newsics.com
ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಕೇಷಿಕ, ಮಡಿಕೇರಿ ತಹಸೀಲ್ದಾರ್ ಮಾವ ಸಾವಿಗೀಡಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಕುಕ್ಕನೂರು ಪುರುಷೋತ್ತಮ (72) ಎಂಬುವರೇ ಮೃತಪಟ್ಟವರು. ಪುರುಷೋತ್ತಮ ಅವರು ಎಂದಿನಂತೆ ತಮ್ಮ ಕರಡಿಗೋಡಿನ ತೋಟ ವೀಕ್ಷಣೆಗೆ ತೆರಳಿದ್ದರು. ಸುಮಾರು ಸಮಯವಾದರೂ ತಂದೆ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮಗಳು ಸ್ಥಳೀಯ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದು, ತೋಟದಲ್ಲೇ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಪುರುಷೋತ್ತಮ ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಆನೆ ದಾಳಿಯಿಂದಾಗಿ ಮೃತಪಟ್ಟ ಕುಕ್ಕನೂರು ಪುರುಷೋತ್ತಮ ಅವರು ಮಡಿಕೇರಿ ತಾಲೂಕು ತಹಸೀಲ್ದಾರ್ ಪ್ರವೀಣ್ ಅವರ ಮಾವ.
Madenur Manu:ಅತ್ಯಾಚಾರ ಆರೋಪ ಪ್ರಕರಣ: ನಟ ಮಡೆನೂರು ಮನುಗೆ ಜಾಮೀನು ಮಂಜೂರು