newsics.com
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪವಿತ್ರಾ ಗೌಡ ಅವರ ಮನೆಯಲ್ಲಿ ಸ್ಥಳ ಮಹಜರು ನಡೆಸಲಾಗಿದೆ.
ಪವಿತ್ರಾ ಗೌಡ ಹಾಗೂ ಪವನ್ ಕರೆದುಕೊಂಡು ಹೋಗಿರುವ ಪೊಲೀಸರು, ಆರೋಪಿಗಳ ಮನೆಯಲ್ಲಿ ಸಿಕ್ಕ ಕೆಲವೊಂದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಪವಿತ್ರಾ ಗೌಡ ಅವರು ಕಳೆದ 10 ವರ್ಷದಿಂದ ಆರ್.ಆರ್. ನಗರದ ಮನೆಯಲ್ಲಿ ವಾಸವಾಗಿದ್ದಾರೆ. ಮೂರು ಅಂತಸ್ತಿನ ಡ್ಯೂಪ್ಲೆಕ್ಸ್ ಮನೆಯಲ್ಲಿ ಪವಿತ್ರಾ ಗೌಡ ವಾಸವಾಗಿದ್ದರೆ, ಗ್ರೌಂಡ್ ಫ್ಲೋರ್ನಲ್ಲಿ ಆರೋಪಿ ಪವನ್ ವಾಸ ಮಾಡುತ್ತಿದ್ದ. ಈತ ಪವಿತ್ರಾ ಗೌಡ ಮನೆ ಕೆಲಸದ ಜತೆಗೆ ನಾಯಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ.
ಐಷಾರಾಮಿ ಮನೆಯನ್ನೇ ಪವಿತ್ರಾ ಗೌಡ ಖರೀದಿಸಿದ್ದಾರೆ. ಈ ಮನೆಗೆ ಆಗಾಗ ದರ್ಶನ್ ಬಂದು ಹೋಗುತ್ತಿದ್ದರು. ಆದರೆ ಅಕ್ಕಪಕ್ಕ ಮನೆಯವರ ಜತೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ದರ್ಶನ್ ಬರೋದನ್ನು ನೋಡಿ ನೆರೆ ಮನೆಯವರು ಆ ಮನೆಯಲ್ಲಿ ವಿಜಯಲಕ್ಷ್ಮಿ ಇದ್ದಾರೆ ಎಂದುಕೊಂಡಿದ್ದರಂತೆ.
ಪವಿತ್ರಾ ಗೌಡ ಸಾಮಾನ್ಯವಾಗಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರಿನಲ್ಲಿ ಓಡಾಡುತ್ತಿದ್ದರು. ಪವಿತ್ರಾ ಗೌಡ ಮಗಳು ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ, ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದ ಕಿಚ್ಚ
ನಟ ದರ್ಶನ್ಗೆ ಎದುರಾಗುತ್ತಾ ಮತ್ತಷ್ಟು ಕಂಟಕ? ಗ್ರಹಗತಿ ಬಗ್ಗೆ ಅರ್ಚಕರ ಮಾತು