Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!
ಕರ್ನಾಟಕದೇಶಪ್ರಮುಖವಿದೇಶ

Little Ganesha ready to take off! ವಿಮಾನವೇರಲು ಸಿದ್ಧನಾದ ಪುಟ್ಟ ಗಣಪ! ಮಂಗಳೂರಲ್ಲಿ ತಯಾರಿ, ಕ್ಯಾಲಿಫೋರ್ನಿಯಾದಲ್ಲಿ ಪೂಜೆ!

Share
2 Min Read
SHARE

newsics.com

ಮಂಗಳೂರು: ಇದೇ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬ. ಇಲ್ಲಿ ತಯಾರಾಗುವ ಗಣೇಶ ಮೂರ್ತಿ ಅಮೆರಿಕದಲ್ಲಿ ಪೂಜೆಗೊಳ್ಳಲಿದೆ.

ಮಂಗಳೂರಿನಲ್ಲಿ ತಯಾರಾದ ಗಣಪತಿಯ ಮೂರ್ತಿಯೊಂದು ಸಮುದ್ರವನ್ನು ದಾಟಿ ಅಮೆರಿಕಕ್ಕೆ ತೆರಳಲಿದೆ. ಮಂಗಳೂರಿನ ಮಣ್ಣಗುಡ್ಡದ ರಾಮಚಂದ್ರ ರಾವ್ ಕುಟುಂಬದಿಂದ ತಯಾರಾದ ಈ ಗಣಪತಿಯ ಮೂರ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಶೆರ್ಲೇಕರ್ ಕುಟುಂಬವು ಪೂಜಿಸಲಿದೆ.

ಮಂಗಳೂರಿನ ಮಣ್ಣಗುಡ್ಡದಲ್ಲಿ 96 ವರ್ಷಗಳ ಹಿಂದೆ ರಾಮಚಂದ್ರ ರಾವ್ ಅವರ ತಂದೆ ದಿ. ಮೋಹನ್ ರಾವ್ ಅವರು ಈ ಕಲೆಯನ್ನು ಆರಂಭಿಸಿದ್ದರು. ಈ ಕುಟುಂಬದಲ್ಲಿ ನಾಲ್ಕು ತಲೆಮಾರುಗಳಿಂದ ಮೂರ್ತಿ ತಯಾರಿಕೆಯ ಕಲೆಯು ಮುಂದುವರಿದಿದೆ. ಅವರ ನಾಲ್ವರು ಮಕ್ಕಳು, ಮೊಮ್ಮಕ್ಕಳು ಮತ್ತು ಈಗ ಮರಿಮಕ್ಕಳು ಈ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಮಂಗಳೂರಿನ ಮೂಲದ ಶೆರ್ಲೇಕರ್ ಕುಟುಂಬ ಈಗ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದೆ. ಈ ಕುಟುಂಬವು ಗಣೇಶ ಚತುರ್ಥಿಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತದೆ.

ಕಳೆದ 28 ವರ್ಷಗಳಿಂದ ಅವರು ತಮ್ಮ ಗಣೇಶ ಚತುರ್ಥಿಯ ಪೂಜೆಗಾಗಿ ಮಂಗಳೂರಿನ ಮೋಹನ್ ರಾವ್ ಕುಟುಂಬದಿಂದ ತಯಾರಾದ ಗಣಪತಿಯ ಮೂರ್ತಿಯನ್ನೇ ಬಳಸುತ್ತಿದ್ದಾರೆ.

ಈ ಮೂರ್ತಿಯ ವಿಶೇಷತೆಯೆಂದರೆ, ಇದು ಕೇವಲ ಒಂದು ಅಡಿ ಎತ್ತರದ್ದಾಗಿದ್ದು, ಸುರಕ್ಷಿತವಾಗಿ ಅಮೆರಿಕಕ್ಕೆ ತಲುಪಲು ಕ್ಯಾಬಿನ್ ಬ್ಯಾಗ್ನಲ್ಲಿ ಸಾಗಿಸಲಾಗುತ್ತದೆ. ಈ ಗಣಪತಿ ಮೂರ್ತಿಯು ಫ್ಲೈಟ್ ಏರಿ, ಸಮುದ್ರವನ್ನು ದಾಟಿ, ಕ್ಯಾಲಿಫೋರ್ನಿಯಾದ ಶೆರ್ಲೇಕರ್ ಕುಟುಂಬದ ಮನೆಗೆ ತಲುಪುತ್ತದೆ. ಈ ಬಾರಿ ಆಗಸ್ಟ್ 27ರಂದು ಈ ಮೂರ್ತಿಯು ಅದ್ಧೂರಿಯಾಗಿ ಪೂಜಿಸಲ್ಪಡುತ್ತದೆ.

