newsics.com
ಬೆಂಗಳೂರು: ವಿದ್ಯಾರ್ಥಿಗಳು ಹೆಚ್ಚುವರಿ ಕೃಪಾಕದ ಆಸೆ ಕೈಬಿಟ್ಟು ಪಾಸ್ ಆಗಲು ಕನಿಷ್ಠ 35 ಅಂಕಗಳನ್ನು ತೆಗೆಯಲೇಬೇಕು ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಪುನರುಚ್ಚರಿಸಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳ ಪೂರ್ವ ಸಿದ್ಧತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳೆದ ವರ್ಷ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಪರಿಚಯಿಸಿದ್ದ ಹಿನ್ನೆಲೆಯಲ್ಲಿ ಕೃಪಾಂಕ ಹೆಚ್ಚಳ ಜೊತೆಗೆ ಪಾಸ್ ಆಗಲು ನಿಗದಿಪಡಿಸಿದ್ದ ಕನಿಷ್ಠ 35 ಅಂಕಗಳನ್ನು 25ಕ್ಕೆ ಇಳಿಕೆ ಮಾಡಲಾಗಿತ್ತು. ಈ ಕೃಪಾಕಕ್ಕೆ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವರ್ಷ ಕೃಪಾಕ ಕೈ ಬಿಡಲಾಗಿದೆ. ಕಳೆದ ವರ್ಷದ ಹಿಂದೆ ಅಂದರೆ 2023ರಲ್ಲಿ ನೀಡಲಾಗುತ್ತಿದ್ದ ಶೇಕಡ 10ರ ಕೃಪಾಕದ ಮಾದರಿ ಅನುಸರಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೃಪಾಂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಲು ಶ್ರಮ ವಹಿಸಬೇಕು. ಉತ್ತೀರ್ಣರಾಗಲು ಕನಿಷ್ಠ 35 ಅಂಕ ತೆಗೆಯಲೇಬೇಕು ಎಂದು ಹೇಳಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗೆ ಹಿಜಾಬ್ ಗೆ ಅವಕಾಶ ನೀಡುವ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೇಸ್ ಕೋರ್ಟ್ನಲ್ಲಿದೆ, ಹೀಗಾಗಿ ಅದರ ಬಗ್ಗೆ ನಾನು ಮಾತಾಡಲ್ಲ . ಕೋರ್ಟ್ ಏನು ಹೇಳುತ್ತೋ ಅದನ್ನು ನಾವು ಫಾಲೋ ಮಾಡುತ್ತೇವೆ ಎಂದು ಹೇಳಿದ್ದಾರೆ.
Youtube capital ತುಳಸಿ ಗ್ರಾಮ ದೇಶದ ಯೂಟ್ಯೂಬ್ ರಾಜಧಾನಿ! ಇಲ್ಲಿದ್ದಾರೆ ಸಾವಿರಾರು ಯೂಟ್ಯೂಬರ್ಸ್!
Sourav Ganguly car accident ಸೌರವ್ ಗಂಗೂಲಿ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು
Summer health ಬೇಸಿಗೆಯಲ್ಲಿ ಆರೋಗ್ಯವಾಗಿರಲು ಗರ್ಭಿಣಿಯರು ಏನು ಮಾಡಬಹುದು?