newsics.com
ಬೆಂಗಳೂರು: ಪತಿಯೋರ್ವ ಪತ್ನಿ ಕೊಂದು ರುಂಡದ ಜತೆ ಪೊಲೀಸ್ ಠಾಣೆಗೆ ಬಂದ ಘಟನೆ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೆಬ್ಬಗೋಡಿ ನಿವಾಸಿ ಮಾನಸ (26) ಕೊಲೆಯಾದ ಮಹಿಳೆ. ಶಂಕರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅಕ್ರಮ ಸಂಬಂಧದ ಹಿನ್ನೆಲೆ ಪತಿ ಶಂಕರ್ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಕೆಲಸ ಮುಗಿಸಿ ಶಂಕರ್ ಮನೆಗೆ ಬಂದಾಗ ಪತ್ನಿ ಮಾನಸ ಪ್ರಿಯಕರನ ಜತೆ ಇರುವುದನ್ನು ನೋಡಿದ್ದಾನೆ. ಇದರಿಂದ ಆಕ್ರೋಶಗೊಂಡ ಪತಿ ಶಂಕರ್ ನಂತರ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ.
ನಂತರ ನೀನು ಬೇಡ ಹೋಗು ಎಂದು ಪತ್ನಿಯನ್ನು ಪ್ರಿಯಕರನ ಜತೆ ಕಳುಹಿಸಿದ್ದ ಎನ್ನಲಾಗಿದೆ. ಆದರೆ ಪತ್ನಿ ಮಾನಸ ಪದೇ ಪದೇ ಕಿರುಕುಳ ನೀಡುತ್ತಿದ್ದಳು. ಇದರಿಂದ ಬೇಸತ್ತ ಪತಿ ಶಂಕರ್ ಈ ಕೃತ್ಯ ಎಸಗಿದ್ದಾನೆ. ಪತ್ನಿಯನ್ನು ಕೊಂದು ರುಂಡದ ಜತೆ ಬೈಕ್ ನಲ್ಲಿ ಸೂರ್ಯನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮಾನಸ ಮತ್ತು ಶಂಕರ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮಾನಸ ಬಾಳಲ್ಲಿ ಪ್ರಿಯಕರನೋರ್ವ ಎಂಟ್ರಿ ಕೊಟ್ಟಿದ್ದು, ಮಾನಸ ಬಾಳು ದುರಂತ ಅಂತ್ಯ ಕಂಡಿದೆ.
Elephant attack ಕಾಡಾನೆ ದಾಳಿಗೆ ಮಡಿಕೇರಿ ತಹಸೀಲ್ದಾರ್ ಮಾವ ಪುರುಷೋತ್ತಮ್ ಬಲಿ