ಗಣಪತಿ ತಯಾರಕ ರಾಮಚಂದ್ರ ರಾವ್ ಮಾತನಾಡಿ, ‘ಗಣಪತಿಯನ್ನು ಅಮೆರಿಕಕ್ಕೆ ಕಳುಹಿಸುವ ಕಾರ್ಯವನ್ನು ಮೊದಲಿಗೆ ಮಾಡುತ್ತೇವೆ. ಚಿತ್ರಾ ನಕ್ಷತ್ರದಂದು ಮೂರ್ತಿ ತಯಾರಿ ಕೆಲಸ ಆರಂಭಿಸುತ್ತೇವೆ. ಅಮೆರಿಕಕ್ಕೆ ತೆಗೆದುಕೊಂಡು ಹೋಗುವವರು ಸಾಮಾನ್ಯವಾಗಿ ಜುಲೈ ಕೊನೆಯ ವಾರದಿಂದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುತ್ತಾರೆ. 1 ಅಡಿ, 5 ಕೆಜಿಯೊಳಗೆ ಈ ಗಣಪತಿ ಮೂರ್ತಿ ತಯಾರಿಸುತ್ತೇವೆ ಎಂದಿದ್ದಾರೆ.

ಮಂಗಳೂರಿನ ಮಣ್ಣಗುಡ್ಡದಲ್ಲಿ ತಯಾರಾಗುವ ಈ ಗಣಪತಿಯ ಮೂರ್ತಿಯು ಭಗ್ನವಾಗದಂತೆ ಎಚ್ಚರಿಕೆಯಿಂದ ರೂಪಿಸಲಾಗುತ್ತದೆ. ಪರಿಸರ ಸ್ನೇಹಿಯಾದ ವಸ್ತುಗಳನ್ನು ಬಳಸಿ, ಕೈಯಿಂದ ರೂಪಿಸಲಾದ ಈ ಮೂರ್ತಿಗಳು ಭಕ್ತಿಯ ಜತೆಗೆ ಕಲಾತ್ಮಕ ಆಕರ್ಷಣೆಯನ್ನೂ ಹೊಂದಿವೆ.

ಅಮೆರಿಕಕ್ಕೆ ಸಾಗಿಸಲು ತಯಾರಾದ ಮೂರ್ತಿಗಳನ್ನು ವಿಶೇಷವಾಗಿ ಪ್ಯಾಕ್ ಮಾಡಲಾಗುತ್ತದೆ. ಒಂದು ಅಡಿ ಗಾತ್ರದ ಈ‌ ಮೂರ್ತಿಯನ್ನು ವಿಮಾನದ ಕ್ಯಾಬಿನ್ ಬ್ಯಾಗ್‌ಗೆ ಸರಿಹೊಂದುವಂತೆ ರೂಪಿಸಲಾಗಿರುವುದು ವಿಶೇಷ.

ಪರ್ಸನಲ್ ಡಿಟೇಲ್ಸ್ ಸುರಕ್ಷಿತವಾಗಿರಬೇಕಾ?; ಜಸ್ಟ್ ಈ ರೀತಿ ಮಾಡಿ

TAGGED:Little Ganesha ready to take off! Preparations in Mangaloreworship in California!
Share This Article
Facebook Twitter Copy Link Print
Previous Article Vice Presidential Election ಉಪ ರಾಷ್ಟ್ರಪತಿ ಚುನಾವಣೆ: ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಎನ್‌ಡಿಎ ಅಭ್ಯರ್ಥಿ
Next Article missing female students found in Mumbai ಕಾಣೆಯಾಗಿದ್ದ ಶಿರಸಿಯ ಇಬ್ಬರು ವಿದ್ಯಾರ್ಥಿನಿಯರು ಮುಂಬೈನಲ್ಲಿ ಪತ್ತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?