ನನ್ನ ಪ್ಯಾಷನ್. ದೊಡ್ಡವಳಾದ ಮೇಲೆ ನಮ್ಮ ತಂದೆಯ ಬಿಲ್ಡರ್ ವೃತ್ತಿಯನ್ನೇ ಮುಂದುವರಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಲಾವಣ್ಯ ತನ್ನ ಭವಿಷ್ಯದ ಕನಸು ತಿಳಿಸಿದಳು.
Masala dose in sixth place ಜಾಗತಿಕ ಮಟ್ಟದಲ್ಲಿ ಈಗ ಮಸಾಲ ದೋಸೆ ಭಾರೀ ರುಚಿ!