newsics.com
ಲಕ್ನೋ: ಯಾವುದೇ ಪ್ರಚೋದನೆಯಿಲ್ಲದೆ ಮನುಷ್ಯನನ್ನು ನಾಯಿ ಒಂದು ಬಾರಿಗಿಂತ ಹೆಚ್ಚು ಬಾರಿ ಕಚ್ಚಿದರೆ ಅಂತಹ ನಾಯಿ(ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.
ಯಾವುದೇ ಬೀದಿ ನಾಯಿಯು ಮನುಷ್ಯರಿಗೆ ಒಂದು ಬಾರಿ ಕಚ್ಚಿದರೆ ಅದನ್ನು ಶ್ವಾನಕೇಂದ್ರಕ್ಕೆ ಸೇರಿಸಿ ಅಲ್ಲಿ ಅದಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಅಲ್ಲಿಂದ 10 ದಿನಗಳವರೆಗೆ ಅದನ್ನು ಅಲ್ಲಿಯೇ ಇರಿಸಿಕೊಂಡು ಗಮನಿಸಬೇಕು. 10 ದಿನಗಳ ನಂತರ ಶ್ವಾನಕೇಂದ್ರದಿಂದ ಬಿಡುಗಡೆ ಮಾಡಬೇಕು. ಆಗ ಆ ನಾಯಿಗೆ ಮೈಕ್ರೋ ಚಿಪ್ ಅಳವಡಿಸಬೇಕು. ಆ ನಾಯಿಯು ಮತ್ತೆ ಯಾವುದೇ ಮನುಷ್ಯರನ್ನು ಕಚ್ಚಿದಾಗ ಆ ನಾಯಿಯನ್ನು ಅದೇ ಶ್ವಾನಕೇಂದ್ರಕ್ಕೆ ತಂದು ಆಜೀವ ಪರ್ಯಂತ ಬಿಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ದೆಹಲಿಯಲ್ಲಿ ಬೀದಿನಾಯಿಗಳು ಹೊರವಲಯಗಳಲ್ಲಿ ಆಶ್ರಯ ಕೇಂದ್ರವನ್ನು ತೆರೆಯುವವರೆಗೂ ಮಾತುಕತೆಗಳು ನಡೆದಿದ್ದವು. ಆದರೆ ಬಳಿಕ ನಾಯಿಗಳು ರೇಬಿಸ್ ಚುಚ್ಚು ಮದ್ದು ಹಾಗೂ ಸಂತಾನ ಹರಣ ಚಿಕಿತ್ಸೆ ನೀಡಿ ಹೊರಗೆ ಬಿಡಬಹುದು. ರೇಬಿಸ್ ರೋಗ ಬಂದಿರುವ ನಾಯಿಗಳನ್ನು ಮಾತ್ರ ಕೇಂದ್ರದಲ್ಲಿರಿಸುವಂತೆ ಸೂಚಿಸಲಾಗಿತ್ತು.
https://www.instagram.com/reel/DOsDGsxCUTC/?igsh=d3F6cGNvdGhsNTJp