newsics.com
ಉತ್ತರ ಪ್ರದೇಶ: ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 16 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶ ಲಕ್ನೋದಲ್ಲಿ ನಡೆದಿದೆ.
ಮಾರ್ಚ್ 23 ರ ರಾತ್ರಿ ಅನಾಥಾಶ್ರಮದ ಕೇಂದ್ರದಲ್ಲಿ ಆಹಾರ ಸೇವಿಸಿದ ನಂತರ ಸುಮಾರು 20 ಮಕ್ಕಳು ಅಸ್ವಸ್ಥರಾದಾಗ ಈ ಘಟನೆ ಬೆಳಕಿಗೆ ಬಂದಿದೆ. ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತು. ಇನ್ನು ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 16 ಮಕ್ಕಳು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಮಕ್ಕಳು ಖಿಚಡಿ ಮತ್ತು ಮೊಸರು ಸೇವಿಸಿದ ನಂತರ ಅಸ್ವಸ್ಥರಾದರು. ಪ್ರಾಥಮಿಕವಾಗಿ, ಕೇಂದ್ರದ ನಿರ್ಲಕ್ಷ್ಯವೇ ಅನಾಥ ಮಕ್ಕಳ ದುರಂತ ಸಾವಿಗೆ ಕಾರಣವೆಂದು ತೋರುತ್ತದೆ. ಈ ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ತನಿಖಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
Gold Rate Today Bangalore: ಆಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನದ ಬೆಲೆ ಏರಿಕೆ