newsics.com
ಟೀಮ್ ಇಂಡಿಯಾದ ಆಟಗಾರರು ಕನ್ನಡಿಗ ಕೆ.ಎಲ್.ರಾಹುಲ್ ಮತ್ತೊಮ್ಮೆ ತನ್ನ ದೈವಭಕ್ತಿ ಮೆರೆದಿದ್ದಾರೆ. ಮಹಾವಿಷ್ಣುವಿನ ದೇವಸ್ಥಾನಕ್ಕೆ ಆನೆಯೊಂದನ್ನ ದೇಣಿಗೆ ನೀಡಿದ್ದಾರೆ.
ಪುರಾತನ ಶ್ರೀ ಪದ್ಮನಾಭಪುರಂ ಮಹಾವಿಷ್ಣು ಕೀರಮ್ ದೇವಸ್ಥಾನಕ್ಕೆ ಕೆ.ಎಲ್ ರಾಹುಲ್, ಆನೆಯೊಂದನ್ನ ದೇಣಿಗೆ ನೀಡಿದ್ದಾರೆ. ಇದು ಜೀವಂತವಾದ ಆನೆಯಲ್ಲ.ಇದೊಂದು ಯಾಂತ್ರಿಕ ಆನೆ. ಪೇಟಾ ಇಂಡಿಯಾ ಸಂಸ್ಥೆಯಿದ್ಯಲ್ಲ. ಅದ್ರ ಜೊತೆಗೂಡಿ ಯಾಂತ್ರಿಕವಾದ ಆನೆಯನ್ನ ದೇವಸ್ಥಾನಕ್ಕೆ ರಾಹುಲ್ ಉಡುಗೊರೆಯಾಗಿ ನೀಡಿದ್ದಾರೆ. ಕೃಷ್ಣ ಜಯಂತಿಯಂದು ಈ ಆನೆಯನ್ನ ಉಡುಗೊರೆಯಾಗಿ ನೀಡಿದ್ದು ಇದಕ್ಕೆ ಪದ್ಮನಾಭಪುರಂ ಪದ್ಮನಾಭನ್ ಎಂದು ಹೆಸರಿಡಲಾಗಿದೆ. ದೇವರ ಮುಂದಿನ ಉತ್ಸವಗಳಲ್ಲಿ ಜೀವಂತ ಆನೆಯ ಬದಲು ಈ ಯಾಂತ್ರಿಕ ಆನೆಯನ್ನ ದೇವಸ್ಥಾನದ ಆಡಳಿತ ಮಂಡಳಿ ಬಳಸಲಿದೆ.
ಆನೆಯನ್ನ ದೇಣಿಗೆ ನೀಡೋ ಪೆಟಾ ನಿರ್ಧಾರಕ್ಕೆ ಕೈ ಜೋಡಿಸಿ ರಾಹುಲ್ ದೈವಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿ ಮರೆದಿದ್ದಾರೆ. ಧಾರ್ಮಿಕ ಆಚರಣೆಗಳ ವೇಳೆ ಆನೆಗಳು ಕೆರಳಿ ಭಕ್ತರು ಅಸುನೀಗಿದ, ಗಾಯಗೊಂಡ ಸಾಕಷ್ಟು ಪ್ರಕರಣಗಳು ಕೇಳದಲ್ಲಿ ಸಂಭವಿಸಿವೆ. ಇದೇ ವರ್ಷದ ಜನವರಿಯಲ್ಲಿ ಮಲಪ್ಪುರಂನ ತಿರೂರ್ನಲ್ಲಿ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಒಬ್ಬ ಅಸುನೀಗಿದ್ರೆ, 17 ಮಂದಿ ಗಾಯಗೊಂಡಿದ್ರು. ಫೆಬ್ರವರಿಯಲ್ಲಿ 13 2025ರಲ್ಲಿ ಕುರುವಂಗಡ್ನ ಮಣಕುಲಂಗರನ ಭಗವತಿ ದೇವಸ್ಥಾನದ ಹಬ್ಬದ ಸಂದರ್ಭದಲ್ಲಿ ಆನೆ ದಾಳಿಗೆ ಮೂವರು ಭಕ್ತರು ಮರಣ ಹೊಂದಿದ್ರೆ, 30ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ರು. ಯಾಂತ್ರಿಕ ಆನೆಯನ್ನ ದೇವಸ್ಥಾನಗಳು ಬಳಸಿದ್ರೆ ಸಾಂಸ್ಕೃತಿಕ ಆಚರಣೆಯೂ ಉಳಿಯುತ್ತೆ. ಮತ್ತು ಭಕ್ತರಿಗೂ ಯಾವುದೇ ಅಪಾಯವಿಲ್ಲ ಅನ್ನೋದು ಆನೆ ದೇಣಿಗೆ ಹಿಂದಿನ ಉದ್ದೇಶವಾಗಿದೆ.