https://youtube.com/shorts/Dd-eFU1bWK0?si=LMJU3zpxmXbcfjrx
Subscribe ನ್ಯೂಸಿಕ್ಸ್ ಕನ್ನಡ
newsics.com
ಪುಣೆ: ಬಾರಾಮತಿ ಬಳಿ ಬುಧವಾರ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಫ್ಲೈಟ್ ಅಟೆಂಡೆಂಟ್ (ಗಗನಸಖಿ) ಪಿಂಕಿ ಮಾಳಿ ಮತ್ತು ಆಕೆಯ ತಂದೆ ಶಿವಕುಮಾರ್ ಮಾಳಿ ನಡುವಿನ ಕೊನೆಯ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದಿದೆ.
ಮುಂಬೈನ ವರ್ಲಿ ನಿವಾಸಿಯಾಗಿದ್ದ ಪಿಂಕಿ ಮಾಳಿ, ಪ್ರಯಾಣಕ್ಕೂ ಮುನ್ನ ತಂದೆಗೆ ಕರೆ ಮಾಡಿ, “ಪಪ್ಪಾ, ನಾನು ಅಜಿತ್ ಪವಾರ್ ಜತೆ ಬಾರಾಮತಿಗೆ ಹೋಗುತ್ತಿದ್ದೇನೆ. ಅವರನ್ನು ಇಳಿಸಿದ ಬಳಿಕ ನಾಂದೇಡಿಗೆ ತೆರಳುತ್ತೇನೆ. ನಾಳೆ ಮಾತಾಡೋಣ’ ಎಂದು ಹೇಳಿದ್ದಾಳೆ. ಆದರೆ ಆ ಕರೆ ಮತ್ತೆ ಬರಲೇ ಇಲ್ಲ.
ಮಗಳ ಸಾವಿನಿಂದ ಕಂಗೆಟ್ಟು ದುಃಖದಿಂದ ಮಾತನಾಡಿದ ಶಿವಕುಮಾರ್ ಮಾಳಿ, “ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಏನು ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟು ತಾಂತ್ರಿಕ ಜ್ಞಾನ ನನಗಿಲ್ಲ. ನಾನು ಸಂಪೂರ್ಣವಾಗಿ ಕುಸಿದಿದ್ದೇನೆ. ಗೌರವಪೂರ್ವಕವಾಗಿ ಅವಳ ಅಂತ್ಯಸಂಸ್ಕಾರ ಮಾಡಲು ಆಕೆಯ ದೇಹ ಸಿಕ್ಕರೆ ಸಾಕು’ ಎಂದು ಹೇಳಿದರು.
ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಈ ದುರ್ಘಟನೆ ಸಂಭವಿಸಿದೆ.
ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ಸಂಸ್ಥೆಗೆ ಸೇರಿದ ಲಿಯರ್ಜೆಟ್–45 (ನೋಂದಣಿ ಸಂಖ್ಯೆ VT-SSK) ವಿಮಾನ ಅಪಘಾತಕ್ಕೀಡಾಯಿತು.
ವಿಮಾನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಳಿ, ಪೈಲಟ್–ಇನ್–ಕಮಾಂಡ್ ಸುಮಿತ್ ಕಪೂರ್ ಹಾಗೂ ಸೆಕೆಂಡ್–ಇನ್–ಕಮಾಂಡ್ ಶಾಂಭವಿ ಪಾಠಕ್ ಇದ್ದರು.
ಬುಧವಾರ ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟ ವಿಮಾನವು 8.45ರ ಸುಮಾರಿಗೆ ರಾಡಾರ್ ಸಂಪರ್ಕ ಕಳೆದುಕೊಂಡಿದ್ದು, 8.50ರ ವೇಳೆಗೆ ಪತನಗೊಂಡಿದೆ. ಫೆಬ್ರವರಿ 5ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪುಣೆ ಜಿಲ್ಲೆಯಲ್ಲಿ ನಾಲ್ಕು ಚುನಾವಣಾ ಸಭೆಗಳಿಗೆ ಅಜಿತ್ ಪವಾರ್ ತೆರಳುತ್ತಿದ್ದರು ಎನ್ನಲಾಗಿದೆ.
ವಿಮಾನ ಇಳಿಯುವ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತ ಸಂಭವಿಸಿದ್ದು, ಮಾಹಿತಿ ದೊರಕುತ್ತಿದ್ದಂತೆ ತುರ್ತು ಸೇವೆಗಳು ಹಾಗೂ ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಘಟನೆಯ ತನಿಖೆಗಾಗಿ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತಂಡವು ದೆಹಲಿಯಿಂದ ಪುಣೆಗೆ ಧಾವಿಸಿದೆ.
ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದು ಹೇಗೆ?
ಬಾಲಿವುಡ್ ಕ್ವೀನ್ನಂತೆ ಮಿಂಚಿದ ಸ್ಯಾಂಡಲ್ ನಟಿ ಶುಭಾ ರಕ್ಷಾ; ಹಿಮದ ನಡುವೆಯೂ ಗ್ಲಾಮರಸ್ ಲುಕ್