newsics.com
ಸಾಗರ(ಶಿವಮೊಗ್ಗ): ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಹೊತ್ತಿ ಉರಿದ ಬೆನ್ನಲ್ಲೇ ಸಾಗರದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಹೊತ್ತಿ ಉರಿದಿದೆ.
ಭಟ್ಕಳದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸಿನಲ್ಲಿ 14 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಹೇಳಲಾಗಿದೆ.
ಭಟ್ಕಳ ಘಟಕದ ಈ ಬಸ್ ಸಾಗರದ ಎಲ್. ಬಿ. ಕಾಲೇಜು ಬಳಿ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಇನ್ನೋವಾ ಕಾರ್ ಖರೀದಿಸಿದ ಬಾಲ ನಟಿ : ಸಾಧನೆ ಅಂದ್ರೆ ಇದು ಎಂದು ಹಾಡಿ ಹೊಗಳಿದ ಅಭಿಮಾನಿಗಳು
ಹಣೆ ಮೇಲೆ ಡಿ ಬಾಸ್ ಹೆಸರನ್ನ ಹಚ್ಚೆ ಹಾಕಿಸಿಕೊಂಡ ಅಭಿಮಾನಿ: ವಿಡಿಯೋ ನೋಡಿ